
ಬಾಗಲಕೋಟೆ (ಡಿ.12): ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಇತ್ತೀಚೆಗೆ 'ಮಂಕಿ ಕ್ಯಾಪ್' ಧರಿಸಿದ ಕಳ್ಳರ ತಂಡವೊಂದು ಭಯದ ವಾತಾವರಣ ಸೃಷ್ಟಿಸಿದ್ದು, ನಿನ್ನೆ ರಾತ್ರಿ ಒಂಬತ್ತಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದೆ.
ಈ ಕಳ್ಳರು ಎಂತಹ ಖತರ್ನಾಕ್ ಖದೀಮರೆಂದರೆ, ಅವರು ಪಟ್ಟಣದ ಮೂರು ಜನ ಪೊಲೀಸ್ ಸಿಬ್ಬಂದಿಯ ಮನೆಗಳಿಗೂ ಕನ್ನ ಹಾಕಿರುವುದು! ಪೊಲೀಸರ ಮನೆಯೊಳಗೆ ನುಗ್ಗಿ ಒಳಭಾಗವನ್ನು ಅಸ್ತವ್ಯಸ್ತಗೊಳಿಸಿ ಕೆಲ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಪೊಲೀಸರ ಮನೆಗಳನ್ನೇ ಗುರಿಯಾಗಿಸಿರುವ ಈ ಖದೀಮರ ಕಾರ್ಯವು ಪಟ್ಟಣದ ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕೈಯಲ್ಲಿ ಕೋಲು ಮತ್ತು ಬ್ಯಾಟರಿ ಹಿಡಿದು, ಮಂಕಿ ಕ್ಯಾಪ್ ಧರಿಸಿದ ನಾಲ್ಕು ಜನರ ತಂಡವು ರಾತ್ರಿ ವೇಳೆ ಬಿಂದಾಸ್ ಆಗಿ ಮನೆ ಮನೆಗಳಿಗೆ ಓಡಾಡುತ್ತಿರುವ ದೃಶ್ಯ ಪಟ್ಟಣದ ಕೆಲವು ಮನೆಗಳ ಹೊರಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಕಳ್ಳರ ಚಲನವಲನ ಸ್ಪಷ್ಟವಾಗಿ ಸೆರೆಯಾಗಿದ್ದರೂ, ಅವರ ಗುರುತು ಪತ್ತೆ ಹಚ್ಚುವ ಕಾರ್ಯ ಸವಾಲಾಗಿದೆ. ಈ ಕೃತ್ಯಗಳ ಕುರಿತು ಮಾಹಿತಿ ಪಡೆದ ಹುನಗುಂದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಆತಂಕ ಪಡದಂತೆ ಮತ್ತು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ