ಮಳೆಯಲ್ಲೇ ಹಂಪಿ ವೀಕ್ಷಿಸಿದ G-20 ರಾಷ್ಟ್ರಗಳ ಪ್ರತಿನಿಧಿಗಳು!

Published : Jul 15, 2023, 05:45 AM IST
ಮಳೆಯಲ್ಲೇ ಹಂಪಿ ವೀಕ್ಷಿಸಿದ  G-20 ರಾಷ್ಟ್ರಗಳ ಪ್ರತಿನಿಧಿಗಳು!

ಸಾರಾಂಶ

ಜಿ-20 ರಾಷ್ಟ್ರಗಳ ಹಾಗೂ ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಮಳೆಯಲ್ಲೇ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದರು.

ಹೊಸಪೇಟೆ (ವಿಜಯನಗರ) (ಜು.15) ಜಿ-20 ರಾಷ್ಟ್ರಗಳ ಹಾಗೂ ಆಹ್ವಾನಿತ ರಾಷ್ಟ್ರಗಳ ಪ್ರತಿನಿಧಿಗಳು ಮಳೆಯಲ್ಲೇ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದರು. ಹಂಪಿಯಲ್ಲಿ ಜಿ-20 ರಾಷ್ಟ್ರಗಳ ಶೆರ್ಪಾ ಸಭೆಯ ಎರಡನೇ ದಿನವಾದ ಶುಕ್ರವಾರ ಸಂಜೆ ದೇಶ-ವಿದೇಶಿ ಪ್ರತಿನಿಧಿಗಳು ಸ್ಮಾರಕಗಳ ವೀಕ್ಷಣೆಗೆ ಸಂಜೆ ತೆರಳುತ್ತಿದ್ದಾಗ ಮಳೆ ಆರಂಭವಾಯಿತು. ಮಳೆಯಲ್ಲೇ ಸ್ಮಾರಕಗಳನ್ನು ವೀಕ್ಷಿಸಿದ ಪ್ರತಿನಿಧಿಗಳು, ಹಂಪಿ ಸ್ಮಾರಕಗಳು ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ವೀಕ್ಷಿಸಬಹುದು ಎಂಬ ಸಂದೇಶ ನೀಡಿದರು.

ಯಾವ್ಯಾವ ಸ್ಮಾರಕಗಳ ವೀಕ್ಷಣೆ?:

ಹಂಪಿಯ ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ಕಮಲ ಮಹಲ್‌, ಆನೆಲಾಯ ಸ್ಮಾರಕಗಳನ್ನು ಮಳೆಯಲ್ಲೇ ಪ್ರತಿನಿಧಿಗಳು ವೀಕ್ಷಿಸಿದರು. ಕೆಲವು ಪ್ರತಿನಿಧಿಗಳು ಭಾರತೀಯ ಸಂಪ್ರದಾಯದಂತೆ ಕುರ್ತಾಗಳನ್ನು ಧರಿಸಿದ್ದರು. ಪ್ರತಿನಿಧಿಗಳಿಗೆ ಭಾರತೀಯ ಸಂಪ್ರದಾಯದಂತೆ ಸ್ವಾಗತ ಕೋರಲಾಯಿತು. ಮಹಾನವಮಿ ದಿಬ್ಬದ ಬಳಿ ರಾಜರ ಕಾಲದ ಸೈನಿಕರಂತೆ ಹಂಪಿ ಗೈಡ್‌ಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸ್ವಾಗತ ಕೋರಿದರು. ಮಳೆಯಲ್ಲೇ ದಿಬ್ಬ ಏರಿದ ಪ್ರತಿನಿಧಿಗಳು ಮಳೆಯಲ್ಲೇ ಛತ್ರಿಗಳನ್ನು ಹಿಡಿದು ಸ್ಮಾರಕ ವೀಕ್ಷಿಸಿದರು. ಮಹಾನವಮಿ ದಿಬ್ಬದ ಕಲ್ಲು, ಉಬ್ಬು ಶಿಲ್ಪಗಳನ್ನು ಕಂಡು ಸಂತಸಪಟ್ಟರು.

 

Hampi G20 summit: ಹಂಪಿ ಸಾಮ್ರಾಜ್ಯದ ಇತಿಹಾಸ ಮೆಲುಕು ಹಾಕಿದ ಜೋಶಿ

ಜಿ-20 ತಂಡದಿಂದ ಮೊರೇರೆ ಬೆಟ್ಟವೀಕ್ಷಣೆ

 ಗಂಗಾವತಿ: ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಡಾ.ಎನ್‌ ಕೆ ಪಾಠಕ, ನಿರ್ದೇಶಕ ಡಾ.ಜುಲ್ಫೇಕರ್‌ ಅಲಿ, ದೆಹಲಿ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಡಾ. ಪ್ರವೀಣ್‌ ಸಿಂಗ್‌, ಧಾರವಾಡ ವೃತ್ತದ ಸಹಾಯಕ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಡಾ.ಎಚ್‌.ಆರ್‌. ದೇಸಾಯಿ ಗಂಗಾವತಿ ತಾಲೂಕಿನ ಬೃಹತ್‌ ಶಿಲಾಯುಗದ ನೆಲೆ ಹಿರೇಬೆಬೆಣಕಲ್‌ ಮೋರೇರ ಗುಡ್ಡ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ ಗುಡ್ಲಾನೂರ,ವೀರೇಶ ಅಂಗಡಿ,ಪಂಪಾಪತಿ ಸೇರಿದಂತೆ ಇತರರು ಇದ್ದರು. 

ಗಿನ್ನಿಸ್ ಬುಕ್ ದಾಖಲೆಗೆ ಸೇರಿದ ಲಂಬಾಣಿ ಕಸೂತಿ ಕಲೆ: ಜಿ.20 ಸಭೆಯಲ್ಲಿ ಪ್ರಮಾಪತ್ರ ಸ್ವೀಕಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್