
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ‘ಅಂಬಾರಿ ಬಸ್’ ಸೇವೆಯನ್ನು ಉನ್ನತೀಕರಿಸಲು ನಿರ್ಧರಿಸಿದ್ದು, ಅಂಬಾರಿ ಮಲ್ಟಿಆಕ್ಸೆಲ್(ಸ್ಲೀಪರ್) ಬಸ್ಗಳನ್ನು ಪರಿಚಯಿಸಲು ಮುಂದಾಗಿದೆ.
ಈ ಬಸ್ಗಳಿಗೆ ಬ್ರಾಡಿಂಗ್ ಹೆಸರು ನಿರೀಕ್ಷಿಸಿದ್ದು, ಅಂಬಾರಿ ಹೆಸರು ಉಳಿಸಿಕೊಂಡು ಹೊಸ ಬ್ರಾಂಡ್ ಹೆಸರು ಸೂಚಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದೆ.
ಸಾರ್ವಜನಿಕರಿಂದ ಬರುವ ಬ್ರಾಂಡ್ ಪರಿಕಲ್ಪನೆಗಳ ಪೈಕಿ ಅತ್ಯುತ್ತಮವಾದ ಒಂದಕ್ಕೆ .5 ಸಾವಿರ ಬಹುಮಾನ ನೀಡಲಾಗುವುದು. ಬ್ರಾಡಿಂಗ್ ಹೆಸರು ಸೂಚಿಸಲು ಫೆ.20 ಕಡೆಯ ದಿನವಾಗಿದೆ. ಆಸಕ್ತರು ಕೆಎಸ್ಸಾರ್ಟಿಸಿಯ ಫೇಸ್ಬುಕ್ (facebook/KSRTC.karnataka) ಮೂಲಕ ಬ್ರಾಂಡಿಂಗ್ ಹೆಸರು ಸಲ್ಲಿಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ