
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.12): ಇಂದು ಬದುಕಿನಲ್ಲಿ ಸಣ್ಣಪುಟ್ಟ ಸಂಕಷ್ಟಗಳು ಎದುರಾದರೂ ಸಾಕು, ಅದನ್ನು ನಿಭಾಯಿಸಲು ಸಾಧ್ಯವೇ ಇಲ್ಲ ಎಂದು ಎಷ್ಟೋ ಜನರು ತಮ್ಮ ಬದುಕನ್ನೇ ಕೊನೆಗಾಣಿಸಿಕೊಳ್ಳುತ್ತಾರೆ. ಅದರಲ್ಲೂ ಎಲ್ಲವೂ ಸುಲಭವಾಗಿ ಕೈಗೆಟಕಬೇಕು ಎಂದು ಬಯಸುವ ಯುವಜನರಂತು ಚಿಕ್ಕ ಸಮಸ್ಯೆಯನ್ನೂ ನಿಭಾಯಿಸಲಾಗದೆ ಬೇಗ ಆತ್ಮ*ತ್ಯೆ ದಾರಿ ಹಿಡಿಯುತ್ತಾರೆ. ಹೀಗೆ ಆತ್ಮ*ತ್ಯೆ ದಾರಿ ಹಿಡಿಯುವವರಿಗೆ ಇದೊಂದು ಇಂಜೆಕ್ಷನ್ ಸಂಜೀವಿನಿಯಾಗಿ ಅವರ ಜೀವವನ್ನು ಉಳಿಸುತ್ತದೆ. ಯಾವುದು ಆ ಇಂಜೆಕ್ಷನ್, ಎಲ್ಲಿ ಈ ಚಿಕಿತ್ಸೆ ಸಿಗುತ್ತೆ ಎನ್ನುವುದು ಗೊತ್ತಾಗಬೇಕಾದರೆ ನೀವು ಈ ಸ್ಟೋರಿ ನೋಡಲೇ ಬೇಕು.
ಬದುಕು ಸಾಕಷ್ಟು ವೇಗವಾಗಿರುವ ಆಧುನಿಕ ಜಗತ್ತಿನಲ್ಲಿ ಸಣ್ಣ ಸಮಸ್ಯೆ ಬಂದರೂ ಅದನ್ನು ನಿಭಾಯಿಸಲು ಸಾಧ್ಯವಾಗದೆ ಆತ್ಮ*ತ್ಯೆ ದಾರಿ ಹಿಡಿಯುವವರ ಸಂಖ್ಯೆ ಇಂದು ಕಡಿಮೆ ಇಲ್ಲ ಅಲ್ವಾ.? ಆದರೆ ಹೀಗೆ ಆತ್ಮ*ತ್ಯೆಯ ದಾರಿ ಹಿಡಿಯುವವರನ್ನು ಕಳೆದ ಮೂರು ತಿಂಗಳಲ್ಲಿ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆ ಮನೋವೈದ್ಯರ ತಂಡ 20 ಜನರನ್ನು ಆತ್ಮ*ತ್ಯೆಯಿಂದ ಹಿಂದೆ ಸರಿಸಿ ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಅದು ಕೂಡ ಆ ಒಂದು ಇಂಜೆಕ್ಷನ್ ಮೂಲಕ. ಹೌದು ಪದೇ ಪದೇ ಆತ್ಮ*ತ್ಯೆಗೆ ಯತ್ನಿಸುತ್ತಿದ್ದ ಮತ್ತು ಖಿನ್ನತೆಗೆ ಒಳಗಾಗಿ ಆತ್ಮ*ತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿಯಲ್ಲಿದ್ದ 20 ಜನರನ್ನು ಕೊಡಗಿನ ವೈದ್ಯರ ತಂಡ ರಕ್ಷಿಸಿದೆ.
ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ರೂಪೇಶ್ ಮತ್ತು ತಂಡ 20 ಜನರ ಜೀವವನ್ನು ಉಳಿಸಿದೆ. ಅಷ್ಟೇ ಅವರ ಮುಂದೆ ಆತ್ಮ*ತ್ಯೆಗೆ ಮಾಡಿಕೊಳ್ಳುವುದಿಲ್ಲ ಎನ್ನುವಂತೆ ಅವರ ಮನಸ್ಸನ್ನು ಬದಲಾಯಿಸಿದೆ. ಆತ್ಮ*ತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದ ವ್ಯಕ್ತಿಗಳಿಗೆ ಅರಳಿಕೆ ತಜ್ಞರು ಮತ್ತು ಫಿಜಿಷಿಯನ್ ವೈದ್ಯರ ಸಲಹೆ ಮೇರೆಗೆ ಆಪರೇಷನ್ ಥಿಯೇಟರ್ನಲ್ಲಿ ಡ್ರಿಪ್ ಮೂಲಕ ಇಂಜೆಕ್ಷನ್ ಅನ್ನು ವ್ಯಕ್ತಿಯ ದೇಹಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ. ಹೀಗೆ ಇಂಜೆಕ್ಟ್ ಮಾಡಲು ಆರಂಭಿಸಿದ 30 ನಿಮಿಷಗಳಲ್ಲೇ ವ್ಯಕ್ತಿಯು ಆತ್ಮ*ತ್ಯೆಯ ಮನಸ್ಥಿತಿಯಿಂದ ಹಿಂದೆ ಸರಿಯಲು ಆರಂಭಿಸುತ್ತಾನೆ.
ಒಮ್ಮೆ ಈ ಇಂಜೆಕ್ಷನ್ ಮಾಡಿದ ಬಳಿಕ ಎರಡು ವಾರಗಳವರೆಗೆ ಅದು ವ್ಯಕ್ತಿಯನ್ನು ಆತ್ಮ*ತ್ಯೆ ಮಾಡಿಕೊಳ್ಳುವ ಮನಸ್ಥಿತಿಯಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ಆ ವೇಳೆಯಲ್ಲಿ ವೈದ್ಯರು ಮಾತ್ರೆ, ವಿದ್ಯುತ್ ಶಾಕ್ ಮತ್ತು ಕೌನ್ಸಿಂಗ್ ಮೂಲಕ ಸಂಪೂರ್ಣ ಬದಲಾಯಿಸಲಾಗುತ್ತದೆ. ಹೀಗೆ ಮಾಡುವುದಕ್ಕೆ ಬಿಪಿಎಲ್ ಕಾರ್ಡು ಇರುವವ ವ್ಯಕ್ತಿಗಳಿಗಾದರೆ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಎನ್ನುತ್ತಾರೆ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ರೂಪೇಶ್ ಗೋಪಾಲ್. ಅಷ್ಟಕ್ಕೂ ವ್ಯಕ್ತಿಗಳು ಆತ್ಮ*ತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವೇನು ಎಂದು ನೋಡಿದರೆ, ಸಮಸ್ಯೆಗಳು ಏನೇ ಇದ್ದರೂ ಮಾನಸಿಕ ಒತ್ತಡವೇ ಆತ್ಮ*ತ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು.
ಮಾನಸಿಕ ಒತ್ತಡದಿಂದ ಮಿದುಳಿನಲ್ಲಿ ರಾಸಾಯನಿಕ ಬಿಡುಗಡೆಯಾಗುತ್ತದೆ. ಈ ರಾಸಾಯನಿಕ, ವ್ಯಕ್ತಿಯನ್ನು ಆತ್ಮ*ತ್ಯೆಗೆ ಪ್ರಚೋದಿಸುತ್ತದೆ. ಇದು ಆತ್ಮ*ತ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ. ವ್ಯಕ್ತಿ ಆತ್ಮ*ತ್ಯೆಗೆ ಯತ್ನಿಸುತ್ತಿದ್ದಾನೆಂದು ತಿಳಿದರೆ ಇಲ್ಲಿ ಚಿಕಿತ್ಸೆಗೆ ದಾಖಲಿಸಬಹುದು. ಕೆಲವು ವ್ಯಕ್ತಿಗಳು ಪದೇ ಪದೇ ಆತ್ಮ*ತ್ಯೆಗೆ ಯತ್ನಿಸುತ್ತಾರೆ. ಅಂತವರನ್ನು ಕರೆತಂದರೆ ಚಿಕಿತ್ಸೆ ನೀಡಿ ಆತ್ಮ*ತ್ಯೆ ತಡೆಯಬಹುದು. ಅದರಲ್ಲೂ ಇಂದು 20 ರಿಂದ 40 ವಯಸ್ಸಿನ ಒಳಗಿನ ಯುವಜನರೇ ಹೆಚ್ಚು ಆತ್ಮ*ತ್ಯೆಗೆ ಒಳಗಾಗುತ್ತಿದ್ದಾರೆ. ಈ ಚಿಕಿತ್ಸೆ ನೀಡಿದರೆ ಖಂಡಿತಾ ಅವರನ್ನು ಆತ್ಮ*ತ್ಯೆಯಿಂದ ಸಂಪೂರ್ಣ ಹಿಂದೆ ಸರಿಯುವಂತೆ ಮಾಡಬಹುದು ಎನ್ನುತ್ತಾರೆ ಮನೋವೈದ್ಯರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ