
ಬೆಂಗಳೂರು, [ಜ.14]: ಪ್ರಾದೇಶಿಕ ಅಸಮಾನತೆಯ ಕೂಗಿಗೆ ತೇಪೆ ಹಚ್ಚಲು ರಾಜ್ಯ ಮೈತ್ರಿ ಸರ್ಕಾರ ಮುಂದಾಗಿದೆ.
ಪ್ರಾದೇಶಿಕ ಅಸಮಾನತೆಯಿಂದ ತಪ್ಪಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಮೈತ್ರಿ ಸರ್ಕಾರ 9 ಪ್ರಮುಖ ಸರ್ಕಾರಿ ಕಚೇರಿಗಳು ಉತ್ತರಕರ್ನಾಟಕಕ್ಕೆ ಶಿಫ್ಟ್ ಮಾಡಿದೆ.
ಅದರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಜಿಸಿರುವ ಸರ್ಕಾರ, ಉತ್ತರಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮಂಡಳಿ ಸ್ಥಾಪಿಸಿ ಹುಬ್ಬಳ್ಳಿಗೆ ಸ್ಥಳಾಂತರ ಮಾಡಿದೆ.
ಸ್ಥಳಾಂತರಗೊಂಡ ಕಚೇರಿಗಳು ಎಪ್ರೀಲ್ 1 ರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯಾಚರಣೆ ಮಾಡಲಿವೆ.
ಉತ್ತರ ಕರ್ನಾಟಕ್ಕೆ ಪ್ರತಿಯೊಂದರಲ್ಲೂ ಉತ್ತರ ಕರ್ನಾಟಕವನ್ನು ಕಡೆಗಣೆಸುತ್ತಿದೆ ಎಂಬ ಆರೋಪಕ್ಕೆ ರಾಜ್ಯ ಮೈತ್ರಿ ಸರ್ಕಾರ ತುತ್ತಾಗಿತ್ತು. ಈ ಆರೋಪದಿಂದ ಹೊರ ಬರಲು ಕುಮಾರಸ್ವಾಮಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಹಾಗಾದ್ರೆ 9 ಕಚೇರಿಗಳಾವುವು? ಇಲ್ಲಿದೆ ಪಟ್ಟಿ
1 ಕೃಷ್ಣಾ ಭಾಗ್ಯ ಜಲ ನಿಗಮ-ಆಲಮಟ್ಟಿ
2 ಕರ್ನಾಟಕ ನೀರಾವರಿ ನಿಗಮ-ದಾವಣಗೆರೆ
3 ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ-ಬೆಳಗಾವಿ
4 ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ-ಬೆಳಗಾವಿ
5. ಉತ್ತರಕರ್ನಾಟಕ ಭಾಗಕ್ಕೆ ಪ್ರತ್ಯೇಕ ಮಂಡಳಿ ಸ್ಥಾಪಿಸಿ ಹುಬ್ಬಳ್ಳಿಗೆ ಸ್ಥಳಾಂತರ.
6. ಪುರಾತತ್ವ ಸಂಗ್ರಹಾಲಯಗಳೂ ಮತ್ತು ಪರಂಪರೆ ಇಲಾಖೆ-ಹಂಪಿ
7. ಮಾನವ ಹಕ್ಕುಗಳ ಆಯೋಗದ ಓರ್ವ ಸದಸ್ಯರ ಕಚೇರಿ-ಧಾರವಾಡ
8. ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಇಬ್ಬರ ಕಚೇರಿಗಳು ಉತ್ತರ ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿದ್ದು, ಓರ್ವ ಆಯುಕ್ತರ ಕಚೇರಿ ಕಲ್ಬುರ್ಗಿಗೆ ಮತ್ತೊಂದು ಬೆಳಗಾವಿಗೆ ಸ್ಥಳಾಂತರ.
9. ಕರ್ನಾಟಕ ಲೋಕಾಯುಕ್ತ ಕಚೇರಿಯ ಉಪ ಆಯುಕ್ತರ ಒಂದು ಕಚೇರಿ-ಧಾರವಾಡ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ