
ಚಿಕ್ಕೋಡಿ: ನದಿಯಲ್ಲಿ ಮುಳುಗಿ ತಾಯಿ ಮಗ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆದಿದೆ. ನಿನ್ನೆ ಈ ದುರಂತ ನಡೆದಿದೆ. ನಿನ್ನೆ ತಾಯಿ ಮೃತದೇಹ ಪತ್ತೆಯಾಗಿದ್ದು, ಮಗನಿಗಾಗಿ ಹುಡುಕಾಟ ನಡೆದಿದೆ. ಸಾವನ್ನಪ್ಪಿದ ತಾಯಿ ಮಗನನ್ನು ತಾಯಿ 27 ವರ್ಷದ ಲಕ್ಷ್ಮಿ ಕುಠೋಳಿ ಹಾಗೂ 10 ವರ್ಷದ ಸುಪ್ರೀತ್ ಕುಠೋಳಿ ಎಂದು ಗುರುತಿಸಲಾಗಿದೆ.
ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ನದಿಯಲ್ಲಿ ಈ ದುರಂತ ನಡೆದಿದೆ. ನಿನ್ನೆ ತಾಯಿ ಮೃತದೇಹ ಪತ್ತೆಯಾಗಿದ್ದು, ಮಗನಿಗಾಗಿ ಹುಡುಕಾಟ ಮುಂದುವರೆದಿದೆ. ಸಂಕೇಶ್ವರದ ಶಂಕಲಿಂಗ ದೇವಸ್ಥಾನದ ಹಿಂಭಾಗದ ಹಿರಣ್ಯಕೇಶಿ ನದಿಯಲ್ಲಿ ಈ ದುರಂತ ನಡೆದಿತ್ತು. ಮಗ ಸುಪ್ರೀತ್ ನದಿಯಲ್ಲಿ ಇಳಿದಾಗ ಮುಳುಗಲಾರಂಭಿಸಿದ್ದು, ಮಗನನ್ನ ರಕ್ಷಣೆ ಮಾಡಲು ಹೋಗಿ ತಾಯಿಯೂ ನೀರುಪಾಲಾಗಿದ್ದಾರೆ.
ನಿನ್ನೆ ರಾತ್ರಿಯೇ ತಾಯಿಯ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗಡೆ ತೆಗೆದಿದ್ದು, ಮಗ ಸುಪ್ರಿತ್ಗಾಗಿ ಬೋಟ್ನಲ್ಲಿ ನದಿಯಲ್ಲಿ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಾಡಾನೆಗಳ ಬಳಿಕ ಕಾಡುಕೋಣಗಳ ವೈಲ್ಡ್ ರೈಡ್: ಟೀ ಎಸ್ಟೇಟ್ನಲ್ಲಿ ದಾಂಧಲೆ: 1 ಕಾಟಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ