
ಬೆಂಗಳೂರು, (ಜೂನ್.03): ರಾಜ್ಯದಲ್ಲಿ ಇಂದು (ಬುಧವಾರ) ಕೊರೋನಾ ಸ್ಪೋಟವಾಗಿದ್ದು, ಬರೋಬ್ಬರಿ 267 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾಗಿದೆ. 267ರ ಪೈಕಿ 250 ಜನರು ಅಂತರ್ ರಾಜ್ಯದಿಂದ ಬಂದವರಲ್ಲಿ ಕೊರೋನಾ ಅಟ್ಯಾಕ್ ಆಗಿದೆ.
ಚಾಮರಾಜನಗರ ದ.ಭಾರತದಲ್ಲೇ ಕೊರೋನಾ ಮುಕ್ತ ಏಕೈಕ ಜಿಲ್ಲೆ!
ಇನ್ನು ಇವತ್ತು ಒಂದೇ ದಿನ 111 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಇದುವರೆಗೆ 1514 ಜನ ಬಿಡುಗಡೆಯಾದಂತಾಗಿದೆ.
2494 ಸಕ್ರಿಯ ಪ್ರಕರಣಗಳು ಇದ್ದು ಈವರೆಗೆ ಒಟ್ಟು 53 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದಾರೆ. 16 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದ ಹೆಲ್ತ್ ಬುಲೆಟಿನ್ನ ತಿಳಿಸಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
* ಕಲಬುರಗಿ-105
* ಉಡುಪಿ-62
* ಬೆಂಗಳೂರು ನಗರ-20
* ಮಂಡ್ಯ- 13
* ಯಾದಗಿರಿ- 9
* ರಾಯಚೂರು- 35
* ಹಾಸನ- 01
* ದಾವಣಗೆರೆ- 03
* ವಿಜಯಪುರ-06
* ದಕ್ಷಿಣ ಕನ್ನಡ-02
* ಮೈಸೂರು-02
* ಬಾಗಲಕೋಟೆ- 02
* ಶಿವಮೊಗ್ಗ- 02
* ಕೋಲಾರ-2
* ಬಳ್ಳಾರಿ-01
* ಧಾರವಾಡ-01
* ಬೆಂಗಳೂರು ಗ್ರಾಮಾಂತರ- 01
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ