
ಬಾಗಲಕೋಟೆ : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಪಡೆಯಲು ವ್ಯಕ್ತಿಯೊಬ್ಬ ಮಹಿಳೆಯ ರೀತಿ ಸೀರೆಯುಟ್ಟು ಫೋಟೋ ತೆಗೆಸಿಕೊಂಡ ಹಾಗೂ ಒಂದೇ ಫೋಟೋವನ್ನು 3 ಕಡೆ ವಿವಿಧ ಹೆಸರಿನಲ್ಲಿ ಅಪ್ಲೋಡ್ ಮಾಡಿ ಕೂಲಿ ಹಣ ಪಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕನಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕನಾಳ ಗ್ರಾಮದಲ್ಲಿ ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ನಡೆದಿತ್ತು. ಅದರ ಕೂಲಿ ಹಣ ಪಡೆಯಲು ವ್ಯಕ್ತಿಯೋರ್ವ ಮಹಿಳೆಯ ರೀತಿ ವೇಷ ತೊಟ್ಟು ಫೋಟೋ ತೆಗೆಸಿಕೊಂಡಿದ್ದಾನೆ. ಆ ಫೋಟೋವನ್ನು ಸ್ವತ ಗ್ರಾಮ ಪಂಚಾಯತಿ ಅಧಿಕಾರಿಗಳೇ ಅಪ್ಲೋಡ್ ಮಾಡಿದ್ದಾರೆ. ಸೀರೆಯುಟ್ಟ ಪುರುಷನ ಫೋಟೋವನ್ನು ಮಂಗಳಮ್ಮ ಆರಿ ಎಂಬ ಹೆಸರಿನಲ್ಲಿ ಅಪ್ಲೋಡ್ ಮಾಡಿ ಬಿಲ್ ಪಡೆಯಲಾಗಿದೆ.
ಒಂದೇ ಫೋಟೊವನ್ನು ಮೂರು ಕಡೆ ಅಪ್ಲೋಡ್ ಮಾಡಿರುವುದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ. ಇದರಿಂದಾಗಿ ಈ ಅವ್ಯವಹಾರದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳೂ ಶಾಮೀಲಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಾಗಲಿ ಅಥವಾ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಹೇಗೆ ನಡೆಯಿತು ವಂಚನೆ?
- ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕನಾಳ ಗ್ರಾಮದಲ್ಲಿ ಫೆಬ್ರವರಿಯಲ್ಲಿ ಖಾತ್ರಿ ಕಾಮಗಾರಿ
- ಅದರ ಕೂಲಿ ಹಣ ಪಡೆಯಲು ಮಹಿಳೆಯ ರೀತಿ ವೇಷ ಧರಿಸಿ ಫೋಟೋ ತೆಗೆಸಿಕೊಂಡ ಗ್ರಾಮದ ವ್ಯಕ್ತಿ
- ಸ್ವತಃ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದಲೇ ಈ ಫೋಟೋ ಅಪ್ಲೋಡ್. ಬಿಲ್ ಮಂಜೂರು!
- ಮಂಗಳಮ್ಮ ಆರಿ ಎಂಬ ಹೆಸರಿಟ್ಟು ಕೂಲಿ ಹಣ ವಿತರಣೆ. ಭಾರಿ ಗೋಲ್ಮಾಲ್ ಕುರಿತು ತೀವ್ರ ಚರ್ಚೆ
- ಈ ಅಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಶಾಮೀಲಾಗಿರಬಹುದು ಎಂದು ದಟ್ಟ ಶಂಕೆ
ಭಾರತದಲ್ಲಿ ಅಮೆಜಾನ್
ಅಮೆಜಾನ್ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ನಗರದ ಜನರಿಗೆ ಮಾತ್ರವಲ್ಲ, ಗ್ರಾಮೀಣ ಜನರಿಗೂ ಸಮಯಕ್ಕೆ ಸರಿಯಾಗಿ ಸಾಮಾನುಗಳನ್ನ ತಲುಪಿಸುವ ಅಮೆಜಾನ್ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದೆ. ಇದರಿಂದ ನೂರಾರು ಹಳ್ಳಿಗಳ ಮೂಲಸೌಕರ್ಯ ಸುಧಾರಿಸಿ, ಸಾವಿರಾರು ಗ್ರಾಮಸ್ಥರಿಗೆ ಉದ್ಯೋಗ ಸಿಗಲಿದೆ.
2 ಸಾವಿರ ಕೋಟಿ ಹೂಡಿಕೆ
ಈ ವರ್ಷ ₹2 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದಾಗಿ ಅಮೆಜಾನ್ ಘೋಷಿಸಿದೆ. ಈ ಹಣವನ್ನು ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಸುಧಾರಿಸಲು, ಕಾರ್ಮಿಕರ ಹಿತರಕ್ಷಣೆಗೆ ಮತ್ತು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುವುದು ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ.
ಉದ್ಯೋಗಾವಕಾಶಗಳು
ಅಮೆಜಾನ್ ತನ್ನ ಫಿಲ್ಮೆಂಟ್ ಸೆಂಟರ್ಗಳು, ಸಾರ್ಟೇಶನ್ ಹಬ್ಗಳು ಮತ್ತು ವಿತರಣಾ ಜಾಲವನ್ನು ವಿಸ್ತರಿಸುವುದರಿಂದ ಹಲವು ರಾಜ್ಯಗಳಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಅಮೆಜಾನ್ನ 'ಸಂಭವ್ ವೆಂಚರ್ ಫಂಡ್' ಮೂಲಕ ಸ್ಟಾರ್ಟ್ಅಪ್ಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೂಡಿಕೆ ಹೆಚ್ಚಾಗಲಿದೆ. ಇದುಖಾಸಗಿ ಮತ್ತು ಗ್ರಾಮೀಣ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ