ಮೈಸೂರಿನ ಇಸಾಕ್‌, ಪತ್ರಕರ್ತೆ ಪೂರ್ಣಿಮಾಗೆ ಪ್ರಕಾಶಕರ ಸಂಘ ಪ್ರಶಸ್ತಿ

Kannadaprabha News   | Asianet News
Published : Apr 20, 2021, 08:58 AM ISTUpdated : Apr 20, 2021, 09:06 AM IST
ಮೈಸೂರಿನ ಇಸಾಕ್‌, ಪತ್ರಕರ್ತೆ ಪೂರ್ಣಿಮಾಗೆ ಪ್ರಕಾಶಕರ ಸಂಘ ಪ್ರಶಸ್ತಿ

ಸಾರಾಂಶ

‘ಕರ್ನಾಟಕ ಪ್ರಕಾಶಕರ ಸಂಘ’ ನೀಡಲಿರುವ 2021ರ ಸಾಲಿನ ಎರಡು ಪ್ರಶಸ್ತಿಗಳಿಗೆ ಮೈಸೂರಿನ ಕನ್ನಡ ಗ್ರಂಥಾಲಯ ಸ್ಥಾಪಕ ಸೈಯದ್‌ ಇಸಾಕ್‌ ಹಾಗೂ ಹಿರಿಯ ಪತ್ರಕರ್ತೆ ಮತ್ತು ಪ್ರಕಾಶಕರಾದ ಆರ್‌.ಪೂರ್ಣಿಮಾ ಭಾಜನರಾಗಿದ್ದಾರೆ. 

ಬೆಂಗಳೂರು (ಏ.20): ವಿಶ್ವ ಪುಸ್ತಕ ದಿನ(ಏ.23) ಪ್ರಯುಕ್ತ ‘ಕರ್ನಾಟಕ ಪ್ರಕಾಶಕರ ಸಂಘ’ ನೀಡಲಿರುವ 2021ರ ಸಾಲಿನ ಎರಡು ಪ್ರಶಸ್ತಿಗಳಿಗೆ ಮೈಸೂರಿನ ಕನ್ನಡ ಗ್ರಂಥಾಲಯ ಸ್ಥಾಪಕ ಸೈಯದ್‌ ಇಸಾಕ್‌ ಹಾಗೂ ಹಿರಿಯ ಪತ್ರಕರ್ತೆ ಮತ್ತು ಪ್ರಕಾಶಕರಾದ ಆರ್‌.ಪೂರ್ಣಿಮಾ ಭಾಜನರಾಗಿದ್ದಾರೆ. 

ಸಂಘದ ಸಂಸ್ಥಾಪಕ ಅಧ್ಯಕ್ಷ ಕವಿ ‘ಎಂ.ಗೋಪಾಲಕೃಷ್ಣ ಅಡಿಗ’ ಪ್ರಶಸ್ತಿ ಸೈಯದ್‌ ಇಸಾಕ್‌ ಮತ್ತು ಆಧುನಿಕ ಕಾಲದ ಮೊದಲ ಪ್ರಕಾಶಕಿ ‘ಶ್ರೀಮತಿ ನಂಜನಗೂಡು ತಿರುಮಲಾಂಬ’ ಪ್ರಶಸ್ತಿಯನ್ನು ಆರ್‌.ಪೂರ್ಣಿಮಾ ಅವರಿಗೆ ಸಂಘ ನೀಡಿ ಗೌರವಿಸಲಿದೆ. 

ಸೈಯದ್‌ ಇಸಾಕ್‌ ಗ್ರಂಥಾಲಯಕ್ಕೆ ಬೆಂಗ್ಳೂರು ಪ್ರಕಾಶಕರ ಸಂಘ ನೆರವು ...

ಏ.23ರಂದು ಬೆಳಗ್ಗೆ 11.30ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕವಿ ಡಾ.ಸಿದ್ದಲಿಂಗಯ್ಯ ಅವರು ಪುರಸ್ಕೃತರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಂಕಿತ ಪುಸ್ತಕ ಮತ್ತು ಶೃಂಗಾರ ಪ್ರಕಾಶನ ಸಂಸ್ಥೆಗಳಿಂದ ಪ್ರಾಯೋಜಿತವಾದ ಈ ಪ್ರಶಸ್ತಿಗಳು 50 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌
Karnataka News Live: ಮಾಟಗಾತಿಯ ಮಾತು ಕೇಳಿ ಗಂಡು ಮಗುವಿಗಾಗಿ ಪತ್ನಿಯ ತಲೆ ಕೂದಲು ಕತ್ತರಿಸಿದ ಪತಿ