RSS ನೋಂದಾಯಿಸಿ, ಆಸ್ತಿಮೂಲ ತಿಳಿಸಿ, ಭಾಗವತ್‌ಗೆ 8 ಪ್ರಶ್ನೆಗಳ ಪತ್ರ ಬರೆದ ಪ್ರಿಯಾಂಕ್ ಖರ್ಗೆ

Published : Jun 16, 2026, 05:42 AM IST
Priyank Kharge Mohan Bhagwat

ಸಾರಾಂಶ

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಆರೆಸ್ಸೆಸ್‌ ಅನ್ನು ನೋಂದಾಯಿಸದಿರುವ ಕಾನೂನಾತ್ಮಕ ಕಾರಣಗಳು, ಅದರ ಆಸ್ತಿ, ದೇಣಿಗೆ ಮತ್ತು ತೆರಿಗೆ ಪಾವತಿ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಪಾರದರ್ಶಕತೆ ಮೆರೆಯುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರೆಸ್ಸೆಸ್) ವಿರುದ್ಧ ನಿರಂತರ ಪ್ರಶ್ನೆ, ಪ್ರಹಾರ ನಡೆಸಿದ್ದ ಸಚಿವ ಪ್ರಿಯಾಂಕ್‌ ಖರ್ಗೆ, ಇದೀಗ ಹೊಸ ಸರ್ಕಾರದಲ್ಲಿ ಗೃಹ ಸಚಿವರಾದ ಬಳಿಕ ಆರೆಸ್ಸೆಸ್‌ನ ಕಾನೂನಾತ್ಮಕ ಸ್ಥಾನಮಾನ, ಆಸ್ತಿ, ದೇಣಿಗೆ, ತೆರಿಗೆ ಪಾವತಿ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಎಂಟು ಪ್ರಶ್ನೆಗಳನ್ನು ಕೇಳಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಸಂಘವನ್ನು ನೋಂದಾಯಿಸುವಂತೆ ಒತ್ತಾಯಿಸಿರುವ ಅವರು ದೇಣಿಗೆ, ಆದಾಯದ ಮೂಲ, ಖರ್ಚು-ವೆಚ್ಚ, ಆಸ್ತಿ ವಿವರ ಬಹಿರಂಗಪಡಿಸುವ ಮೂಲಕ ಪಾರದರ್ಶಕತೆ ಹಾಗೂ ಸಾಂವಿಧಾನಿಕ ಹೊಣೆಗಾರಿಕೆ ಎತ್ತಿ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಜೂ.13ರಂದು ಸಚಿವರು ಪತ್ರ ಬರೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತ್ರದಲ್ಲಿ ಆರೆಸ್ಸೆಸ್‌ 100 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ, ದೇಶದಲ್ಲಿ ಬಹು ವಿಸ್ತಾರವಾದ ಸಾಂಸ್ಥಿಕ ಅಸ್ತಿತ್ವ ಹೊಂದಿರುವ ಆರೆಸ್ಸೆಸ್‌ ಕಾನೂನು ಬದ್ಧ ಸಂಘಟನೆಯಾಗಿ ಅಥವಾ ವ್ಯಕ್ತಿಗಳ ಸಂಸ್ಥೆಯಾಗಿ ನೋಂದಾಯಿಸಿಕೊಳ್ಳದೆ, ಅನಾಮಧೇಯವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತಿರುವ ಹಿಂದಿನ ಕಾನೂನು ಆಧಾರಗಳನ್ನು ವಿವರಿಸಲು ಸಂಘದ ಅಧಿಕೃತ ಪದಾಧಿಕಾರಿಗಳನ್ನು ನಿಯೋಜಿಸುವಂತೆ ಕೋರಲಾಗಿದೆ.

ಪಾರದರ್ಶಕತೆ ಮತ್ತು ಹೊಣೆಗಾರಿಕೆ

ಭಾರತ ಮತ್ತು ವಿದೇಶಗಳಲ್ಲಿ 60,000ಕ್ಕೂ ಹೆಚ್ಚು ಶಾಖೆಗಳು ಹಾಗೂ ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಆರೆಸ್ಸೆಸ್‌ ಸಾರ್ವಜನಿಕ ಮತ್ತು ಸಾಮಾಜಿಕ ಜೀವನದಲ್ಲಿ ಬಹುದೊಡ್ಡ ಮಟ್ಟದ ಅಸ್ತಿತ್ವವನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇಷ್ಟೊಂದು ಬೃಹತ್ ಗಾತ್ರ, ಪ್ರಭಾವ ಮತ್ತು ವ್ಯಾಪ್ತಿಯನ್ನು ಹೊಂದಿರುವುದರಿಂದಲೇ, ಆರ್‌ಎಸ್‌ಎಸ್ ಸಂಘಟನೆಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂವಿಧಾನಿಕ ಅನುಸರಣೆಯ ಉನ್ನತ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆರ್‌ಎಸ್ಎಸ್‌ಗೆ ಏನು ಪ್ರಶ್ನೆ

  • ದೇಶ- ವಿದೇಶಗಳಲ್ಲಿ ನಿಮ್ಮ 60000 ಶಾಖೆಗಳಿವೆ. ಕೋಟ್ಯಂತರ ಸ್ವಯಂಸೇವಕರು ನಿಮ್ಮ ಜೊತೆ ಇದ್ದಾರೆ
  • ಇಷ್ಟು ದೊಡ್ಡ ಸಾಂಸ್ಥಿಕ ಅಸ್ತಿತ್ವ ಇರುವಾಗ ಇದನ್ನು ಕೇವಲ ಒಂದು ಅನೌಪಚಾರಿಕ ವ್ಯವಸ್ಥೆ ಎನ್ನಲಾಗದು
  • ಹೀಗಿದ್ದರೂ ಸಂಸ್ಥೆಯನ್ನು ನೊಂದಾಯಿಸದೇ ಇರುವುದು ಕಾನೂನು ಪಾಲನೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ
  • ಸಂಘಟನೆ ಎಷ್ಟೇ ಹಳೆಯ, ಪ್ರಭಾವಶಾಲಿಯಾಗಿದ್ದರೂ ಪರಿಶೀಲನೆಯಿಂದ ಹೊರತಾಗಿರಲು ಸಾಧ್ಯವಿಲ್ಲ
  • ಇದಕ್ಕೆ ಯಾವ ಕಾನೂನು ಆಧಾರಗಳಿವೆ ಎಂಬುದನ್ನು ವಿವರಿಸಲು ಪದಾಧಿಕಾರಿ ನಿಯೋಜನೆಗೆ ಕೋರುತ್ತೇವೆ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live ರಾಜ್ಯದಲ್ಲಿ ಈವರೆಗೆ ಶೇ.21ರಷ್ಟು ಭಾರೀ ಮುಂಗಾರು ಕೊರತೆ: RSS ನೋಂದಾಯಿಸಿ, ಆಸ್ತಿಮೂಲ ತಿಳಿಸಿ, ಭಾಗವತ್‌ಗೆ 8 ಪ್ರಶ್ನೆಗಳ ಪತ್ರ ಬರೆದ ಪ್ರಿಯಾಂಕ್ ಖರ್ಗೆ
ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಮೆಜೆಸ್ಟಿಕ್‌ವರೆಗೆ ವಿಸ್ತರಿಸಿ: ಜನರ ಆಗ್ರಹಕ್ಕೆ ರೈಲ್ವೆ ಇಲಾಖೆ ಹೇಳಿದ್ದೇನು?