ರಾಜ್ಯಕ್ಕೆ ಮತ್ತೆ ವಕ್ಕರಿಸಿದ ಮಹಾಮಾರಿ; ಮದ್ದೂರಿನಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ದೃಢ!

By Kannadaprabha NewsFirst Published Dec 19, 2023, 10:41 AM IST
Highlights

ಕೋವಿಡ್ ಜೆಎನ್.1 ರೂಪಾಂತರಿ ಪ್ರಕರಣ ವರದಿಯಾದ ನಂತರ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಿರುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಶುಕ್ರವಾರ ಒಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಆರೋಗ್ಯ ತಪಾಸಣೆ ನಡೆಸಿದ ಅಧಿಕಾರಿಗಳು, ಅವರು ರೋಗ ಲಕ್ಷಣ ಹೊಂದಿಲ್ಲ, ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ, ಗ್ರಾಮದಲ್ಲಿ ಉಳಿದುಕೊಂಡಿರುವುದನ್ನು ಗುರುತಿಸಿದ್ದಾರೆ. 

ಮಂಡ್ಯ (ಡಿ.19): ಕೋವಿಡ್ ಜೆಎನ್.1 ರೂಪಾಂತರಿ ಪ್ರಕರಣ ವರದಿಯಾದ ನಂತರ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಿರುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಶುಕ್ರವಾರ ಒಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಆರೋಗ್ಯ ತಪಾಸಣೆ ನಡೆಸಿದ ಅಧಿಕಾರಿಗಳು, ಅವರು ರೋಗ ಲಕ್ಷಣ ಹೊಂದಿಲ್ಲ, ಯಾವುದೇ ಪ್ರಯಾಣದ ಇತಿಹಾಸವನ್ನು ಹೊಂದಿಲ್ಲ, ಗ್ರಾಮದಲ್ಲಿ ಉಳಿದುಕೊಂಡಿರುವುದನ್ನು ಗುರುತಿಸಿದ್ದಾರೆ. 

ಶಸ್ತ್ರ ಚಿಕಿತ್ಸೆಗೆಂದು ತಾಲೂಕು ಆಸ್ಪತ್ರೆಗೆ ಬಂದಾಗ ಅವರನ್ನು ಪರೀಕ್ಷಿಸಲಾಗಿತ್ತು. ಅವರಿಗೆ ಪಾಸಿಟಿವ್ ದೃಢಪಟ್ಟ ನಂತರ ವೈದ್ಯರು ಕ್ವಾರಂಟೈನ್‌ಗೆ ಒಳಪಡಿಸಿದರು. ಅವರ ಕುಟುಂಬದ ನಾಲ್ವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು, ಅವರೆಲ್ಲರಿಗೂ ನೆಗೆಟಿವ್ ಬಂದಿದೆ.

Latest Videos

 

60 ವರ್ಷ ತುಂಬಿದವರಿಗೆ ಮಾಸ್ಕ್ ಕಡ್ಡಾಯ: ಶೀಘ್ರವೇ ಆರೋಗ್ಯ ಇಲಾಖೆ ಮಾರ್ಗಸೂಚಿ- ದಿನೇಶ್ ಗುಂಡೂರಾವ್

ಇದು ಜೆಎನ್.1 ರೂಪಾಂತರವಾಗಿದೆಯೇ ಎಂದು ನೋಡಲು ವೈದ್ಯಕೀಯ ಸಿಬ್ಬಂದಿ ಪರೀಕ್ಷೆಗೆ ಪ್ರಕರಣವನ್ನು ಉಲ್ಲೇಖಿಸಿಲ್ಲ, ಅವರಿಗೆ ರೋಗಲಕ್ಷಣಗಳಿಲ್ಲದ ಕಾರಣ ಎದೆಯ ಸಿಟಿ ಸ್ಕ್ಯಾನ್ ಸಹ ಮಾಡಲಾಗಿಲ್ಲ. ರೋಗಿಯು ಸಾಮಾನ್ಯವಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. 

ಸಂಭಾವ್ಯ ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲೆಯ ಎಲ್ಲಾ ಆರು ತಾಲೂಕುಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳನ್ನು ಸಜ್ಜುಗೊಳಿಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಆಕ್ಸಿಜನ್ ಸ್ಥಾವರದಲ್ಲಿ ಕೆಟ್ಟು ಹೋಗಿರುವ ಸೆನ್ಸಾರ್ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಮೋಹನ್ ತಿಳಿಸಿದರು. ಈ ಮಧ್ಯೆ ಶಬರಿಮಲೆ ಯಾತ್ರೆ ಮತ್ತು ಇತರ ಕಾರಣಗಳಿಗಾಗಿ ಕೇರಳಕ್ಕೆ ಪ್ರಯಾಣಿಸುವವರ ಮೇಲೆ ನಿಗಾ ಇಡುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್ ಉಪತಳಿ JN.1 ಭೀತಿ:ಕ್ರಿಸ್ಮಸ್, ಹೊಸವರ್ಷ ಸಂಭ್ರಮಕ್ಕೆ ಬೀಳುತ್ತಾ ಬ್ರೇಕ್?

click me!