ಒಂದು ದಿನದ ವೇತನ CRPFಗೆ: ರಾಜ್ಯದ IPS ಅಧಿಕಾರಿಗಳ ನಿರ್ಧಾರ

Published : Feb 18, 2019, 12:05 PM ISTUpdated : Feb 18, 2019, 12:17 PM IST
ಒಂದು ದಿನದ ವೇತನ CRPFಗೆ: ರಾಜ್ಯದ IPS ಅಧಿಕಾರಿಗಳ ನಿರ್ಧಾರ

ಸಾರಾಂಶ

CRPF ಯೋಧರ, ಕುಟುಂಬಗಳ ಬೆಂಬಲಕ್ಕೆ ನಿಂತ ರಾಜ್ಯದ IPS ಅಧಿಕಾರಿಗಳು ಪುಲ್ವಾಮಾದಲ್ಲಿ ಉಗ್ರರ ದಾಳಿಗೆ 44 ಜವಾನರು ಹುತಾತ್ಮ; 70ಕ್ಕೂ ಯೋಧರಿಗೆ ಗಾಯ   

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ  ಪುಲ್ವಾಮಾದಲ್ಲಿ ಉಗ್ರರ ಕೌರ್ಯಕ್ಕೆ 44 ಮಂದಿ CRPF ಜವಾನರು ಬಲಿಯಾಗಿದ್ದಾರೆ.  ಒಂದೆಡೆ ಉಗ್ರರ ಹುಟ್ಟಡಗಿಸಲು ಸರ್ಕಾರ ದಿಟ್ಟ ಹೆಜ್ಜೆ ಇಡಬೇಕೆಂದು ಭಾರತೀಯರು ಆಗ್ರಹಿಸುತ್ತಿದ್ದರೆ, ಇನ್ನೊಂದೆಡೆ ಹುತಾತ್ಮರ ಕುಟುಂಬಗಳ ಬೆನ್ನಿಗೆ ಇಡೀಯ ದೇಶವೇ ನಿಂತಿದೆ.

ಈಗ ಕರ್ನಾಟಕದ IPS ಅಧಿಕಾರಿಗಳು ಕೂಡಾ CRPF ಯೋಧರ ನೆರವಿಗೆ ಬಂದಿದ್ದಾರೆ. ಉಗ್ರರ ಭೀಬತ್ಸ ಕೃತ್ಯವನ್ನು ಕಟುವಾಗಿ ಖಂಡಿಸಿರುವ IPS ಅಧಿಕಾರಿಗಳ ಸಂಘವು, ತಾವು ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ CRPF ಯೋಧರು ಹಾಗೂ ಅವರ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ  ಎಂದು ಹೇಳಿದೆ.  

ಇಂದಿನ ಕನ್ನಡಪ್ರಭ ಓದಿ: http://kpepaper.asianetnews.com/

ಇದೇ ಸಂದರ್ಭದಲ್ಲಿ, ತಮ್ಮ ಒಂದು ದಿನದ ಸಂಬಳವನ್ನು CRPF ಶ್ರೇಯೋಭಿವೃದ್ಧಿ ಫಂಡ್ ಗೆ ನೀಡಲು IPS ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕಳೆದ ಗುರುವಾರ (ಫೆ.14)ರಂದು ಪುಲ್ವಾಮದಲ್ಲಿ CRPF ಯೋಧರ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿ 44 ಮಂದಿಯನ್ನು ಬಲಿಪಡೆದಿದ್ದಾರೆ. 70ಕ್ಕೂ ಅಧಿಕ ಮಂದಿ ಜವಾನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ವೀರ ಯೋಧರಿಗೆ ನೆರವು ನೀಡಬಯಸುವವರು ಇಲ್ಲಿಗೆ ಭೇಟಿ ನೀಡಿ: ಭಾರತ್ ಕೆ ವೀರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌