
ಕಾರವಾರ: ದೇಶ ಕಾಯುವ ವೀರ ಯೋಧರಿಗೆ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ನೇರ ವ್ಯವಸ್ಥೆ ಕಲ್ಪಿಸಲಾಗಿದೆ. ಸೇವೆಯಲ್ಲಿರುವ ಯೋಧರು ಮಾತ್ರವಲ್ಲ, ನಿವೃತ್ತ ಯೋಧರು ಸಹ ನೇರವಾಗಿ ಆತ್ಮಲಿಂಗ ದರ್ಶನ ಮಾಡಬಹುದಾಗಿದ್ದು, ಇಂಥದ್ದೊಂದು ವ್ಯವಸ್ಥೆಯನ್ನು ದೇವಾಲಯದ ಆಡಳಿತ ಮಂಡಳಿ ವರ್ಷದ ಹಿಂದೆಯೇ ಜಾರಿಗೆ ತಂದಿದೆ. ದೇವಾಲಯದ ಪ್ರವೇಶ
ದ್ವಾರದಲ್ಲಿ ದೇವರ ದರ್ಶನಕ್ಕೆ ನಿವೃತ್ತ, ಕರ್ತವ್ಯದಲ್ಲಿರುವ ಸೈನಿಕರಿಗೆ ಪ್ರಾಶಸ್ತ್ಯ ಎಂಬ ಫಲಕ ಹಾಕಲಾಗಿದೆ.
ಸೈನಿಕರು, ದೇವಸ್ಥಾನದ ಕೌಂಟರ್ನಲ್ಲಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿದರೆ ಸಾಕು. ಆಡಳಿತ ಮಂಡಳಿಯ ಸದಸ್ಯರೇ ಅವರನ್ನು ಗೌರವಪೂರ್ವಕವಾಗಿ ಕರೆದುಕೊಂಡು ಹೋಗಿನೇರವಾಗಿ ಆತ್ಮಲಿಂಗ ದರ್ಶನ ಹಾಗೂ ಪೂಜೆಗೆ ಅವಕಾಶ ಮಾಡಿಕೊಡುತ್ತಾರೆ. ಮಹಾಬಲೇಶ್ವರ ದೇವಾಲಯ ರಾಮಚಂದ್ರಾಪುರ ಮಠದಆಡಳಿತಕ್ಕೊಳಪಟ್ಟಿದ್ದು, ರಾಘವೇಶ್ವರ ಶ್ರೀಗಳ ಮಾರ್ಗದರ್ಶನದಂತೆ ದೇವಾಲಯದ
ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಈ ಕ್ರಮ ಕೈಗೊಂಡಿದ್ದಾರೆ.
ಮಳೆ, ಚಳಿ, ಬಿಸಿಲೆನ್ನದೇ ಯೋಧರು ಗಡಿಯಲ್ಲಿ ನಿಂತು ದೇಶವನ್ನು ಕಾಯುತ್ತಾರೆ. ಅವರು ಪ್ರಾಣದ ಹಂಗನ್ನು ತೊರೆದು ದೇಶ ಕಾಯುತ್ತಿರುವ ಕಾರಣ ನಾವು ನೆಮ್ಮದಿಯಿಂದ ಇರುವಂತಾಗಿದೆ. ಸೈನಿಕರು ಸರದಿಯಲ್ಲಿ ನಿಂತು ಕಾಯುವುದು ಸರಿಯಲ್ಲ. ಅವರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಚಿಂತನೆಯಿಂದಾಗಿ ಈ ವ್ಯವಸ್ಥೆ ಜಾರಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ