
ಬೆಂಗಳೂರು(ಡಿ. 21) ಈಕೆಯ ಹೆಸರು ನಿಮ್ಮಿ ಸ್ಟೀಫನ್. ಕೇರಳದ ತ್ರಿವೆಂಡ್ರಂ ನಿವಾಸಿ.. ಮಂಗಳೂರಿನ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವತ್ತು 2019ರ ಜೂನ್ 29ರ ಸಂಜೆ ಆಸ್ಪತ್ರೆಯ ಹಿಂದೆ ಪಾಗಲ್ ಪ್ರೇಮಿ ಯುವತಿಗೆ ಚಾಕುವಿನಿಂದ ಇರಿಯುತ್ತಿದ್ದ.
ಆ ಹುಡುಗಿಯ ಆರ್ತನಾದ ಕೇಳಿ ಕಿಟಕಿಯಿಂದ ನೋಡಿದ ನಿಮ್ಮಿ ತಕ್ಷಣ ಆ್ಯಂಬುಲೆನ್ಸ್ ಚಾಲಕನಿಗೆ ಕರೆಮಾಡಿ ಬರಹೇಳಿದರು. ಘಟನೆ ನಡೆದ ಸ್ಥಳಕ್ಕೆ ಓಡಿಹೋದರು. ಆ ಯುವಕ ಇನ್ನೂ ಇರಿಯುತ್ತಲೇ ಇದ್ದ. ಅವನ ಹತ್ತಿರ ಹೋಗುವ ಧೈರ್ಯ ಯಾರಿಗೂ ಇರಲಿಲ್ಲ. ನಿಮ್ಮಿ ಧೈರ್ಯ ತೆಗೆದುಕೊಂಡು ಮುನ್ನುಗ್ಗಿ ಅವನನ್ನು ಹಿಮ್ಮೆಟ್ಟಿಸಿದರು. ಆಗಲೇ ಆತ 14 ಬಾರಿ ಇರಿದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಹುಡುಗಿಯನ್ನು ತುರ್ತುನಿಗಾ ಘಟಕಕ್ಕೆ ಸೇರಿಸಿದರು ನಿಮ್ಮಿ. ತಿಂಗಳುಗಟ್ಟಲೆ ಚಿಕಿತ್ಸೆ ಬಳಿಕೆ ಆ ಹುಡುಗಿ ಈಗ ಮತ್ತೆ ಕಾಲೇಜಿಗೆ ತೆರಳುತ್ತಿದ್ದಾಳೆ.
40 ಪ್ರಯಾಣಿಕರ ಜೀವ ಉಳಿಸಿದ ತುಕಾರಾಂ
ಕ್ಷೇಮ ಆಸ್ಪತ್ರೆ ಮುಖ್ಯಸ್ಥ ವಿನಯ್ ಹೆಗ್ಡೆ ನಗದು ಪುರಸ್ಕಾರ, ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆ್ ಇಂಡಿಯಾ ಮತ್ತು ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆ್ ಕರ್ನಾಟಕ ನೀಡುವ ರಾಷ್ಟ್ರೀಯ ಮಟ್ಟದ ನೈಟಿಂಗೇಲ್ ಪ್ರಶಸ್ತಿ ನರ್ಸ್ ಅವರಿಗೆ ದೊರೆತಿದೆ.
ಆಯುಧ ಕೈಯಲ್ಲಿರುವ ಉನ್ಮತ್ತ ವ್ಯಕ್ತಿಗಳ ಎದುರಿಗೆ ಹೋಗಲು ಯಾರಾದರೂ ಹೆದರುತ್ತಾರೆ. ಅವರು ಯಾರಿಗೆ ಇರಿಯುತ್ತಾರೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಅದು ಗೊತ್ತಿದ್ದು ಬಹಳ ಜನ ಆ ಯುವಕನ ಹತ್ತಿರ ಹೋಗಲು ಹಿಂಜರಿಯುತ್ತಿದ್ದ ವೇಳೆಯಲ್ಲಿ ನಿಮ್ಮಿ ಮಾತ್ರ ಅಂಜದೆ ಆ ಯುವಕನ ಎದುರಿಗೆ ಹೋಗಿ ಅವನನ್ನು ಹಿಮ್ಮೆಟ್ಟಿಸಿ ಆ ಯುವತಿಯನ್ನು ರಕ್ಷಿಸಿದ್ದಾರೆ. ವೈದ್ಯರೊಬ್ಬರು ವಿಡಿಯೋ ಮಾಡಿದ ಕಾರಣಕ್ಕೆ ನಿಮ್ಮಿ ಸಾಹಸ ಜಗಜ್ಜಾಹೀರಾಗಿದೆ. ನಿಮ್ಮಿ ತೋರಿಸಿದ ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರಿಗೂ ಮಾದರಿ.
ಹೆಸರು: ನಿಮ್ಮಿ ಸ್ಟೀನ್
ಊರು: ಮಂಗಳೂರು
ವೃತ್ತಿ: ನರ್ಸ್
ಸಾಧನೆ: ಪಾಗಲ್ ಪ್ರೇಮಿಯಿಂದ ಯುವತಿಯ ರಕ್ಷಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ