
ಕೊಪ್ಪಳ, (ಅ.26): ಸಾರಿಗೆ ಸಚಿವ ಶ್ರೀರಾಮುಲು (Sriramulu) ಅವರು ಇಂದು (ಅ.26) ಕೊಪ್ಪಳ (Koppal) ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿದರು.
ವೇಳೆ ಸಾರಿಗೆ ಸಚಿವ ಶ್ರೀರಾಮುಲು ಅವರು ಕೆಲಕಾಲ ಕೋತಿಗಳೊಂದಿಗೆ (Monkeys) ಕಾಲ ಕಳೆದಿದ್ದಾರೆ. ಕೋತಿಗಳಿಗೆ ಶ್ರೀ ರಾಮುಲು ಬಾಳೆಹಣ್ಣು ತಿನಿಸಿದ್ದಾರೆ. ಈ ವೇಲೆ ಕೋತಿಗಳು ಶ್ರೀರಾಮುಲು ಹೆಗಲೇರಿ ಆಟ ಆಡಿವೆ. ಇನ್ನು ಬಾಳೆಹಣ್ಣು ನೀಡುತ್ತಿರುವ ಕಂಡು ಕೋತಿಗಳ ಹಿಂಡೇ ಶ್ರೀರಾಮುಲು ಅವರನ್ನ ಸುತ್ತುಹೊರೆದವು. ಅವೆಲ್ಲವುಗಳಿಗೂ ಶ್ರೀರಾಮುಲು ಅವರು ಬಾಳೆಹಣ್ಣು ಹಂಚಿ ಸಂತಸಪಟ್ಟರು.
ಇನ್ನು ಇದೇ ವೇಳೆ ತಮ್ಮ ಹೆಗಲೇರಿ ಕೂತ ಕೋತಿಯೊಂದು ಅಲ್ಲೇ ಬಾಳೆಹಣ್ಣು ಸವಿಯುತ್ತಿರುವ ಫೋಟೋವನ್ನು ಶ್ರೀರಾಮುಲು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಕೊಪ್ಪಳ ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿದ ವೇಳೆ ವಾನರ ಸೈನ್ಯಕ್ಕೆ ಬಾಳೆ ಹಣ್ಣು ನೀಡಿ, ವಾನರ ಸೈನ್ಯದೊಂದಿಗೆ ಕೆಲ ಸಮಯ ಕಳೆದಿದ್ದು. ನನ್ನ ಜೀವನದ ಅವಿಸ್ಮರಣೀಯ ಕ್ಷಣ. ಈ ವೇಳೆ ಮರಿ ವಾನರಗಳು ತಲೆಯ ಮೇಲೆ ಕುಳಿತು ಆಶೀರ್ವಾದ ನೀಡಿದ್ದನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಶ್ರೀರಾಮುಲು ಅವರು ಇಷ್ಟು ದಿನ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ (By Election) ಪ್ರಚಾರದಲ್ಲಿ ಪಾಲ್ಗೊಂಡಿದ್ರು. ಮಂಗಳವಾರ ಕೊಂಚ ಬಿಡುವ ಮಾಡಿಕೊಂಡು ಕೊಪ್ಪಳ ಜಿಲ್ಲೆಯ ಪಂಪ ಸರೋವರಕ್ಕೆ ಭೇಟಿ ನೀಡಿರುವುದು ವಿಶೇಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ