ಸೀಡಿ ಗ್ಯಾಂಗ್‌ಗೆ ಕನಕಪುರ ಉದ್ಯಮಿ ರಕ್ಷಣೆ, ಆತಿಥ್ಯ?

Published : Mar 24, 2021, 07:51 AM IST
ಸೀಡಿ ಗ್ಯಾಂಗ್‌ಗೆ ಕನಕಪುರ ಉದ್ಯಮಿ ರಕ್ಷಣೆ, ಆತಿಥ್ಯ?

ಸಾರಾಂಶ

ಸೀಡಿ ಗ್ಯಾಂಗ್‌ಗೆ ಕನಕಪುರ ಉದ್ಯಮಿ ರಕ್ಷಣೆ, ಆತಿಥ್ಯ?| ಪ್ರಕರಣ ಬಯಲಾಗುತ್ತಿದ್ದಂತೆ ಉದ್ಯಮಿ ನಾಪತ್ತೆ| ಹೊರರಾಜ್ಯದಲ್ಲಿದ್ದುಕೊಂಡೇ ಎಲ್ಲ ರೀತಿ ನೆರವು

ಬೆಂಗಳೂರು(ಮಾ.24): ಮಾಜಿ ಸಚಿವರ ಸಿ.ಡಿ. ಪ್ರಕರಣದಲ್ಲಿ ಎಸ್‌ಐಟಿ ಬಲೆಗೆ ಸಿಲುಕದೆ ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿರುವ ವಿವಾದಿತ ಯುವತಿ ಹಾಗೂ ಸಿ.ಡಿ. ಸ್ಫೋಟದ ತಂಡಕ್ಕೆ ಆತಿಥ್ಯದ ಹೊಣೆಯನ್ನು ರಾಮನಗರ ಜಿಲ್ಲೆ ಕನಕಪುರ ಮೂಲದ ಗ್ರಾನೈಟ್‌ ಉದ್ಯಮಿಯೊಬ್ಬ ಹೊತ್ತುಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಲೈಂಗಿಕ ವಿವಾದ ಬಯಲಾದ ಬಳಿಕ ಗ್ರಾನೈಟ್‌ ಉದ್ಯಮಿ, ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಶಿವಕುಮಾರ್‌ ಅಲಿಯಾಸ್‌ ಕೇಶವ್‌ ಸಹ ನಾಪತ್ತೆಯಾಗಿದ್ದಾನೆ. ಸಿ.ಡಿ. ಸ್ಫೋಟದ ಮಾಸ್ಟರ್‌ ಮೈಂಡ್‌ ಎನ್ನಲಾದ ನರೇಶ್‌ಗೌಡನಿಗೆ ಹಣಕಾಸು ನೆರವು ನೀಡಿದ ಶಂಕೆ ಮೇರೆಗೆ ಉದ್ಯಮಿ ಮನೆ ಮೇಲೆ ಎಸ್‌ಐಟಿಯು ದಾಳಿ ಕೂಡ ನಡೆಸಿತ್ತು. ಈಗ ಹೊರ ರಾಜ್ಯದಲ್ಲಿದ್ದುಕೊಂಡೇ ನರೇಶ್‌ ತಂಡಕ್ಕೆ ಗ್ರಾನೈಟ್‌ ಉದ್ಯಮಿ ನೆರವು ಮುಂದುವರೆಸಿದ್ದಾನೆ. ಆತಿಥ್ಯದ ಉಸ್ತುವಾರಿಗೆ ತನ್ನ ಕಾರು ಚಾಲಕ ಪರಶಿವಮೂರ್ತಿ ಎಂಬಾತನನ್ನು ನಿಯೋಜಿಸಿದ್ದಾನೆ ಎನ್ನಲಾಗುತ್ತಿದೆ.

ನಗದು ರೂಪದಲ್ಲೇ ವ್ಯವಹಾರ:

ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ನರೇಶ್‌ಗೌಡ ತಂಡ ಹಾಗೂ ಆತನಿಗೆ ಆಶ್ರಯದಾತರು ಹಣಕಾಸು ವ್ಯವಹಾರವನ್ನು ನಗದು ರೂಪದಲ್ಲಿ ನಡೆಸಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ. ಎಟಿಎಂ ಕಾರ್ಡ್‌ ಬಳಸಿದರೆ ಪೊಲೀಸರಿಗೆ ಮಾಹಿತಿ ಸಿಗಬಹುದು ಎಂಬ ಆತಂಕದಿಂದ ಜಾಗ್ರತೆ ವಹಿಸಿರುವ ಆರೋಪಿಗಳು, ತಮ್ಮ ಸಾರಿಗೆ ಹಾಗೂ ವಸತಿ, ಖರ್ಚು- ವೆಚ್ಚಗಳಿಗೆ ನಗದು ರೂಪದಲ್ಲಿ ವ್ಯಯಿಸುತ್ತಿದ್ದಾರೆ. ಸಿ.ಡಿ. ಸ್ಫೋಟದ ಬಳಿಕ ತಮಗೆ ತೊಂದರೆ ಎದುರಾಗಬಹುದು ಎಂದು ಅಂದಾಜಿಸಿಯೇ ಪೂರ್ವಯೋಜಿತವಾಗಿ ಹಣಕಾಸು ವ್ಯವಸ್ಥೆಯನ್ನು ಅವರು ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!
CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ