Bengaluru: 27 ಸಾವಿರ ಕೋಟಿಯ ಫೆರಿಫೆರಲ್‌ ರಿಂಗ್‌ ರೋಡ್‌, ಸರ್ಕಾರಿ ಕಂಪನಿಗಳಿಂದ ಸಾಲ ಕೇಳಿದ ಕರ್ನಾಟಕ

Published : Nov 06, 2024, 03:55 PM ISTUpdated : Nov 06, 2024, 03:57 PM IST
Bengaluru: 27 ಸಾವಿರ ಕೋಟಿಯ ಫೆರಿಫೆರಲ್‌ ರಿಂಗ್‌ ರೋಡ್‌, ಸರ್ಕಾರಿ ಕಂಪನಿಗಳಿಂದ ಸಾಲ ಕೇಳಿದ ಕರ್ನಾಟಕ

ಸಾರಾಂಶ

ರಾಜ್ಯ ರಾಜಧಾನಿಯ ಸುತ್ತ ಸಂಪರ್ಕವನ್ನು ಇನ್ನಷ್ಟು ಸುಧಾರಿಸಲು ಕರ್ನಾಟಕ ಸರ್ಕಾರವು ಬಹುಕಾಲದಿಂದ ವಿಳಂಬವಾಗಿರುವ ಮೂಲಸೌಕರ್ಯ ಯೋಜನೆಯಾದ ಫೆರಿಫೆರಲ್‌ ರಿಂಗ್‌ ರೋಡ್‌ ನಿರ್ಮಾಣ ಕಾರ್ಯವನ್ನು ತೀವ್ರಗೊಳಿಸುವ ಗುರಿ ಹೊಂದಿದೆ.

ಬೆಂಗಳೂರು (ನ.6): ಬಹು ನಿರೀಕ್ಷಿತ ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಯೋಜನೆಯು ಸಾಕಾರಗೊಳ್ಳುವ ಹಂತದಲ್ಲಿದೆ, 73 ಕಿಲೋಮೀಟರ್‌ ರೋಡ್‌ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರವು ಸಾರ್ವಜನಿಕ ವಯಲದ ಉದ್ಯಮಗಳಿಂದ (ಪಿಎಸ್‌ಯು) ಸಾಲವನ್ನು ಕೋರಿದೆ. ನಗರದ ಸುತ್ತ ನಿರ್ಮಾಣವಾಗಲಿರುವ 73 ಕಿಮೀ ರಸ್ತೆಯನ್ನು ಜನವರಿಯಲ್ಲಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಲಾಗಿದ್ದು, ನಿರ್ಮಾಣ ಮತ್ತು ಭೂಸ್ವಾಧೀನ ವೆಚ್ಚವನ್ನು ಒಳಗೊಂಡಂತೆ 27,000 ಕೋಟಿ ರೂಪಾಯಿ ವೆಚ್ಚವಾಗಲಿದೆ.

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ಎಲ್ ಕೆ ಅತೀಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಯೋಜನೆಗೆ ಧನಸಹಾಯ ನೀಡಲು ಸರ್ಕಾರವು ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಹೌಸಿಂಗ್‌ & ಅರ್ಬನ್‌ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌-ಹುಡ್ಕೋ), ರೂರಲ್ ಎನರ್ಜಿ ಕಾರ್ಪೊರೇಷನ್ (ಆರ್‌ಇಸಿ) ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್‌ಗೆ (ಪಿಎಫ್‌ಸಿಗೆ) ಸಾಲ ನೀಡುವಂತೆ ಸಂಪರ್ಕಿಸಿದೆ. "ಯಾರು ಉತ್ತಮ ಬಡ್ಡಿದರಗಳನ್ನು ನೀಡುತ್ತಾರೆ, ನಾವು ಅವರಿಂದ ಸಾಲವನ್ನು ಪಡೆದುಕೊಳ್ಳುತ್ತೇವೆ' ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಲಿಮಿಟೆಡ್‌ನ ಮುಖ್ಯಸ್ಥರಾಗಿರುವ ಅತೀಕ್, ಯೋಜನೆಯ ಅನುಷ್ಠಾನಕ್ಕಾಗಿ ರಚಿಸಲಾದ ವಿಶೇಷ ಉದ್ದೇಶದ ವಾಹನದ ಬಗ್ಗೆ ಸೋಮವಾರ ಸಭೆ ನಡೆಸಿದರು. ಮಂಗಳವಾರದ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, ಮುಂದಿನ ಆರು ತಿಂಗಳೊಳಗೆ ಎಂಟು ಪಥದ ರಸ್ತೆ, ಸೇವಾ ಮಾರ್ಗ ಮತ್ತು ಮೆಟ್ರೋ ರೈಲು ಹಳಿಗಾಗಿ ಟೆಂಡರ್‌ಗಳನ್ನು ಬಿಡುವ ನಿರೀಕ್ಷೆಯಿದೆ ಎಂದು ಅವರು ಬರೆದಿದ್ದಾರೆ.

"73-ಕಿಮೀ PRR ಗೆ ಅಗತ್ಯವಿರುವ 2,400 ಎಕರೆಗಾಗಿ ಭೂಮಾಲೀಕರಿಗೆ ಹಣ ಪಾವತಿಸಲು ಅಂತಿಮಗೊಳಿಸುವಿಕೆಯನ್ನು ಪ್ರಾರಂಭಿಸಿದ್ದೇವೆ" ಎಂದು ಅವರು ಹೇಳಿದರು, ವಿಶೇಷ ಉದ್ದೇಶದ ವಾಹನವು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,  ಬೆಂಗಳೂರು ಮೆಟ್ರೋ ಹಾಗೂ ಇತರ ಏಜೆನ್ಸಿಗಳೊಂದಿಗೆ ವಿನ್ಯಾಸ ಮತ್ತು ವಿನಿಮಯದ ಬಗ್ಗೆ ಚರ್ಚಿಸಿದೆ.

ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳ ಮೊದಲ ಜಾಬ್‌ ಏನಾಗಿತ್ತು? ಇಲ್ಲಿದೆ ಡೀಟೇಲ್ಸ್‌..

2006 ರಲ್ಲಿ ಪ್ರಸ್ತಾಪಿಸಲಾದ ಯೋಜನೆಯು ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರದ ವಿವಾದಗಳಿಂದಾಗಿ ಬಹುಕಾಲದಿಂದ ವಿಳಂಬವನ್ನು ಎದುರಿಸುತ್ತಿದೆ. ಜುಲೈ 2022 ರಲ್ಲಿ ನಡೆದ ಟೆಂಡರ್‌ಗೆ ಯಾವುದೇ ಬಿಡ್ಡರ್‌ಗಳು ಬಂದಿರಲಿಲ್ಲ.

PPF ಯೋಜನೆ: ನೀವು ಹೂಡುವ 10 ಸಾವಿರ 82 ಲಕ್ಷ ರೂಪಾಯಿ ಆಗುತ್ತದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!