ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ 20 ಸಾವಿರ ನೋಂದಣಿ!

Published : Jan 25, 2020, 02:22 PM ISTUpdated : Jan 25, 2020, 02:24 PM IST
ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ 20 ಸಾವಿರ ನೋಂದಣಿ!

ಸಾರಾಂಶ

ಕಲಬುರಗಿ ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ 20 ಸಾವಿರ ನೋಂದಣಿ| ಮೈಸೂರಿನ 13500 ಪ್ರತಿನಿಧಿಗಳ ದಾಖಲೆ ಮೀರಿ ನೋಂದಣಿ| ಸಿಲನಾಡಿನಲ್ಲಿ ಫೆ.5ರಿಂದ ನಡೆಯುವ 85ನೇ ಸಮ್ಮೇಳನ

ಶೇಷಮೂರ್ತಿ ಅವಧಾನಿ

ಕಲಬುರಗಿ[ಜ.25]: ಬಿಸಿಲನಾಡು ಕಲಬುರಗಿಯಲ್ಲಿ ಫೆ.5ರಿಂದ 7ರವರೆಗೆ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಜ್ಯದ ಎಲ್ಲ ಮೂಲೆಗಳಿಂದ ಸಾಹಿತ್ಯಾಸಕ್ತರು ಮುಗಿಬಿದ್ದಿದ್ದು ದಾಖಲೆಯ 20,284 ಮಂದಿ ಪ್ರತಿನಿಧಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಜ.14ಕ್ಕೆ ನೋಂದಣಿ ಮಾಡಲು ಕೊನೆಯ ದಿನವಾಗಿತ್ತು. ಅಂತಿಮವಾಗಿ ನೋಂದಣಿಯಾದವರಲ್ಲಿ 13,561 ಪುರುಷರು, 5, 291 ಮಹಿಳೆಯರು ಸೇರಿದ್ದಾರೆ.

ಸಾಹಿತ್ಯ ಸಮ್ಮೇಳನದ ಪ್ರತನಿಧಿಗಳ ಸಂಖ್ಯೆ 20 ಸಾವಿರದ ಗಡಿ ದಾಟಿರುವುದು ಇದೇ ಮೊದಲಾಗಿದೆ. ಕಸಾಪ ಮೂಲಗಳಿಂದ ಕನ್ನಡಪ್ರಭಕ್ಕೆ ಲಭ್ಯ ದಾಖಲೆಗಳ ಪ್ರಕಾರ, ಕಳೆದ ವರ್ಷ ಧಾರವಾಡದಲ್ಲಿ ನಡೆದ 84ನೇ ಸಾಹಿತ್ಯ ಸಮ್ಮೇಳನದಲ್ಲಿ 13,500 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡದ್ದೇ ಅತಿ ದೊಡ್ಡ ಸಂಖ್ಯೆಯಾಗಿತ್ತು. ಆತಿಥೇಯ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 2,494 ಪ್ರತಿನಿಧಿಗಳ ನೋಂದಣಿಯಾಗಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದೂ ನೋಂದಣಿ ಆಗಿಲ್ಲ. ಅದೇ ರೀತಿ ಕರಾವಳಿ ಭಾಗದ ಇನ್ನೊಂದು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಜನ ಮಾತ್ರ ಹೆಸರು ನೋಂದಾಯಿಸಿದ್ದಾರೆ.

ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನ: 85ನೇ ನುಡಿಜಾತ್ರೆಗೆ ಕಾಣದ 58ರ ಸಂಭ್ರಮ

ಏನಿದು ಯೋಜನೆ?

ಸಮ್ಮೇಳನದ ಮೂರು ದಿನವೂ ಪಾಲ್ಗೊಳ್ಳುವವರಿಗಾಗಿ ಮುಂಗಡ ನೊಂದಣಿಗಾಗಿ ರೂಪಿಸಿರುವ ಯೋಜನೆ ಇದು. ಆಸಕ್ತರು ನಿಗದಿತ ಶುಲ್ಕ .250 ಭರಿಸಿ ಹೆಸರು ನೋಂದಣಿ ಮಾಡಿರಬೇಕು. ನೋಂದಾಯಿತರು ಸರ್ಕಾರಿ ನೌಕರರಾಗಿದ್ದರೆ ಅವರಿಗೆ ಓಓಡಿ ಸವಲತ್ತು ಕೊಡಲಾಗುತ್ತದೆ. ಸಮ್ಮೇಳನದಲ್ಲಿ ವಸತಿ(ಕಲಬುರಗಿಯವರಿಗೆ ವಸತಿ ವ್ಯವಸ್ಥೆ ಇಲ್ಲ) ಊಟದ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳು ಸಿಗಲಿವೆ.

ಜಿಲ್ಲಾವಾರು ನೋಂದಾಯಿತರು

ಕಲಬುರಗಿ-2,494, ಮೈಸೂರು-1174, ಉತ್ತರ ಕನ್ನಡ-15, ರಾಯಚೂರು-1400, ಯಾದಗಿರಿ-980, ಬೆಂಗಳೂರು ಗ್ರಾಮಾಂತರ-200, ರಾಮನಗರ-500, ಕೋಲಾರ-100, ಚಿತ್ರದುರ್ಗ-600, ಚಿಕ್ಕಬಳ್ಳಾಪುರ-371, ತುಮಕೂರು- 1500, ದಾವಣಗೆರೆ-600, ಶಿವಮೊಗ್ಗ-540, ಗದಗ-688, ಕೊಪ್ಪಳ-834, ಬಳ್ಳಾರಿ-700, ಮೈಸೂರು-1174, ಚಾಮರಾಜ ನಗರ-460, ಮಂಡ್ಯ-800, ಹಾಸನ-800, ಕೊಡಗು-55, ಚಿಕ್ಕಮಗಳೂರು-500, ಉಡುಪಿ- 55, ಬೆಳಗಾವಿ-200, ವಿಜಯಪುರ-700, ಬಾಗಲಕೋಟೆ-886, ಹುಬ್ಬಳ್ಳಿ- 500, ಹಾವೇರಿ-800

 

ಕಲಬುರಗಿ: 85ನೇ ಸಾಹಿತ್ಯ ಸಮ್ಮೇಳನಕ್ಕೆ ವಸತಿ ಸೌಲಭ್ಯದ್ದೇ ಚಿಂತೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ