ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.3: ಸಚಿವ ಸುಧಾಕರ್‌

Kannadaprabha News   | Asianet News
Published : Oct 23, 2021, 03:41 PM ISTUpdated : Oct 23, 2021, 03:42 PM IST
ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂ.3: ಸಚಿವ ಸುಧಾಕರ್‌

ಸಾರಾಂಶ

*   2ನೇ ಡೋಸ್‌ ಪಡೆಯದವರಿಗೆ ಫೋನ್‌ ಮಾಡ್ತೀವಿ *   ರಾಜ್ಯದಲ್ಲಿ ಸದ್ಯ 60 ಲಕ್ಷ ಡೋಸ್‌ ಲಸಿಕೆ ದಾಸ್ತಾನು ಇದೆ  *   ಕೊರೋನಾ ಸಂಪೂರ್ಣ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡ   

ಹುಬ್ಬಳ್ಳಿ(ಅ.23): ಅಮೆರಿಕ(America), ಬ್ರೆಜಿಲ್‌(Brazil), ಜಪಾನ್‌ಗಳಿಗಿಂತಲೂ(Japan) ಹೆಚ್ಚಿನ ಜನರಿಗೆ ಕೋವಿಡ್‌ ಲಸಿಕೆ ನೀಡಿರುವುದು ಭಾರತದ ಐತಿಹಾಸಿಕ ಸಾಧನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವೇ ಕಾರಣ ಎಂದ ಆರೋಗ್ಯ ಸಚಿವ ಕೆ.ಸುಧಾಕರ್‌(K Sudhakar), ಕೊರೋನಾ ಸಂಪೂರ್ಣ ಕಡಿಮೆಯಾಗಿದೆ ಎಂಬ ಉದಾಸೀನತೆ ಬೇಡ. ಮೊದಲ ಡೋಸ್‌ ಹಾಕಿಸಿಕೊಂಡು 2ನೆಯ ಡೋಸ್‌ ಹಾಕಿಸಿಕೊಳ್ಳದವರು ಕೂಡಲೇ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 100 ಕೋಟಿ ಲಸಿಕೆ(Vaccine) ಸಾಧನೆ ವಿಚಾರ ಹಂಚಿಕೊಂಡ ಸಚಿವರು, ರಾಜ್ಯದಲ್ಲಿ(Karnataka) ಶೇ.62ರಷ್ಟು ಜನರು ಎರಡನೆಯ ಡೋಸ್‌ ಪಡೆಯಬೇಕಿದೆ. ಮೊದಲ ಡೋಸ್‌ ಪಡೆದು, ಎರಡನೆಯ ಡೋಸ್‌ ಪಡೆಯದೆ ಅವಧಿ ಮುಗಿದವರ ಸಂಖ್ಯೆ 53 ಲಕ್ಷ. ಇಂಥವರನ್ನು ಫೋನ್‌ ಮೂಲಕ ಸಂಪರ್ಕಿಸಿ ಲಸಿಕೆ ಕೊಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಶೇ. 83ರಷ್ಟು ಮೊದಲ ಡೋಸ್‌, ಶೇ.38ರಷ್ಟು ಎರಡೂ ಡೋಸ್‌(Dose) ಪಡೆದಿದ್ದಾರೆ. ದೇಶದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಗುಜರಾತ್‌(Gujrat), ಮಧ್ಯಪ್ರದೇಶ(Madhya Pradesh) ಮೊದಲರೆಡು ಸ್ಥಾನಗಳಲ್ಲಿವೆ ಎಂದರು. ಲಸಿಕೆ ವಿತರಣೆ ಆರಂಭಿಸಿದಾಗ ಕೆಲವರು ಒಡಕಿನ ಮಾತುಗಳನ್ನು ಆಡಿದರು. ಈ ರೀತಿ ಟೀಕೆ ಮಾಡಿದವರೇ ಕ್ಯೂನಲ್ಲಿ ನಿಂತು ಲಸಿಕೆ ಪಡೆದರು ಎಂದು ಕುಟುಕಿದರು.

ಲಸಿಕಾಕರಣದ ಶತಕೋಟಿ ಸಾಧನೆ: ಇನ್ನು 2ನೇ ಡೋಸ್‌ ಮೇಲೆ ಕೇಂದ್ರದ ಗಮನ!

ಲಸಿಕಾಕರಣದಲ್ಲಿ ಶ್ರೀಮಂತ-ಬಡವ, ಜಾತಿ, ಧರ್ಮ ಎಂಬ ಭೇದ ಭಾವ ಮಾಡದೇ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ನೀಡಿದ್ದೇವೆ ಎಂದರು. ಡಿಸೆಂಬರ್‌ ಅಂತ್ಯದೊಳಗೆ ಶೇ.90ರಷ್ಟು ಜನರಿಗೆ ಎರಡೂ ಡೋಸ್‌ ಲಸಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಸದ್ಯ 60 ಲಕ್ಷ ಡೋಸ್‌ ಲಸಿಕೆ ದಾಸ್ತಾನು ಇದೆ ಎಂದು ಸ್ಪಷ್ಟಪಡಿಸಿದರು.

ಮೊದಲು ಟೀಕೆ: ಬಳಿಕ ಕ್ಯೂ:

ಹೊಸದಾಗಿ ಲಸಿಕೆ ಬಂದಾಗ ಅದು ‘ಮೋದಿ ಲಸಿಕೆ’ (Narendra Modi) ಎಂದು ಟೀಕೆ ಮಾಡುವ ಮೂಲಕ ಜನರಲ್ಲಿ ತಪ್ಪು ಕಲ್ಪನೆ ವಿರೋಧ ಪಕ್ಷಗಳು ಮೂಡಿಸಿದವು. ಅದರಲ್ಲೂ ಕಾಂಗ್ರೆಸ್‌(Congress) ಜನರ ಹಾದಿ ತಪ್ಪಿಸುವ ಕೆಲಸ ಬಹಳ ಮಾಡಿತು. ಒಗ್ಗಟ್ಟಾಗಿ ಸಾಂಕ್ರಾಮಿಕ ರೋಗ(Infectious Disease) ಎದುರಿಸಬೇಕಾದ ಸಂದರ್ಭದಲ್ಲಿ ಒಡಕಿನ ಮಾತುಗಳನ್ನಾಡಿದರು. ಹೀಗೆ ಟೀಕೆ ಮಾಡಿದವರೇ ಮಾರ್ಚ್‌ನಲ್ಲೇ ಕ್ಯೂ ನಿಂತುಕೊಂಡು ಲಸಿಕೆ ಪಡೆದರು ಎಂದು ಕುಟುಕಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!