ಬಿಬಿಎಂಪಿ ಚುನಾವಣೆ ಮುಂದೂಡಲು ಆಗ್ರಹಿಸಿ ಸಿಎಂಗೆ ಪತ್ರ

Suvarna News   | Asianet News
Published : Dec 29, 2020, 09:42 AM IST
ಬಿಬಿಎಂಪಿ ಚುನಾವಣೆ ಮುಂದೂಡಲು ಆಗ್ರಹಿಸಿ ಸಿಎಂಗೆ ಪತ್ರ

ಸಾರಾಂಶ

ಪಾಲಿಕೆಯ ಆರ್ಥಿಕ ಪರಿ​ಸ್ಥಿತಿ ಸುಧಾ​ರಿ​ಸುವ ವರೆಗೆ ಬಿಬಿಎಂಪಿ ಚುನಾ​ವಣೆ ನಡೆ​ಸು​ವುದು ಬೇಡ ಎಂದು ಸಾಮಾ​ಜಿಕ ಕಾರ್ಯ​ಕರ್ತ ಎಸ್‌. ಅಮ​ರೇಶ್‌ ಎಂಬು​ವರು ಮುಖ್ಯಮಂತ್ರಿ ಯಡಿ​ಯೂ​ರಪ್ಪಗೆ ಪತ್ರ ಬರೆ​ದಿ​ದ್ದಾರೆ.

ಬೆಂಗಳೂರು(ಡಿ.29): ಬಿಬಿಎಂಪಿ ಸುಮಾರು 22 ಸಾವಿರ ಕೋಟಿ ರು. ಕಾಮಗಾರಿಗಳ ಬಾಕಿ ಮೊತ್ತ ಪಾವತಿಸಬೇಕಿದೆ. ವಿವಿಧ ಬ್ಯಾಂಕ್‌ಗಳಲ್ಲಿ ಸಾಲವಿದ್ದು, ಸಂಪನ್ಮೂಲ ಕ್ರೋಢೀಕರಣ ಕೊರತೆ ಇದೆ. ಹೀಗಾಗಿ, ಪಾಲಿಕೆಯ ಆರ್ಥಿಕ ಪರಿ​ಸ್ಥಿತಿ ಸುಧಾ​ರಿ​ಸುವ ವರೆಗೆ ಬಿಬಿಎಂಪಿ ಚುನಾ​ವಣೆ ನಡೆ​ಸು​ವುದು ಬೇಡ ಎಂದು ಸಾಮಾ​ಜಿಕ ಕಾರ್ಯ​ಕರ್ತ ಎಸ್‌. ಅಮ​ರೇಶ್‌ ಎಂಬು​ವರು ಮುಖ್ಯಮಂತ್ರಿ ಯಡಿ​ಯೂ​ರಪ್ಪಗೆ ಪತ್ರ ಬರೆ​ದಿ​ದ್ದಾರೆ.

ಪಾಲಿ​ಕೆ​ಯಲ್ಲಿ ಆರ್ಥಿಕ ಶಿಸ್ತು ಕಾಪಾ​ಡಿ​ಕೊ​ಳ್ಳ​ಬೇ​ಕಾ​ದರೆ ಹಾಗೂ ಈಗ ಇರುವ ಪರಿ​ಸ್ಥಿತಿ ಸುಧಾ​ರಿ​ಸುವ ವರೆಗೆ ಚುನಾ​ವಣೆ ಮುಂದೂ​ಡು​ವುದು ಉತ್ತಮ. ಇಲ್ಲ​ವಾ​ದರೆ ಈಗಿರುವ ಪಾಲಿ​ಕೆಯ ಆರ್ಥಿಕ ಪರಿ​ಸ್ಥಿ​ತಿ​ಯಲ್ಲಿ ಪಾಲಿಕೆ ಸದ​ಸ್ಯರ ಒತ್ತ​ಡಕ್ಕೆ ಮಣಿದು ಅಧಿ​ಕಾರ ನಡೆ​ಸ​ಬೇ​ಕಾದ ಪರಿ​ಸ್ಥಿತಿ ನಿರ್ಮಾ​ಣ​ವಾ​ಗ​ಲಿದೆ. ಪಾಲಿ​ಕೆಯ ಆರ್ಥಿಕ ಪರಿ​ಸ್ಥಿತಿ ಮತ್ತಷ್ಟುಶೋಚ​ನಿಯ ಸ್ಥಿತಿಗೆ ತಲು​ಪುವ ಸಾಧ್ಯತೆ ಇದೆ.

ಶಾಲೆ ಆರಂಭಕ್ಕೆ ಪಾಲಿಕೆ ಸಿದ್ಧತೆ: ಥರ್ಮಲ್‌ ಸ್ಕ್ಯಾನರ್‌ ವಿತರಣೆ

ಪಾಲಿ​ಕೆ​ಯಲ್ಲಿ 22 ಸಾವಿ​ರ ಕೋಟಿ ರು.ಗಳಿಗೂ ಅಧಿಕ ಮೊತ್ತ ಕಾಮಗಾರಿಗಳ ಬಾಕಿ ಬಿಲ್‌ ಪಾವತಿಸಬೇಕಿದೆ. ಅಲ್ಲದೆ ಗುತ್ತಿ​ಗೆ​ದಾ​ರ​ರಿಗೆ ಕೋಟ್ಯಂತರ ರು. ಬಾಕಿ ಉಳಿ​ಸಿ​ಕೊಂಡಿದ್ದು, 700 ಕೋಟಿ ರು.ಗಳಿಗಿಂತ ಅಧಿಕ ಸಾಲ ಇದೆ. ಹೀಗಾಗಿ, ಅಧಿ​ಕಾ​ರಿ​ಗಳು ಯಾವುದೇ ಸದ​ಸ್ಯರ ಹಸ್ತ​ಕ್ಷೇಪ ಇಲ್ಲದೆ ಕಾರ್ಯನಿರ್ವ​ಹಿ​ಸಲು ಅವ​ಕಾಶ ಮಾಡಿ​ಕೊ​ಡುವ ನಿಟ್ಟಿ​ನಲ್ಲಿ ಚುನಾ​ವಣೆ ಮುಂದೂ​ಡು​ವುದು ಉತ್ತಮ ಎಂದು ಒತ್ತಾಯಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!
Cockroach janata party: ಬೆಂಗಳೂರಿನಲ್ಲಿಂದು 'ಜಿರಳೆ'ಗಳ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಭಾಗಿ!