
ಬೆಂಗಳೂರು, ಅ.18): ಕೊರೋನಾ ಲಾಕ್ಡೌನ್ ಪರಿಣಾಮ ಆರ್ಥಿಕ ನಷ್ಟದಲ್ಲಿರುವ ನಿಗಮವು, ಸದ್ಯ ವಾರಾಂತ್ಯ ದಿನ ಪಡೆಯಲಾಗುತ್ತಿರುವ ಶೇ.10 ಹೆಚ್ಚುವರಿ ಪ್ರಯಾಣ ದರವನ್ನು ರದ್ದು ಮಾಡಿದೆ.
ಈ ಆದೇಶವು ಡಿ.31ರವರೆಗೆ ಚಾಲ್ತಿಯಲ್ಲಿರಲಿದ್ದು, ಎರಡೂವರೆ ತಿಂಗಳ ಕಾಲ ಪ್ರಯಾಣಿಕರು ಶೇ.10 ಹೆಚ್ಚುವರಿ ಹಣ ಪಾವತಿಸದೆ ವಾರಂತ್ಯದಲ್ಲಿ ಪ್ರಯಾಣಿಸಬಹದು.
HDK ಫೋನ್ ಸಂಭಾಷಣೆ ಲೀಕ್, ರೈಲು ಚಾಲಕಿಯಾದ ಬ್ಯೂಟಿ ಕ್ವೀನ್; ಅ.18ರ ಟಾಪ್ 10 ಸುದ್ದಿ!
ಕೊರೋನಾ ಭೀತಿ ಕಡಿಮೆಯಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವ ಸಲುವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಜ್ಜಾಗಿದೆ. ಈ ಹಿಂದೆ ವಾರಾಂತ್ಯ ದಿನಗಳಾದ ಶುಕ್ರವಾರದಿಂದ ಭಾನುವಾರದವರೆಗೆ ನಿಗಮದ ಐಷಾರಾಮಿ ಬಸ್ಗಳಲ್ಲಿ ಪ್ರಯಾಣ ದರವನ್ನು ಶೇ.10 ಹೆಚ್ಚಿಸಲಾಗಿತ್ತು.
ಮೊದಲೇ ಪ್ರಯಾಣಿಕರಿಲ್ಲದೆ ಸಂಕಷ್ಟದಲ್ಲಿರುವ ನಿಗಮ, ಈ ಕ್ರಮದಿಂದಾಗಿ ನಷ್ಟ ಅನುಭವಿಸಿತ್ತು. ಹೀಗಾಗಿ ದರ ಕಡಿತಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ