ರೇಪ್ ಮಾಡಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಮೂರ್ನಾಲ್ಕು ಜನರಾದ್ರೂ ಬೇಕು: ಮಾಜಿ ಶಾಸಕ ಬಯ್ಯಾಪುರ ಕೀಳು ಹೇಳಿಕೆ ವೈರಲ್

Published : Nov 21, 2023, 04:58 AM ISTUpdated : Nov 21, 2023, 09:37 AM IST
ರೇಪ್ ಮಾಡಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಮೂರ್ನಾಲ್ಕು ಜನರಾದ್ರೂ ಬೇಕು: ಮಾಜಿ ಶಾಸಕ ಬಯ್ಯಾಪುರ ಕೀಳು ಹೇಳಿಕೆ ವೈರಲ್

ಸಾರಾಂಶ

 ‘ಕೇವಲ ಒಬ್ಬ ವ್ಯಕ್ತಿಯಿಂದ ಮಹಿಳೆಯ ರೇಪ್‌ ಮಾಡಲು ಸಾಧ್ಯವಿಲ್ಲ, ಮೂರ್ನಾಲ್ಕು ಜನರಾದರೂ ಬೇಕಾಗುತ್ತದೆ’ ಎಂಬುದಾಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆನ್ನಲಾಗಿದ್ದು ಈ ಬಗ್ಗೆ ಆಡಿಯೋ ವೈರಲ್‌ ಆಗಿದೆ.

ಕುಷ್ಟಗಿ (ನ.21): ‘ಕೇವಲ ಒಬ್ಬ ವ್ಯಕ್ತಿಯಿಂದ ಮಹಿಳೆಯ ರೇಪ್‌ ಮಾಡಲು ಸಾಧ್ಯವಿಲ್ಲ, ಮೂರ್ನಾಲ್ಕು ಜನರಾದರೂ ಬೇಕಾಗುತ್ತದೆ’ ಎಂಬುದಾಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆನ್ನಲಾಗಿದ್ದು ಈ ಬಗ್ಗೆ ಆಡಿಯೋ ವೈರಲ್‌ ಆಗಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ ಕಳೆದ ತಿಂಗಳು ಅತ್ಯಾಚಾರದ ಘಟನೆ ನಡೆದಿತ್ತು. ಕಾಂಗ್ರೆಸ್‌ ಮುಖಂಡ, ಬಯ್ಯಾಪುರ ಅವರ ಆಪ್ತನ ಹೆಸರು ಇದರಲ್ಲಿ ಕೇಳಿ ಬಂದಿದ್ದು, ಈ ಕುರಿತು ದೂರು ದಾಖಲಾಗಿದ್ದರೂ ಪೊಲೀಸ್ ಅಧಿಕಾರಿಗಳು ಆರೋಪಿ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಉದ್ಯಮಿ ಮನೆ ದರೋಡೆಗೆ ಬಂದೋರು ಕಳ್ಳತನದ ಜತೆಗೆ ಮನೆಯೊಡತಿಯ ಸಾಮೂಹಿಕ ಅತ್ಯಾಚಾರ ಮಾಡಿದ್ರು!

ಈ ಮಧ್ಯೆ, ಸಂತ್ರಸ್ತೆಯ ಮಾವ ನ್ಯಾಯ ಒದಗಿಸಿಕೊಡುವಂತೆ ಸಹಾಯ ಕೋರಿ ಬಯ್ಯಾಪುರಗೆ ಕರೆ ಮಾಡಿದ್ದರು. ಈ ವೇಳೆ, ಬಯ್ಯಾಪುರ ಅವರು, ಸಂತ್ರಸ್ತೆಯ ಮಾವನ ಬಳಿ ಮಾತನಾಡುತ್ತಾ, ಕೇವಲ ಓರ್ವ ವ್ಯಕ್ತಿಯಿಂದ ರೇಪ್‌ ಮಾಡಲು ಸಾಧ್ಯವಿಲ್ಲ, ಮೂರ್ನಾಲ್ಕು ಜನರಾದರೂ ಬೇಕಾಗುತ್ತದೆ. ಬ್ರಹ್ಮನ ಹತ್ತಿರವೂ ಒಬ್ಬನಿಂದ ಅತ್ಯಾಚಾರ ಮಾಡಲಾಗದು. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುತ್ತದೆ. ಈಗ ರೇಪ್‌ ಕುರಿತು ವಿಚಾರ ಪ್ರಸ್ತಾಪಿಸಿದರೆ, ನಿಮ್ಮ ಗ್ರಾಮದ ಮಹಿಳೆಯರೇ ಅದನ್ನು ಪ್ರಸ್ತಾಪಿಸಿ ಮುಜುಗರ ಮಾಡುತ್ತಾರೆ ಎಂದಿದ್ದು, ಈ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್