16 ರಾಗಿಮುದ್ದೆ ತಿಂದು 15 ಸಾವಿರ ಗೆದ್ದ!

Published : Jan 14, 2019, 09:23 AM IST
16 ರಾಗಿಮುದ್ದೆ ತಿಂದು 15 ಸಾವಿರ ಗೆದ್ದ!

ಸಾರಾಂಶ

16 ರಾಗಿಮುದ್ದೆ ತಿಂದು 15 ಸಾವಿರ ಗೆದ್ದ!

ಮಾಲೂರು[ಜ.14] : ಸ್ಥಳೀಯ ಗ್ರಾಮೀಣ ಕ್ರೀಡಾ ಸಾಂಸ್ಕೃತಿಕ ಕಲಾ ತಂಡವು ಸಂಕ್ರಾತಿ ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ನಾಟಿ ಕೋಳಿ ಸಾರು- ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಗುರುಪ್ಪ ಶೆಟ್ಟಿ ಎಂಬುವರು 16.5 ಮುದ್ದೆ ತಿಂದು ₹15 ಸಾವಿರ ಗೆದ್ದಿದ್ದಾರೆ. ಕಳೆದ ಬಾರಿಯೂ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ದೊಡ್ಡ ಕಡತೂರಿನ ಗುರಪ್ಪ ಶೆಟ್ಟಿ ಈ ಸಲ ಸಹ ಪ್ರಥಮ ಸ್ಥಾನ ಪಡೆದರು.

₹10 ಸಾವಿರ ಬಹುಮಾನದ ಜೊತೆಗೆ ಶಾಸಕ ನಂಜೇಗೌಡ ಅವರು ನೀಡಿದ ₹5 ಸಾವಿರ ಪಡೆದರು. ಟೇಕಲ್ ಹೋಬಳಿಯ ಕೃಷ್ಣಪ್ಪ 15 ಮುದ್ದೆ ತಿಂದು ₹10 ಸಾವಿರ, ದೊಡ್ಡಕಡತೂರು ಕೃಷ್ಣಪ್ಪ ಶೆಟ್ಟಿ 12 ಮುದ್ದೆ ತಿಂದು ಮೂರನೇ ಸ್ಥಾನ ಪಡೆದು ₹5 ಸಾವಿರ, ನಾಲ್ಕನೇ ಬಹುಮಾನವಾಗಿ ₹3 ಸಾವಿರ ಪಡೆದ ಸಂಪಂಗೆರೆ ಶ್ರೀನಿವಾಸ 11.5 ಮುದ್ದೆ ತಿಂದರು.

ತಲಾ 10 ಮುದ್ದೆ ತಿಂದ ಒಂಭತ್ತು ಮಂದಿಗೆ ತಲಾ ₹500 ನೀಡಲಾಯಿತು. ಒಟ್ಟು 28 ಸ್ಪರ್ಧಿಗಳು ಭಾಗವಹಿಸಿದ್ದರು. ಒಬ್ಬ ಸ್ಪರ್ಧಿ ಮುದ್ದೆ ಜತೆಯಲ್ಲಿ ಸಸ್ಯಾಹಾರ ಸ್ವೀಕರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ; ಅಧಿಕಾರ ಸ್ವೀಕರಿಸಿ 1 ದಿನಕ್ಕೆ ವರಿಷ್ಠಾಧಿಕಾರಿ ಪವನ್ ನೆಜ್ಜೂರು ಸಸ್ಪೆಂಡ್!
ಕೋಗಿಲು ಲೇಔಟ್‌ನಲ್ಲಿ 167 ಮನೆಗಳು ನೆಲಸಮ: ಆದ್ರೆ ಹೊಸ ಫ್ಲ್ಯಾಟ್‌ ಪಡೆಯಲು 250 ಅರ್ಜಿ ಸಲ್ಲಿಕೆ!