ಬೀಗ ತೆಗೆಯದ ಭ್ರಷ್ಟ ಅಧಿಕಾರಿ ಮನೆ ಸೀಜ್‌, ಪುತ್ರನ ಕೈಯಲ್ಲಿ ಕೀ ಕೊಟ್ಟು ಕಳುಹಿಸಿದ ಬಳಿಕ ಲೋಕಾಯುಕ್ತ ಶೋಧ

Published : Aug 18, 2023, 12:10 PM IST
ಬೀಗ ತೆಗೆಯದ ಭ್ರಷ್ಟ ಅಧಿಕಾರಿ ಮನೆ ಸೀಜ್‌, ಪುತ್ರನ ಕೈಯಲ್ಲಿ ಕೀ ಕೊಟ್ಟು ಕಳುಹಿಸಿದ ಬಳಿಕ ಲೋಕಾಯುಕ್ತ ಶೋಧ

ಸಾರಾಂಶ

ಮನೆಯ ಬೀಗ ತೆಗೆಯದೆ ಲೋಕಾಯುಕ್ತ ಅಧಿಕಾರಿಗಳನ್ನು ಆಟವಾಡಿಸಿದ ನಿವಾರಣಾಧಿಕಾರಿ ಡಾ.ಭೂವನಹಳ್ಳಿ ನಾಗರಾಜ್‌, ಪುತ್ರನ ಕೈಯಲ್ಲಿ ಮನೆಯ ಬೀಗ ಕೊಟ್ಟು ಕಳುಹಿಸಿದ್ದು ಈಗ ದಾಳಿ  ಮುಂದುವರಿಸಿದ್ದಾರೆ.

ತುಮಕೂರು (ಆ.18): ಮನೆಯ ಬೀಗ ತೆಗೆಯದೆ ಲೋಕಾಯುಕ್ತ ಅಧಿಕಾರಿಗಳನ್ನು ಆಟವಾಡಿಸಿದ ಜಿಲ್ಲಾ ಪಂಚಾಯತ್‌ನ ಸಾರ್ವಜನಿಕ ಕುಂದುಕೊರತೆ ನಿವಾರಣಾಧಿಕಾರಿ ಡಾ.ಭೂವನಹಳ್ಳಿ ನಾಗರಾಜ್‌ ಅವರ ಆದರ್ಶ ನಗರದ ಮನೆಯನ್ನು ಲೋಕಾಯುಕ್ತ ಅಧಿಕಾರಿಗಳು ಸೀಜ್‌ ಮಾಡಿದ್ದರು. ಇದೀಗ ಇಂದು ಬೂವನಹಳ್ಳಿ ನಾಗರಾಜು ಸಂಪರ್ಕಕ್ಕೆ ಸಿಕ್ಕ ಹಿನ್ನೆಲೆ ಪುತ್ರನ ಕೈಯಲ್ಲಿ ಮನೆಯ ಬೀಗ ಕೊಟ್ಟು ಕಳುಹಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತಹಸೀಲ್ದಾರ್‌ ಅಜಿತ್ ರೈಗೆ ಬೇಲ್‌!

ಹೀಗಾಗಿ ಪುತ್ರನ ಎದುರು ಸೀಜ್ ಮಾಡಿದ್ದ ಮನೆಯ ಬೀಗ ತೆಗೆದು ಲೋಕಾಯುಕ್ತ ಅಧಿಕಾರಿಗಳ ತಂಡ  ದಾಳಿ  ಮುಂದುವರಿಸಿದೆ. ತುಮಕೂರಿನ ಆದರ್ಶನಗರದಲ್ಲಿರುವ ಭವ್ಯ ಬಂಗಲೆ ಹೊಂದಿರುವ ಬೂವನಹಳ್ಳಿ ನಾಗರಾಜು ಸದ್ಯ ತುಮಕೂರು ಜಿಲ್ಲಾ ಪಂಚಾಯತ್ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯಾಗಿದ್ದಾರೆ. ಲೋಕಾಯುಕ್ತ ಎಸ್ ಪಿ ಅಶೋಕ್ ನೇತೃತ್ವದಲ್ಲಿ ದಾಳಿ ಮುಂದುವರಿದಿದೆ. ಓರ್ವ ಎಸ್ ಪಿ, ಓರ್ವ ಡಿವೈಎಸ್ ಪಿ, ಹಾಗೂ ಮೂವರು ಇನ್ ಸ್ಪೆಕ್ಟರ್ ಗಳ ನೇತೃತ್ವದಲ್ಲಿ ದಾಳಿ ನಡೆದಿದೆ.

 

ಕೊಡಗು ಅಪರ ಜಿಲ್ಲಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: 3.53 ಕೋಟಿ ಮೌಲ್ಯದ ನಗದು, ಆಸ್ತಿ ಪತ್ತೆ!

ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಡಾ.ಭೂವನಹಳ್ಳಿ ನಾಗರಾಜ್‌ ಅವರ ಮನೆಯ ತಪಾಸಣೆ ಕೈಗೊಳ್ಳಲು ಗುರುವಾರ ಬೆಳಗ್ಗೆ ಬೆಂಗಳೂರಿನ ಲೋಕಾಯುಕ್ತ ಡಿವೈಎಸ್ಪಿ ಪ್ರದೀಪ್‌ ಕುಮಾರ್‌ ನೇತೃತ್ವದ ತಂಡ ಆಗಮಿಸಿತ್ತು. ಆದರೆ, ಅವರ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಎಲ್ಲಿಗೋ ಹೋಗಿದ್ದು, ಅವರ ಆಗಮನಕ್ಕಾಗಿ ಲೋಕಾ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದ ಮನೆ ಮುಂದೆ ಕಾದು ಕುಳಿತಿದ್ದರು. ಈ ಮಧ್ಯೆ, ಮೊಬೈಲ್‌ ಮೂಲಕ ಅವರ ಮನೆಯವರನ್ನು ಸಂಪರ್ಕಿಸುವ ಯತ್ನ ಮಾಡಿದರಾದರೂ ಸಂಪರ್ಕಕ್ಕೆ ಅವರಾರ‍ಯರು ಸಿಗಲಿಲ್ಲ. ಸಂಜೆಯಾದರೂ ನಾಗರಾಜು ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮನೆಯನ್ನು ಸೀಜ್‌ ಮಾಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ