ಕೊರೋನಾ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ: ಯಾವೆಲ್ಲ ಸೂಚನೆಗಳನ್ನು ಪಾಲಿಸಬೇಕು..?

Suvarna News   | Asianet News
Published : Aug 06, 2020, 01:54 PM IST
ಕೊರೋನಾ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ: ಯಾವೆಲ್ಲ ಸೂಚನೆಗಳನ್ನು ಪಾಲಿಸಬೇಕು..?

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಯಾರು ಸಹ ಕುಟುಂಬ ಸದಸ್ಯರನ್ನ ಕರೆದುಕೊಂಡು ಬರುವಂತಿಲ್ಲ| ಕೋವಿಡ್ ವಾರಿಯರ್ 50 ಜನರು ಹಾಗೂ ಕೋವಿಡ್‌ನಿಂದ ಗುಣಮುಖರಾದರ ಪೈಕಿ 25 ಜನರಿಗೆ ಕಾರ್ಯಕ್ರಮಕ್ಕೆ ಅಹ್ವಾನ| ಕಾರ್ಯಕ್ರಮಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು| 

ಬೆಂಗಳೂರು(ಆ.06): ಕೊರೋನಾ ಸಂಘರ್ಷದ ಸಮಯದಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಹೇಗಿ ನಡೆಸಬೇಕು ಎಂಬದುರ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾದ ಮುಖ್ಯಕಾರ್ಯದರ್ಶಿ ವಿಜಯ್ ಬಾಸ್ಕರ್ ಅವರು ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಭಾವಿ ಸಭೆ ನಡೆಸಿ ಕೆಲ ಸೂಚನೆಗಳನ್ನ ಅಧಿಕಾರಿಗಳಿಗೆ ನೀಡಿದ್ದಾರೆ. 

ಸೂಚನೆಗಳು ಇಂತಿವೆ

*ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕೇವಲ 500 ಅಹ್ವಾನ ಪತ್ತಿಕೆಯನ್ನ ಮಾತ್ರ ಮುದ್ರಿಸಲು ಸೂಚನೆ
* ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಯಾರು ಸಹ ಕುಟುಂಬ ಸದಸ್ಯರನ್ನ ಕರೆದುಕೊಂಡು ಬರುವಂತಿಲ್ಲ
* ಕೋವಿಡ್ ವಾರಿಯರ್ 50 ಜನರು ಹಾಗೂ ಕೋವಿಡ್‌ನಿಂದ ಗುಣಮುಖರಾದರ ಪೈಕಿ 25 ಜನರಿಗೆ ಕಾರ್ಯಕ್ರಮಕ್ಕೆ ಅಹ್ವಾನ
* ಕಾರ್ಯಕ್ರಮಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

ಕೊರೋನಾ ನಡುವೆ ಸ್ವಾತಂತ್ರ್ಯದಿನ ಆಚರಣೆ ಈ ಬಾರಿ ಹೇಗಿರಲಿದೆ? ಮಾರ್ಗಸೂಚಿ

ಸಮಾರಂಭ ಹಾಗೂ ಪಥ ಸಂಚಲನದ ಸಿದ್ಧತೆ

*ಪ್ರತಿವರ್ಷ 36 ತುಕಡಿಗಳು ಕವಾಯತ್‌ನಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಕೋವಿಡ್-19ರ ಹಿನ್ನೆಲೆಯಲ್ಲಿ 4 ರಿಂದ 16 ತುಕಡಿಗಳನ್ನು ಮಾತ್ರ ಕವಾಯತ್‌ನಲ್ಲಿ ಭಾಗವಹಿಸಲು ಸೂಚನೆ. ಕಡ್ಡಾಯವಾಗಿ ಮಾಸ್ಕ್ ಹಾಗೂ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ಪ್ರತಿ ತುಕಡಿಯಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಲು ಸೂಚನೆ.
* ಪಥ ಸಂಚಲನದಲ್ಲಿ ಭಾಗಿವಹಿಸುವವರು ಒಂದು ದಿನ ಮುಂಚಿತವಾಗಿ  ರ್ಯಾಪಿಡ್‌ ಟೆಸ್ಟ್ ಪರೀಕ್ಷೆಯನ್ನು ಮಾಡಿಸಬೇಕು
* ಪರೇಡ್‌ನಲ್ಲಿ ಸ್ಕೌಟ್ ಮತ್ತು ಎನ್‌ಸಿಸಿ ತುಕಡಿಗಳು ಇರಬೇಕಾಗಿಲ್ಲ
* ಈ ಬಾರಿ ಶಾಲಾ / ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವಿರುವುದಿಲ್ಲ
* ಸಾರ್ವಜನಿಕರು, ಮಕ್ಕಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸತಕ್ಕದಲ್ಲ
*ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನದಲ್ಲಿ ಹಾಗೂ ವೆಬ್‌ಸೈಟ್‌ ಮೂಲಕ ಪ್ರಸಾರ ಮಾಡಲು ಸೂಚನೆ
* ಮಾಣಿಕ್ ಶಾ ಪರೆಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯುವ ಮುನ್ನ ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು
* ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರಿನಿಂಗ್ ಟೆಸ್ಟ್ ಮಾಡಲು ಸೂಚನೆ
* ಧ್ವಜಾರೋಹಣ ನಡೆಯುವ ಸ್ಥಳದಲ್ಲಿ ಅಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ ನಿಯೋಜಿಸತಕ್ಕದ್ದು
* ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ, ನಾಡಗೀತೆ ಹಾಗೂ ರೈತ ಗೀತೆಗಳು ಮಾತ್ರ ಇರಲಿದೆ
* ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು
* ಮಳೆಯಿಂದ ಕಾರ್ಯಕ್ರಮ ಅಡ್ಡಿಯಾಗದಂತೆ ವ್ಯವಸ್ಥೆ ನೋಡಿಕೊಳ್ಳಬೇಕು
* ಕೋವಿಡ್ ಹಿನ್ನೆಲೆಯಲ್ಲಿ ದ್ವಜರೋಹಣ ಕಾರ್ಯಕ್ರಮಕ್ಕೆ ಅನುದಾನ ಸಹ ಕಡಿತ
* ಹಿಂದಿನ ಅವಧಿಯಲ್ಲಿ 50 ಲಕ್ಷ ಬಿಡುಗಡೆ ಮಾಡಲಾಗುತ್ತಿತ್ತು
* ಈ ಬಾರಿ ಸರಳವಾಗಿ ಆಚರಣೆ ಹಿನ್ನೆಲೆ 25 ಲಕ್ಷ ಅನುದಾನ ಬಿಡುಗಡೆ ಮಾಡಲು ಸೂಚನೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!