ಪೂರೈಕೆ ಹೆಚ್ಚಳ: ಕೆಲ ತರಕಾರಿ ಬೆಲೆ ಇಳಿಕೆ!

Published : Jan 07, 2021, 07:36 AM IST
ಪೂರೈಕೆ ಹೆಚ್ಚಳ: ಕೆಲ ತರಕಾರಿ ಬೆಲೆ ಇಳಿಕೆ!

ಸಾರಾಂಶ

ಪೂರೈಕೆ ಹೆಚ್ಚಳ: ಇಳಿದ ಕೆಲ ತರಕಾರಿ ಬೆಲೆ| ಉತ್ತಮ ಮಳೆ ಹಿನ್ನೆಲೆ| 50ರ ಒಳಗೆ ಇಳಿದ ಈರುಳ್ಳಿ, ಕ್ಯಾರೆಟ್‌, ಬೀನ್ಸ್‌ ದರ| ನುಗ್ಗೆಕಾಯಿ ದರ ಏರಿಕೆ 200ರೂ| ತೆಂಗಿನ ಕಾಯಿಗೂ ಉತ್ತಮ ಬೆಲೆ

ಬೆಂಗಳೂರು(ಜ.07): ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಆಗುತ್ತಿರುವುದಿಂದ ಈರುಳ್ಳಿ, ಕ್ಯಾರೆಟ್‌, ಬೀನ್ಸ್‌ ಸೇರಿದಂತೆ ಕೆಲ ತರಕಾರಿಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಕಳೆದ ಕೆಲ ತಿಂಗಳ ಹಿಂದೆ ಪೂರೈಕೆ ಕೊರತೆಯಿಂದ ಈರುಳ್ಳಿ, ಬೀನ್ಸ್‌, ಕ್ಯಾರೆಟ್‌ ದರ ಕೇಜಿಗೆ ನೂರರ ಗಡಿ ತಲುಪಿತ್ತು. ಆದರೆ, ಈ ತರಕಾರಿಗಳು ಕೆ.ಜಿ. .50 ಒಳಗೆ ಮಾರಾಟವಾಗುತ್ತಿವೆ. ನವೆಂಬರ್‌ನಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ತರಕಾರಿ ಇಳುವರಿ ಉತ್ತಮವಾಗಿದ್ದು, ಸಾಕಷ್ಟುಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.

ಕೊರೋನಾ ನಂತರ ಉದ್ಯೋಗ ನಷ್ಟಹೊಂದಿದ್ದ ಯುವಜನತೆ ಸಹ ಕೃಷಿಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ಅವರೆಕಾಯಿ, ಬಟಾಣಿ, ಬೀನ್ಸ್‌ ಹೀಗೆ ವಿವಿಧ ತರಕಾರಿಗಳ ಸರಬರಾಜು ಹೆಚ್ಚಾಗಿದೆ. ಜತೆಗೆ ಚಳಿಗಾಲವೂ ಇರುವುದರಿಂದ ತರಕಾರಿ, ಸೊಪ್ಪಿನ ದರದಲ್ಲಿ ಇಳಿಕೆಯಾಗಿದೆ.

ರಾಜ್ಯ ಹಾಗೂ ನೆರೆಯ ರಾಷ್ಟ್ರಗಳಾದ ಮಹಾರಾಷ್ಟ್ರ, ಗುಜರಾತ್‌ನಲ್ಲಿ ಈರುಳ್ಳಿ ಹೊಸ ಬೆಳೆ ಬಂದಿದೆ. ಹೀಗಾಗಿ ಗುಣಮಟ್ಟದ ಈರುಳ್ಳಿ ದರವೂ ಕುಸಿದಿದೆ. ಸಗಟು ದರ ಕೆ.ಜಿ. .22ರಿಂದ

30 ನಿಗದಿಯಾಗಿದ್ದರೆ, ಚಿಲ್ಲರೆ ದರ .40 ಇದೆ. .200 ತ​ಲು​ಪಿದ್ದ ಸಾಂಬಾರು ಈ​ರುಳ್ಳಿ ಇ​ದೀಗ .130-150ಕ್ಕೆ ಖರೀದಿಯಾಗುತ್ತಿದೆ. ಪೋಷಕಾಂಶವುಳ್ಳ ನುಗ್ಗೆಕಾಯಿ ಚಳಿಗಾಲದಲ್ಲಿ ಕಡಿಮೆ. ಆದರೆ, ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಕೆ.ಜಿ. .160ರಿಂದ .200 ಒಳಗಿದೆ. ತೆಂಗಿನಕಾಯಿ ಸಾಧಾರಣ ಗಾತ್ರದ್ದು .25ರಿಂದ 30, ದೊಡ್ಡ ಗಾತ್ರದ್ದು .35-40ಕ್ಕೆ ಮಾರಾಟ ಮಾಡಲಾಗುತ್ತಿದೆ.

ಹಾ​ಪ್‌​ಕಾ​ಮ್ಸ್‌, ತ​ರ​ಕಾ​ರಿ ದರ (​ಕೆ.​ಜಿ.​ಗ​ಳ​ಲ್ಲಿ​)

ಹುರುಳಿಕಾಯಿ 32

ಬೀಟ್ರೂಟ್‌ 36

ಹಾಗಲಕಾಯಿ 37

ಸೋರೆಕಾಯಿ 37

ಸೌತೆಕಾಯಿ 21

ದಪ್ಪ ಮೆಣಸಿನಕಾಯಿ 145

ಎಲೆಕೋಸು 22

ನುಗ್ಗೇಕಾಯಿ 160

ಮೂಲಂಗಿ 30

ಹೀರೇಕಾಯಿ 40

ಪಡವಲಕಾಯಿ 32

ಟೊಮೆಟೋ 20

ಅವರೆಕಾಯಿ 45

ಪುದೀನ 42

ಸಾಂಬಾರ್‌ ಈ​ರು​ಳ್ಳಿ 135

ಬೆಂಡೆ​ಕಾಯಿ 34

ಆ​ಲೂ​ಗಡ್ಡೆ 45

ಈ​ರುಳ್ಳಿ 45

ಮೊಟ್ಟೆಒಂದಕ್ಕೆ 6

ಹಣ್ಣುಗಳು (ಕೆ.ಜಿ.ಗಳಲ್ಲಿ)

ಪಚ್ಚಬಾಳೆ 20

ಚಂದ್ರಬಾಳೆ 60

ರಸಬಾಳೆ 52

ನೇಂದ್ರಬಾಳೆ 35

ಸೀತಾಫಲ 46

ಸೀಬೆ 55

ಅನಾನಸ್‌ 38

ಮೂಸಂಬಿ 90

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?