ಮದರಸಾಗಳು ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ: ಪ್ರಮೋದ್ ಮುತಾಲಿಕ್ ಕಿಡಿ

Published : Mar 10, 2024, 10:12 PM IST
ಮದರಸಾಗಳು ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ: ಪ್ರಮೋದ್ ಮುತಾಲಿಕ್ ಕಿಡಿ

ಸಾರಾಂಶ

ಮದರಸಾಗಳು ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಗಳು ಆಗಿವೆ. ಈ ದೇಶದಲ್ಲಿ ಮದರಸಾದಿಂದ ಬಂದವರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ (ಮಾ.10): ಮದರಸಾಗಳು ಭಯೋತ್ಪಾದಕರನ್ನು ತಯಾರು ಮಾಡುವ ಕಾರ್ಖಾನೆಗಳು ಆಗಿವೆ. ಈ ದೇಶದಲ್ಲಿ ಮದರಸಾದಿಂದ ಬಂದವರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ವಿಚಾರ ಸಂಬಂಧ ಬಾಗಲಕೋಟೆಯ ಕಲಾದಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಪ್ಪಾಣಿ ಬಾರ್ಡರ್ ನಲ್ಲಿ ಸಾವಿರಾರು ಜನರಿಗೆ ಭಯೋತ್ಪಾದನೆ ತರಬೇತಿ ನೀಡ್ತಿರೋ ಮದರಸಾ ಇದೆ. ಹೀಗಾಗಿ ನಿಪ್ಪಾಣಿ ಶ್ರೀರಾಮ ಮಂದಿರ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಪತ್ರಗಳು ಬಂದಿವೆ. ಬಾಂಬ್ ಬ್ಲಾಸ್ಟ್‌ನಿಂದ ಮಂದಿರದ ಒಂದು ಕಲ್ಲು ಕೂಡ ಅಲುಗಾಡಿಸೋಕೆ ಆಗೊಲ್ಲ. ನಿಮ್ಮ ನಾಟಕ ನಡೆಯೋದಿಲ್ಲ. ಈ ರೀತಿ ಬೆದರಿಸೋದು ಬಿಡಿ, ಎದುರು ಬಂದು ಧೈರ್ಯ ತೋರಿಸಿ ಎಂದು ಸವಾಲು ಹಾಕಿದರು.

ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕದ ನಂ.1 ಸಂಸದ ಅಂದ್ರೆ ಪ್ರತಾಪ ಸಿಂಹ ಪ್ರಮೋದ್ ಮುತಾಲಿಕ್

ಕೇಂದ್ರದಲ್ಲಿ ಸಶಕ್ತ ನಾಯಕತ್ವ ಇದೆ. ಮದರಸಾಗಳನ್ನು ಬ್ಯಾನ್ ಮಾಡಬೇಕು. ಮದರಸಾಗಳಲ್ಲಿ ಕುರಾನ್ ಅರೆದು ಕುಡಿಸ್ತಾರೆ. ಕುರಾನ್‌ನಲ್ಲಿ ಹಿಂದೂ ವಿರೋಧಿ ಇದೆ. ಹೀಗಾಗಿ ಮದರಸಾಗಳಿಂದ ಬರುವ ಹುಡುಗ ದೇಶದ್ರೋಹಿನೇ ಆಗ್ತಾನೆ ಎಂದರು.

ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್, ಮುಂಚಿನ ಸರ್ಕಾರ ಇದ್ದಾಗಲೂ ಇವರೆಲ್ಲರೂ ಅಧಿಕಾರದಾಹಿಗಳು ಬರೀ ಬೂಟಾಟಿಕೆ ಮಾಡ್ತಾರೆ ಅಷ್ಟೇ, ಇವರಿಗೆ ಸಮಾಜ, ದೇಶ, ಧರ್ಮದ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಅಧಿಕಾರಕ್ಕಾಗಿ ಮುಸ್ಲಿಮರ ಓಲೈಕೆ ಮಾಡುವುದು ಕೆಲಸವಾಗಿದೆ ಈ ಮುಸ್ಲಿಂ ತುಷ್ಟೀಕರಣದಿಂದ ಭಯೋತ್ಪಾದನೆ ಹೆಚ್ಚಾಗ್ತಿದೆ. ಕಲಬುರಗಿ, ಬಳ್ಳಾರಿ ಜೊತೆಗೆ ಭಟ್ಕಳದ ಲಿಂಕ್ ಇದೆ. ಬಾಂಬ್ ಸ್ಫೋಟದ ಆರೋಪಿಗಳೂ ಭಟ್ಕಳದಲ್ಲಿಯೇ ಅಡಗಿರಬಹುದು ಎಂಬುದು ಸುದ್ದಿ ಹೊರಬಂದಿದೆ. ಏಕೆಂದರೆ ಭಟ್ಕಳ ನೇರವಾಗಿ ಪಾಕಿಸ್ತಾನ ಜೊತೆಗೆ ಲಿಂಕ್ ಇದೆ. ಇಷ್ಟೆಲ್ಲ ಗೊತ್ತಿದ್ರೂ ಸರ್ಕಾರ ಯಾಕೆ ಬಾಯಿ ಮುಚ್ಕೊಂಡು ಕೂತಿದೆ. ದೇಶದ ಸುರಕ್ಷತೆ ಬಗ್ಗೆ ನಿಮಗೆ ಕಾಳಜಿ ಇದಿಯಾ? ಬರೀ ಬೂಟಾಟಿಕೆ ಮಾತನಾಡ್ತಿರಾ ಬಳ್ಳಾರಿಯೂ ಕೂಡಾ ಸ್ಲಿಪರ್ ಸೆಲ್ ಆಗಿ ಬೆಳೆಯುತ್ತಿದೆ. ಹುಬ್ಬಳ್ಳಿ, ಕಲಬುರಗಿ ಸೇರಿ ಬೇರೆ ಬೇರೆ ಕಡೆ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ. ಇದರ ಜೊತೆಗೆ ನಮ್ಮ ಕಾನೂನು ಕೂಡಾ ದುರ್ಬಲವಾಗಿದೆ. ಕಾನೂನು ಬಿಗಿಯಾಗಿಲ್ಲ. ದೇಶದ್ರೋಹಿ ಹೇಳಿಕೆ ಕೊಟ್ಟವರು ಹೊರಗಡೆ ಇದ್ದಾರೆ ಎಂದು ಕಿಡಿಕಾರಿದರು.

ನಿಪ್ಪಾಣಿ ಶ್ರೀರಾಮ ಮಂದಿರಕ್ಕೆ ಬಾಂಬ್ ಬೆದರಿಕೆ; ಇಂಥ ಗೊಡ್ಡು ಬೆದರಿಕೆಗಳಿಗೆ ಹಿಂದೂ ಸಮಾಜ ಹೆದರೊಲ್ಲ: ಪ್ರಮೋದ್ ಮುತಾಲಿಕ್ ಕಿಡಿ 

ಪಾಕಿಸ್ತಾನ್ ಜಿಂದಾಬಾದ್ ಒಂದು ವೈರಸ್ ಇದ್ದಹಾಗೆ. ಇದಕ್ಕೆ ಯಾವ ಮುಲಾಮು ಹಚ್ಚೋಕೆ ಆಗೊಲ್ಲ. ಶೂಟ್ ಆ್ಯಂಡ್ ಸೈಟ್ ಮಾಡಬೇಕು ಅಷ್ಟೇ. ಗುಂಡಿಟ್ಟು ಹೊಡೆಯಿರಿ ಆವಾಗ ಯಾರೂ ಪಾಕಿಸ್ತಾನ ಜಿಂದಾಬಾದ್ ಅಂತಾರೆ ನೋಡೋಣ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ