
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಮಾ.02): ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ 'ಪೆಟ್ರೋಲ್ ಬಂಕ್ ಯೋಜನೆ'ಗೆ ಹಸಿರು ನಿಶಾನೆ ತೋರಿರುವ ಸರ್ಕಾರವು, ಕಾರಾಗೃಹಗಳ ಹೊರಾವರಣದಲ್ಲಿ ವಿದ್ಯುತ್ ಚಾಲಿತವಾಹನಗಳ ಚಾರ್ಜಿಂಗ್ ಘಟಕಗಳ ಸ್ಥಾಪನೆಗೂ ಸೂಚಿಸಿದೆ. ಬಹುನಿರೀಕ್ಷೆಯ ಪೆಟ್ರೋಲ್ ಬಂಕ್ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡುವ ಮೂಲಕ ನಾಡಿನ ಸೆರೆಹಕ್ಕಿ ಗಳ 'ನವೋದ್ಯಮ'ಕ್ಕೆ ಮುನ್ನುಡಿ ಬರೆದಿದೆ. ಈ ಬಂಕ್ಗಳು ಸಂಪೂರ್ಣವಾಗಿ ಕೈದಿಗಳಿಂದ ನಿರ್ವಹಣೆಯಾಗಲಿದ್ದು, ಈ ಯೋಜನೆಯಿಂದ ಇಲಾಖೆಗೆ ಆದಾಯ ಜತೆಗೆ ಕೈದಿಗಳಿಗೆ ಉದ್ಯೋಗ ಸಿಗಲಿದೆ ಎಂಬುದು ಕಾರಾಗೃಹ ಇಲಾಖೆಯ ಆಶಯವಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಹೊರ ಗೆ 10 ಸಾವಿರ ಚದರಡಿಯಲ್ಲಿ ರಾಜ್ಯದ ಮೊದಲ ಕೈದಿಗಳೇ ನಿರ್ವಹಿಸುವ ಪೆಟ್ರೋಲ್ ಬಂಕ್ ಸ್ಥಾಪನೆಯಾಗಲಿದೆ. ಇದಕ್ಕೆ ಎಚ್ಪಿಎಲ್ ಸಹಭಾಗಿತ್ವವಿದೆ. ನಂತರ ಹಂತ ಹಂತವಾಗಿ ಇನ್ನು 4 ಕಡೆ ಬಂಕ್ ಸ್ಥಾಪನೆಯಾಗಲಿವೆ ಎಂದು ಹಿರಿಯ ಅಧಿಕಾರಿ ಗಳು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.
ಬಂಕ್ಗಳ ಸ್ಥಾಪನೆಗೆ ಪ್ರಸ್ತಾಪ: ಈಗಾಗಲೇ ಕಾರಾಗೃಹಗಳಲ್ಲಿ ಸಿದ್ದ ಉಡುಪು, ಬೇಕರಿ ತಿನಿಸುಗಳು, ಸ್ಟೇಷನರಿ ವಸ್ತುಗಳು, ಗೃಹೋಪಯೋಗಿ ಬಳಕೆ ವಸ್ತುಗಳು ಮಾತ್ರವಲ್ಲದೆ ತರಕಾರಿ ಬೆಳೆದು ಸಹ ಮಾರುಕಟ್ಟೆಗೆ ಕೈದಿಗಳು ತಂದಿದ್ದಾರೆ. ಗುಡಿ ಕೈಗಾರಿಕೆ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಕೈದಿಗಳನ್ನು ಪೆಟ್ರೋಲ್ ಬಂಕ್ ನಿರ್ವಹಣೆಗೆ ಸಹ ಬಳಸಿಕೊಳ್ಳಲು ಇಲಾಖೆ ಯೋಜಿಸಿತ್ತು. ಅಲ್ಲದೆ ನೆರೆಯ ತೆಲಂಗಾಣ ರಾಜ್ಯವು ಕೈದಿಗಳಿಂದಲೇ ಪೆಟ್ರೋಲ್ ಬಂಕ್ ಉದ್ದಿಮೆ ಆರಂಭಿಸಿ ಯಶಸ್ಸು ಕಂಡಿತ್ತು. ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾದ ಅಧಿಕಾರಿಗಳು, ತೆಲಂಗಾಣದಪೆಟ್ರೋಲ್ ಬಂಕ್ಗಳಿಗೆ ತೆರಳಿ ಅವಲೋಕಿಸಿ ಬಂದು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು. ಎರಡೂವರೆ ವರ್ಷಗಳ ಬಳಿಕ ಅಳೆದು ತೂಗಿ ಕೊನೆಗೆ ಪೆಟ್ರೋಲ್ ಬಂಕ್ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೇಗೆ ನಿರ್ವಹಣೆ?: ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ, ಕಲುಬರಗಿ ಹಾಗೂ ವಿಜಯಪುರ ಸೇರಿ 5 ಕೇಂದ್ರ ಕಾರಾಗೃಹಗಳಲ್ಲಿ ಪೆಟ್ರೋಲ್ ಬಂಕ್ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಬಂದೀಖಾನೆ ಇಲಾಖೆ ಪ್ರಸ್ತಾವನೆ ಸಲ್ಲಿ ಸಿತ್ತು. ತಮಗೆ ಸೇರಿದ ಅನುಪಯುಕ್ತದ ಜಾಗವನ್ನು ವಾಣಿಜ್ಯಕ್ಕೆ ಬಳಸಿಕೊಳ್ಳಲು ಇಲಾಖೆ ಮುಂದಾಗಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 10 ಸಾವಿರ ಚ.ಅಡಿ ಹಾಗೂ ಇನ್ನುಳಿದೆಡೆ ಎರಡು ಎಕರೆ ಪ್ರದೇಶವನ್ನು ಬಂಕ್ ಸ್ಥಾಪನೆಗೆ ಗುರುತಿಸಲಾಗಿದೆ.
ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಸಿದ್ದರಾಮಯ್ಯ ಸರ್ಕಾರ: ಬಿ.ವೈ.ವಿಜಯೇಂದ್ರ
ಚಾರ್ಜಿಂಗ್ ಘಟಕಗಳ ಸ್ಥಾಪನೆ: ವಿದ್ಯುತ ವಾದ ಬೆನ್ನಲ್ಲೇ ಕಾರಾಗೃಹಗಳಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಘಟಕ ಸ್ಥಾಪನೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಜೈಲಿನ ಖಾಲಿ ಪ್ರದೇಶಗಳಲ್ಲಿ ವಿದ್ಯುತ್ ಜಾರ್ಜಿಂಗ್ ಘಟಕ ಸ್ಥಾಪಿಸುವಂತೆ ಸರ್ಕಾರ ಸೂಚಿಸಿದೆ. ಅಂತೆಯೇ ಘಟಕ ಆರಂಭವಾಗಿದ್ದು, ಇವುಗಳನ್ನು ಕೂಡ ಕೈದಿಗಳ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ