
ಬೆಂಗಳೂರು (ಜು.3): ರಾಮನಗರದಲ್ಲಿ ನಡೆದ ರೀತಿಯಲ್ಲೇ ಬೆಂಗಳೂರಿನ ಗುರಪ್ಪನಪಾಳ್ಯ, ಜಯನಗರ, ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲೂ ಎಸ್ಐಆರ್ ಅರ್ಜಿ ತುಂಬುವ ವೇಳೆ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಜನರನ್ನು ಒಗ್ಗೂಡಿಸಿ ಫಾರ್ಮ್ ತುಂಬಲಾಗಿದೆ. ಇನ್ನು ಕುಣಿಗಲ್ನ ಬಡಾವಣೆಯೊಂದರಲ್ಲಿ ಬಿಎಲ್ಒಗಳು ಇಲ್ಲದೇ ಮಹಿಳೆಯರು ಸಾಮೂಹಿಕವಾಗಿ ಎಸ್ಐಆರ್ ಅರ್ಜಿ ತುಂಬಿದ್ದಾರೆ. ಮತ್ತೊಂದೆಡೆ ತೀರ್ಥಹಳ್ಳಿ ಸಮೀಪದ ಗಾರ್ಡರಗದ್ದೆಯಲ್ಲಿ ಮತದಾರರಿಗೆ ನ್ಯಾಯಬೆಲೆ ಅಂಗಡಿಗೆ ಬರುವಂತೆ ಪೋಸ್ಟರ್ ಅಂಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು, ಆಗುಂಬೆ ಭಾಗದಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ ಒಂದೇ ಕಡೆ ಸೇರಿದಲ್ಲಿ ಅನುಕೂಲ ಆಗಬಹುದು ಎಂಬ ಕಾರಣಕ್ಕೆ ಕೆಲವು ಸಾರ್ವಜನಿಕರು ಈ ಪೋಸ್ಟರ್ ಹಾಕಿದ್ದರು. ಇದರಲ್ಲಿ ಬಿಎಲ್ಒಗಳಿಂದ ಯಾವುದೇ ರೀತಿಯ ಕರ್ತವ್ಯಚ್ಯುತಿ ಆಗಿಲ್ಲ ಎಂದಿದ್ದಾರೆ.
ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಬಿಎಲ್ಓಗಳೇ ಮನೆ-ಮನೆಗೆ ಹೋಗಿ ಗಣತಿ ನಮೂನೆ ನೀಡಬೇಕು. ಯಾರೇ ಆಗಲಿ ಕಲ್ಯಾಣ ಮಂಟಪ ಮತ್ತಿತರ ಕಡೆ ಮಾಡುವಂತಿಲ್ಲ. ಶಾಸಕರು ಹೇಳಿದರು ಎಂದು ಕಲ್ಯಾಣ ಮಂಟಪ ಮತ್ತಿತರೆ ಕಡೆ ವಿತರಣೆ ಆಗಬಾರದು. ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಬೇಕಾದರೆ ಬಿಎಲ್ಎಗಳು ಜನರಿಂದ ಸಂಗ್ರಹಿಸಿ ಬಿಎಲ್ಓಗಳಿಗೆ ನೀಡಲು ಅವಕಾಶವಿದೆ.
ಡಿ.ಕೆ.ಶಿವಕುಮಾರ್, ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ