ಲಾಕ್‌ಡೌನ್: ಒಂದು ಕಡೆಯಿಂದ ಮತ್ತೊಂದೆಡೆಗೆ ಸಂಚರಿಸಬಹುದು, ಕಂಡಿಷನ್ ಅಪ್ಲೈ

Published : Apr 13, 2020, 07:55 PM ISTUpdated : Apr 13, 2020, 08:16 PM IST
ಲಾಕ್‌ಡೌನ್: ಒಂದು ಕಡೆಯಿಂದ ಮತ್ತೊಂದೆಡೆಗೆ ಸಂಚರಿಸಬಹುದು, ಕಂಡಿಷನ್ ಅಪ್ಲೈ

ಸಾರಾಂಶ

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ  ಜನರು ಅಲ್ಲಲ್ಲಿಯೇ ಲಾಕ್ ಆಗ್ಬಿಟ್ಟಿದ್ದಾರೆ. ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ತಮ್ಮ ಊರಿಗೆ ತಲುಪಲಾಗದೇ ಎಲ್ಲಿ ಹೋಗಿದ್ದಾರೋ ಅಲ್ಲಿಯೇ ಫಿಕ್ಸ್ ಆಗಿದ್ದಾರೆ. ಆದ್ರೆ, ಇದೀಗ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆದ್ರೆ ಷರತ್ತುಗಳು ಅನ್ವಯ.

ಬೆಂಗಳೂರು, (ಏ.13): ಕೊರೋನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್​ ಡೌನ್ ಜಾರಿಗೊಳಿಸಲಾಗಿದೆ.  ಇದರ ಮಧ್ಯೆ,  ಎರಡು ಸಂದರ್ಭಗಳಲ್ಲಿ ಮಾತ್ರ ಜನರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್​ ತಿಳಿಸಿದ್ದಾರೆ.

ನಾಳೆ ಪ್ರಧಾನಿ ಮೋದಿ ಮಾತು, ಭಾರತೀಯ ಸೇನೆಯಿಂದ ಪಾಕ್‌ಗೆ ತಿರುಗೇಟು; ಏ.13ರ ಟಾಪ್ 10 ಸುದ್ದಿ! 

ಜನರಿಗೆ ಪ್ರಯಾಣಿಸಲು ಅನುಮತಿ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ಅವರು, ಲಾಕ್​ ಡೌನ್​ ವೇಳೆ ಕುಟುಂಬದಲ್ಲಿ ಸಂಬಂಧಿಸಿದ ವ್ಯಕ್ತಿ ಯಾರಾದ್ರೂ ಸಾವನ್ನಪ್ಪಿದ್ರೆ ಅಥವಾ ಮಗು ಜನಿಸಿದರೆ ಸಂಚರಿಸಬಹುದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಬೇರೆ ನಗರಳಿಗೆ  ಆದರೆ ಸಂಚರಿಸಲು ಆಯಾ ಜಿಲ್ಲೆಯ ಎಸ್​ಪಿ ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.
  ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ  ಜನರು ಅಲ್ಲಲ್ಲಿಯೇ ಲಾಕ್ ಆಗ್ಬಿಟ್ಟಿದ್ದಾರೆ. ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ತಮ್ಮ ಊರಿಗೆ ತಲುಪಲಾಗದೇ ಎಲ್ಲಿ ಹೋಗಿದ್ದಾರೋ ಅಲ್ಲಿಯೇ ಫಿಕ್ಸ್ ಆಗಿದ್ದಾರೆ. 
"
ಸದ್ಯಕ್ಕೆ ಏಪ್ರಿಲ್ 30ರ ವರೆಗೆ ಮನೆ ಬಿಟ್ಟು ಅಲುಗಾಡುವಂತಿಲ್ಲ. ಒಂದು ವೇಳೆ ವಾಹನ ತೆಗೆದುಕೊಂಡು ಏನಾದರೂ ರಸ್ತೆಗೆ ಇಳಿದರೆ, ಅಂತಃ ವಾಹನ ಸೀಜ್ ಜತೆಗೆ ಕೇಸ್ ಬುಕ್ ಆಗುವುದು ನಿಶ್ಚಿತ.

ಹಾಗಾಗಿ ಯಾವುದೇ ಕಾರಣಕ್ಕೆ ಏನಾಗುತ್ತೋ ನೋಡಿಯೇ ಬಿಡೋಳ ಅಂತ ಮಧ್ಯೆ ರಾತ್ರಿಯಲ್ಲಿ ಹೋಗುವ ದುಸ್ಸಾಹಸ ಬೇಡ. ಮನೆಯಲ್ಲಿಯೇ ಆರಾಮಗಿ ಇರಿ. ಸರ್ಕಾರ ಮಾಡುತ್ತಿರುವುದು ನಮ್ಮ ಒಳ್ಳೆಯದಕ್ಕಾಗಿಯೇ ಎನ್ನುವುದನ್ನು ಒಮ್ಮೆ ಯೋಚಿಸಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ