Ola-Uber Fare: ಓಲಾ, ಉಬರ್‌ಗೆ ದರ ಫಿಕ್ಸ್‌ ಮಾಡಿದ ಸಾರಿಗೆ ಇಲಾಖೆ!

Published : Nov 25, 2022, 01:30 PM IST
Ola-Uber Fare: ಓಲಾ, ಉಬರ್‌ಗೆ ದರ ಫಿಕ್ಸ್‌ ಮಾಡಿದ ಸಾರಿಗೆ ಇಲಾಖೆ!

ಸಾರಾಂಶ

ಕೊನೆಗೂ ರಾಜಧಾನಿ ಬೆಂಗಳೂರಿನಲ್ಲಿ ಒಲಾ, ಉಬರ್‌, ರಾಪಿಡೋಗೆ ಸಾರಿಗೆ ಇಲಾಖೆ ದರ ನಿಗದಿ ಮಾಡಿದೆ. ಕೋರ್ಟ್‌ ಸೂಚನೆಯಲ್ಲಿ ಇಲಾಖೆ ದರ ಫಿಕ್ಸ್‌ ಮಾಡಿದ್ದು, ಹೈಕೋರ್ಟ್‌ಗೆ ಇದರ ಆದೇಶ ಪ್ರತಿಯನ್ನು ನೀಡಲಿದೆ.  

ಬೆಂಗಳೂರು (ನ.25): ರಾಜಧಾನಿ ಬೆಂಗಳೂರಿನಲ್ಲಿ ತಮ್ಮದೇ ದರ್ಬಾರ್‌  ನಡೆಸುತ್ತಿದ್ದ ಅಗ್ರಿಗೇಟರ್ಸ್‌ ಕಂಪನಿಗಳಾದ ಒಲಾ, ಉಬರ್‌ ಹಾಗೂ ರಾಪಿಡೋ ಅಟೋಗಳಿಗೆ ನೂತನ ದರ ಫಿಕ್ಸ್‌ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಹೈಕೋರ್ಟ್‌ ಸೂಚನೆಯಂತೆ ಶುಕ್ರವಾರ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆ ದರವನ್ನು ಫಿಕ್ಸ್‌ ಮಾಡಿದೆ. ಮಿನಿಮಮ್ ಚಾರ್ಜ್ ಜೊತೆಗೆ ಶೇ.5ರಷ್ಟು ದರವನ್ನು ಫಿಕ್ಸ್‌ ಮಾಡಿ ಸಾರಿಗೆ ಇಲಾಖೆ ಆದೇಶ ಪ್ರಕಟಿಸಿದೆ. ಮಿನಿಮಮ್ ಚಾರ್ಜ್ 30, 40, 60 ಇದ್ರು ಅದರ ಜೊತೆಗೆ ಶೇ.5ರಷ್ಟು ದರವನ್ನು ಮಾತ್ರ ಸಾರಿಗೆ ಇಲಾಖೆ ಹೆಚ್ಚಿಸಿದೆ. 30+ 5 %   ಹೆಚ್ಚಿನ ದರದ ಜೊತೆಗೆ + 5% ಜಿಎಸ್ಟಿ ಸೇರಿಸಲು ಆದೇಶ ನೀಡಲಾಗಿದೆ. ಇದರ ಆದೇಶದ ಪ್ರತಿಯನ್ನು ಸ್ವತಃ ಸಾರಿಗೆ ಇಲಾಖೆಯೇ ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಿದೆ.

ಕೋರ್ಟ್ ಸೂಚನೆಯಂತೆ ಹೆಚ್ಚುವರಿ ಶೇ 5% ಹೆಚ್ಚುವರಿ ದರವನ್ನು ಸರ್ಕಾರ ನಿಗದಿ ಮಾಡಿದೆ. ಜಿಎಸ್‌ಟಿ ಸೇರಿದಂತೆ ಹೊಸ ದರ ನಿಗದಿ ಮಾಡಿದ ಸಾರಿಗೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಹೇಳಿದ್ದಾರೆ. ಮೊದಲ 2 ಕಿ.ಮೀಗೆ 30 ರಿಂದ 33 ರೂ ಏರಿಕೆಯಾಗಲಿದೆ. ಜಿಎಸ್‌ಟಿ ಸೇರ್ಪಡಿಸಿ ಶೇ 5% ರಷ್ಟು ಮಾತ್ರ ದರ ಏರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಪ್ರಯಾಣಿಕರಿಗೆ ಹೊರೆಯಾಗದಂತೆ ದರ ನಿಗದಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣದಿಂದಲೆ ಹೊಸ ಪರಿಷ್ಕೃತ ದರ ಜಾರಿಗೊಳಿಸುವಂತೆ ಸರ್ಕಾರ ಸೂಚನೆ ನೀಡಿದ್ದಾರೆ. ಈಗಾಗಲೆ ದರ ನಿಗದಿ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆಟೋ ಚಾಲಕರಿಂದ 'ನಮ್ಮ ಯಾತ್ರಿ' ಆ್ಯಪ್‌ ಬಿಡುಗಡೆಗೆ ಸಿದ್ಧತೆ!

15 ಅಗ್ರಿಗೇಟರ್ಸ್ ಕಂಪೆನಿಗಳಿಗೆ ಇಂದಿನಿಂದಲೆ ಹೊಸ ದರ ಜಾರಿಗೊಳಿಸಿ ಸರ್ಕಾರ ಆದೇಶ. ಸರ್ಕಾರ ಹೇಳಿದ ಹೊಸ ದರವನ್ನು ಕಟ್ಟುನಿಟ್ಟಾಗಿ ಅಗ್ರಿಗೇಟರ್ಸ್ ಕಂಪೆನಿ ಪಾಲನೆ ಮಾಡಲಿದೆಯೇ ಎನ್ನುವುದೇ ಮುಂದಿನ ಪ್ರಶ್ನೆಯಾಗಿ ಉಳಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌