ತಾಳ್ಮೆ ಪರೀಕ್ಷಿಸಬೇಡಿ: ಬಿಜೆಪಿ ನಾಯಕನಿಗೆ ಸ್ಪೀಕರ್‌ ಎಚ್ಚರಿಕೆ!

Published : Dec 20, 2018, 12:03 PM IST
ತಾಳ್ಮೆ ಪರೀಕ್ಷಿಸಬೇಡಿ: ಬಿಜೆಪಿ ನಾಯಕನಿಗೆ  ಸ್ಪೀಕರ್‌ ಎಚ್ಚರಿಕೆ!

ಸಾರಾಂಶ

‘ಸದನ ನಡೆಸೋದು ಹೇಗೆ ಎಂಬುದು ನನಗೆ ಗೊತ್ತು. ನನ್ನನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ..!’- ರಮೇಶ್ ಕುಮಾರ್ ಎಚ್ಚರಿಕೆ.

‘ಸದನ ನಡೆಸೋದು ಹೇಗೆ ಎಂಬುದು ನನಗೆ ಗೊತ್ತು. ನನ್ನನ್ನು ನಿಯಂತ್ರಿಸಲು ಪ್ರಯತ್ನಿಸಬೇಡಿ..!’

ಇದು ಬಿಜೆಪಿ ಸದಸ್ಯ ರೇಣುಕಾಚಾರ್ಯಗೆ ಸ್ಪೀಕರ್‌ ರಮೇಶ್‌ಕುಮಾರ್‌ ನೀಡಿದ ಖಡಕ್‌ ಎಚ್ಚರಿಕೆ

ಬರದ ಕುರಿತು ಚರ್ಚೆ ನಡೆಯುತ್ತಿದ್ದಾಗ ರೇಣುಕಾಚಾರ್ಯ ಎದ್ದು ನಿಂತು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹೇಳಲು ಆರಂಭಿಸಿದರು. ಅದಕ್ಕೆ ಸ್ಪೀಕರ್‌, ನೀವು ಬರೀ ಸಚಿವರು ಹೇಳಿದ ಉತ್ತರಕ್ಕೆ ಸ್ಪಷ್ಟನೆ ಕೇಳುವುದಿದ್ದರೆ ಮಾತ್ರ ಕೇಳಿ. ಅದು ಬಿಟ್ಟು ಭಾಷಣ ಮಾಡಬೇಡಿ ಎಂದು ಎರಡ್ಮೂರು ಬಾರಿ ಹೇಳಿದರು. ಆದರೂ ರೇಣುಕಾಚಾರ್ಯ ಮಾತ್ರ ತಮ್ಮ ಮಾತನ್ನು ಮುಂದುವರಿಸಿದರು.

ಇದರಿಂದ ಗರಂ ಆದ ಸ್ಪೀಕರ್‌ ರಮೇಶಕುಮಾರ್‌, ಈ ಸದನದಲ್ಲಿ ಎಲ್ಲ ಸದಸ್ಯರು ಸಮಾನರು. ಸಂದೇಹಗಳಿದ್ದರೆ ಸ್ಪಷ್ಟನೆ ಕೇಳಿ ಎಂದರೆ ಭಾಷಣ ಮಾಡುತ್ತೀರಾ? ಈ ಸದನವನ್ನು ಹೇಗೆ ನಡೆಸಬೇಕು ಎಂಬುದು ನನಗೆ ಗೊತ್ತಿದೆ. ನನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆ ಪ್ರಯತ್ನವನ್ನು ಮಾಡಬೇಡಿ. ನನ್ನ ತಾಳ್ಮೆ ಪರೀಕ್ಷಿಸಬೇಡಿ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಬಳಿಕ ರೇಣುಕಾಚಾರ್ಯ, ನನಗೆ ಅನುಭವ ಕಡಿಮೆ. ನೀವು ಮಾರ್ಗದರ್ಶನ ಮಾಡಿ. ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಡಿ. ಮುಜುಗರ ಮಾಡಬೇಡಿ ಎಂದು ಕೇಳಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್
ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!