ಕೆಎಸ್ಸಾರ್ಟಿಸಿ : ಬೆಂಗಳೂರು ಬಸ್ ಪ್ರಯಾಣದರ ಕಡಿತ

Kannadaprabha News   | Kannada Prabha
Published : Jan 04, 2026, 09:09 AM IST
KSRTC

ಸಾರಾಂಶ

ಮಂಗಳೂರು: ಮಂಗಳೂರು ವಿಭಾಗದಿಂದ ಕೆಎಸ್ಸಾರ್ಟಿಸಿ ನಿಗಮದ ಕುಂದಾಪುರ/ ಉಡುಪಿ/ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆಯಾಗುವ ವಿವಿಧ ಮಾದರಿಯ ಬಸ್ಸುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10ರಿಂದ ಶೇ.15ರವರೆಗೆ ಪ್ರಯಾಣ ದರಗಳನ್ನು ಕಡಿಮೆಗೊಳಿಸಲಾಗಿದ್ದು, ಜ.5ರಿಂದ ಜಾರಿಗೆ ಬರಲಿದೆ.

ಮಂಗಳೂರು: ಮಂಗಳೂರು ವಿಭಾಗದಿಂದ ಕೆಎಸ್ಸಾರ್ಟಿಸಿ ನಿಗಮದ ಕುಂದಾಪುರ/ ಉಡುಪಿ/ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಣೆಯಾಗುವ ವಿವಿಧ ಮಾದರಿಯ ಬಸ್ಸುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10ರಿಂದ ಶೇ.15ರವರೆಗೆ ಪ್ರಯಾಣ ದರಗಳನ್ನು ಕಡಿಮೆಗೊಳಿಸಲಾಗಿದ್ದು, ಜ.5ರಿಂದ ಜಾರಿಗೆ ಬರಲಿದೆ.

ಪ್ರಯಾಣ ದರದ ವಿವರ:

ಅಂಬಾರಿ ಉತ್ಸವ: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ (ಪ್ರತಿ ಪ್ರಯಾಣಿಕರಿಗೆ) 1510 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು- ಉಡುಪಿ 1460 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1350 ರುಪಾಯಿ.ಡ್ರೀಮ್ ಕ್ಲಾಸ್: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1350 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು- ಉಡುಪಿ 1300 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1200 ರುಪಾಯಿ.

ಮಲ್ಟಿ ಆಕ್ಸಿಲ್- 2.0:

ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1310 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು– ಉಡುಪಿ 1250 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1150 ರುಪಾಯಿ.ಮಲ್ಟಿ ಆಕ್ಸಿಲ್: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1110 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು– ಉಡುಪಿ 1060 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 1000 ರುಪಾಯಿ.ನಾನ್ ಎಸಿ ಸ್ಲೀಪರ್: ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1050 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1000 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 900 ರುಪಾಯಿ.

ಪಲ್ಲಕ್ಕಿ ನಾನ್ ಎಸಿ ಸ್ಲೀಪರ್:

ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 1100 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 1060 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 950 ರುಪಾಯಿ.

ರಾಜಹಂಸ:

ಕುಂದಾಪುರ- ಬೆಂಗಳೂರು ಹಾಗೂ ಬೆಂಗಳೂರು- ಕುಂದಾಪುರ ಪ್ರಯಾಣ ದರ 750 ರು., ಉಡುಪಿ- ಬೆಂಗಳೂರು ಹಾಗೂ ಬೆಂಗಳೂರು – ಉಡುಪಿ 700 ರು., ಮಂಗಳೂರು- ಬೆಂಗಳೂರು ಹಾಗೂ ಬೆಂಗಳೂರು -ಮಂಗಳೂರು 650 ರುಪಾಯಿ ಎಂದು ಮಂಗಳೂರು ಕೆಎಸ್ಸಾರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದ್ವೇಷ ಭಾಷಣ ಕಾಯ್ದೆಯಡಿ ಭರತ್‌ ರೆಡ್ಡಿ ಬಂಧಿಸಿ : ಛಲವಾದಿ ನಾರಾಯಣಸ್ವಾಮಿ
ಬಳ್ಳಾರಿಯಲ್ಲಿ ಈಗ ಫೋಟೋ, ವಿಡಿಯೋ ಬಿಡುಗಡೆ ಸಮರ