ಈ ಬಾರಿಯ ಧ್ವಜಾರೋಹಣ ಯಾರು ಮಾಡ್ತಾರೆ? ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗ್ತಾರಾ?

By Suvarna NewsFirst Published Aug 6, 2020, 3:04 PM IST
Highlights

ಕೊರೋನಾ ಯೋಧರಿಗೆ ಮಾರ್ಗಸೂಚಿ ಸಡಿಲ ಮಾಡಿದ್ದೇವೆ| ರೋಗದ ಲಕ್ಷಣ ಇಲ್ಲದೇ ಇದ್ದರೆ ಏಳು ದಿನಕ್ಕೆ ಡಿಸ್ಚಾರ್ಜ್ ಆಗಬಹುದು: ಸಚಿವ ಡಾ.ಕೆ. ಸುಧಾಕರ್‌|

ಬೆಂಗಳೂರು(ಆ.06): ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಯಾರು ಧ್ವಜಾರೋಹಣ ಯಾರು ಮಾಡುತ್ತಾರೆ ಎಂಬ ಪ್ರಶ್ನೆಗಳು ಉದ್ಭವವಾಗಿವೆ.  ಈ ಎಲ್ಲ ಪ್ರಶ್ನೆಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಉತ್ತರ ನೀಡಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್‌ ರೋಗದ ಲಕ್ಷಣ ಇಲ್ಲದೇ ಇದ್ದರೆ, ಮನೆಯಲ್ಲಿ ಇರಬಹುದು. ಕೊರೋನಾ ಯೋಧರಿಗೆ ಈ ಮೊದಲೇ ಮಾರ್ಗಸೂಚಿ ಸಡಿಲ ಮಾಡಿದ್ದೇವೆ. ರೋಗದ ಲಕ್ಷಣ ಇಲ್ಲದೇ ಇದ್ದರೆ ಏಳೇ ದಿನಕ್ಕೆ ಡಿಸ್ಚಾರ್ಜ್ ಆಗಬಹುದು. ನೋಡೋಣ ಆಗಸ್ಟ್ 15ಕ್ಕೆ ಇನ್ನೂ ಸಮಯ ಇದೆ ಎಂದು ಹೇಳಿದ್ದಾರೆ. 

Latest Videos

ಕೊರೋನಾ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ: ಯಾವೆಲ್ಲ ಸೂಚನೆಗಳನ್ನು ಪಾಲಿಸಬೇಕು..?

ಬೆಂಗಳೂರಿನಲ್ಲಿ ಒಟ್ಟು 11 ಕೋವಿಡ್ ಕೇರ್ ಸೆಂಟರ್‌ಗಳಿವೆ. ಶೇ.20 ರಷ್ಟು ಬೆಡ್‌ಗಳು ಖಾಲಿ‌ ಇವೆ. ಎಚ್‌ಎಎಲ್ ಸಿಸಿಸಿಯಲ್ಲಿ 200 ಬೆಡ್‌ಗಳಿವೆ. ಎಚ್‌ಎ ಎಲ್ ಸಂಸ್ಥೆಯವರು ಬೌರಿಂಗ್ ಕಾಲೇಜಿಗೆ ಎರಡು ಆಂಬುಲೆನ್ಸ್‌ಗಳನ್ನು ದೇಣಿಗೆಯಾಗಿ ಕೊಟ್ಟಿದಾರೆ ಎಂದು ತಿಳಿಸಿದ್ದಾರೆ.
 

click me!