ಕಂಡಲ್ಲಿ ಕಸ ಬಿಸಾಕುವವರ ವಿಡಿಯೋ ಪಾಲಿಕೆಗೆ ಕಳಿಸಿದವರಿಗೆ 250 ರು. ಬಹುಮಾನ!

Kannadaprabha News, Ravi Janekal |   | Kannada Prabha
Published : Nov 04, 2025, 05:54 AM IST
share video of littering dumping waste earn rs 250 GBA new initiative

ಸಾರಾಂಶ

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಡೆಯಲು, ಘನತ್ಯಾಜ್ಯ ನಿರ್ವಹಣಾ ಕಂಪನಿಯು ಹೊಸ ಯೋಜನೆಯೊಂದನ್ನು ಪರಿಗಣಿಸುತ್ತಿದೆ. ಇದರ ಅಡಿಯಲ್ಲಿ, ಕಸ ಎಸೆಯುವವರ ವಿಡಿಯೋ ಮಾಡಿ ಕಳುಹಿಸಿದವರಿಗೆ 250 ರೂ. ಬಹುಮಾನ ನೀಡಲಾಗುವುದು. ಈ ಪ್ರಸ್ತಾಪವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

 ಬೆಂಗಳೂರು (ನ.4): ಸಾರ್ವಜನಿಕ ಸ್ಥಳಗಳು, ಎಲ್ಲೆಂದರಲ್ಲೇ ಕಸ ಹಾಕುವವರನ್ನು ಪತ್ತೆ ಮಾಡಿ ಅವರ ಮನೆ ಮುಂದೆಯೇ ಕಸ ಸುರಿದು ದಂಡ ಪ್ರಯೋಗ ನಡೆಯುತ್ತಿರುವ ನಡುವೆ, ಎಲ್ಲೆಂದರಲ್ಲೇ ಕಸ ಸುರಿಯುವುದನ್ನು ವಿಡಿಯೋ ಮಾಡಿ ಸಲ್ಲಿಸಿದವರಿಗೆ ತಲಾ 250 ರು. ಬಹುಮಾನ ನೀಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯುಎಂಎಲ್) ಚಿಂತನೆ ನಡೆಸಿದೆ.

ವಿಡಿಯೋ ಮಾಡುವುದು ಹೇಗೆ?

ಯಾರಾದರೂ ಕಸ ಎಸೆಯುತ್ತಿದ್ದರೆ ಅವರ ಗುರುತು ಪತ್ತೆಯಾಗುವಂತೆ ವಿಡಿಯೋ ಮಾಡಿ, ಅದನ್ನು ಘನತ್ಯಾಜ್ಯ ನಿರ್ವಹಣಾ ಕಂಪನಿಯ ನಂಬರ್‌ಗೆ ವಾಟ್ಸ್‌ಆ್ಯಪ್ ಮಾಡಿದರೆ ಅದಕ್ಕೆ ಪ್ರತಿಯಾಗಿ 250 ರು. ಬಹುಮಾನ ನೀಡಲಾಗುತ್ತದೆ. ಈ ಹಣವನ್ನು ಕಸ ಸುರಿಯುವವರಿಂದಲೇ ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ.

ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ: 

ಜಾಲತಾಣಗಳಲ್ಲಿ ಈ ವಿಷಯ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ, ಗಂಭೀರ, ಹಾಸ್ಯಭರಿತ ಪ್ರತಿಕ್ರಿಯೆಗಳು ಬಂದಿದೆ.

‘ನಾನು ಕೆಲಸಕ್ಕೆ ರಾಜಿನಾಮೆ ನೀಡಿ ಬನಶಂಕರಿಯಲ್ಲಿ ಕ್ಯಾಮೆರಾ ಹಿಡಿದು ನಿಲ್ಲುತ್ತೇನೆ. ನಿತ್ಯ 2,000 ರು. ಗಳಿಕೆ ಗ್ಯಾರಂಟಿ’ ಎಂದು ನಾಯಕ ಎಂಬುವರು ಎಕ್ಸ್‌ನಲ್ಲಿ ಕಮೆಂಟ್ ಮಾಡಿದ್ದಾರೆ.

‘ಇದೊಂದು ಒಳ್ಳೆಯ ಕ್ರಮ. ಸರ್ಕಾರವೇ ಎಲ್ಲವನ್ನು ಮಾಡಲಾಗದು. ನಗರವನ್ನು ಸ್ವಚ್ಛವಾಗಿಡುವುದು ಪಾಲಿಕೆಯಷ್ಟೇ ಜನರ ಜವಾಬ್ದಾರಿಯು ಆಗಿರುತ್ತದೆ. ಸರ್ಕಾರ-ನಾಗರಿಕ ನಡುವಿನ ಈ ಸಹಭಾಗಿತ್ವವು ನಗರದಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಲಿ’ ಎಂದು ಪ್ರಸನ್ನ ಹೇಳಿದ್ದಾರೆ.

‘ಕಸ ಹಾಕುವವರಿಗೆ ದಂಡ ವಿಧಿಸುವುದೇನೋ ಸರಿ. ಆದರೆ, ಕಸವನ್ನು ಸಂಗ್ರಹಿಸದ, ರಸ್ತೆಯನ್ನು ಸ್ವಚ್ಛವಾಗಿರಿಸದ ಜಿಬಿಎ ಅವರಿಗೆ ಏನು ಮಾಡುವುದು?’ ಎಂದು ನಗರದ ಮತ್ತೊಬ್ಬ ನಿವಾಸಿ ಪ್ರಶ್ನಿಸಿದ್ದಾರೆ.

ಇದೊಂದು ಒಳ್ಳೆಯ ಉಪಾಯ:

‘ಇದು ಒಳ್ಳೆಯ ಉಪಕ್ರಮವೇ ಆಗಿದೆ. ಇದೇ ರೀತಿ ಲಂಚ ಪಡೆಯುವ ಭ್ರಷ್ಟ ಬಿಡಿಎ, ಜಿಬಿಎ, ಪೊಲೀಸ್, ಆರ್‌ಟಿಒ, ತಹಸೀಲ್ದಾರ್ ಕಚೇರಿ, ಸಬ್ ರಜಿಸ್ಟ್ರಾರ್ ಕಚೇರಿ ಸೇರಿದಂತೆ ಎಲ್ಲ ಸಿಬ್ಬಂದಿಯ ವಿಡಿಯೋ ಮಾಡಿಕೊಳ್ಳಬಾರದೇಕೇ? ಈ ಬಗ್ಗೆ ಸಿಎಂ ಮತ್ತು ಡಿಸಿಎಂ ಕರೆ ನೀಡಲಿ’ ಎಂದು ಸತೀಶ್ ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ಸಮಸ್ಯೆಯನ್ನು ಪರಿಹರಿಸಲು ಹುಡುಕಿರುವ ಪರಿಹಾರ ಕ್ರಮವೇ ಸಮಸ್ಯೆಯಾಗಬಹುದಾದ ‘ಕೋಬ್ರಾ ಎಫೆಕ್ಟ್’ಗೆ ಕಾರಣವಾಗಬಾರದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್