LIVE NOW
Published : May 12, 2026, 06:37 AM ISTUpdated : May 12, 2026, 07:57 AM IST

Karnataka News Live: ಮಳೆ ನಡುವೆ ಮಧ್ಯರಾತ್ರಿ ಕೇಳಿದ ಭಾರೀ ಸದ್ದು… ಹೊರಗೆ ಬಂದು ನೋಡಿದ ಗ್ರಾಮಸ್ಥರಿಗೆ ಕಾದಿತ್ತು ಶಾಕ್!

ಸಾರಾಂಶ

 

ಹುಬ್ಬಳ್ಳಿ: ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಅಪಸ್ವರದ ಮಧ್ಯೆಯೇ ಇಲ್ಲೊಬ್ಬ ಗೃಹಿಣಿ, ಗೃಹಲಕ್ಷ್ಮಿಯಿಂದ ಬಂದ ಹಣದಲ್ಲಿ ಬೋರ್‌ವೆಲ್‌ ಕೊರೆಸಿದ್ದು, 5 ಇಂಚು ನೀರು ಬಂದಿದೆ. ಇದರಿಂದ ನೀರಾವರಿ ಮಾಡಲು ಮುಂದಾಗಿದ್ದಾರೆ.

ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಈರವ್ವ ಭರಮಪ್ಪ ಅಂಗಡಿ (52) ಬೋರ್‌ವೆಲ್‌ ಕೊರೆಸಿದ ಗೃಹಲಕ್ಷ್ಮಿ. ಈರವ್ವ ಹಾಗೂ ಪತಿ ಭರಮ್ಮಣ್ಣ ಅಂಗಡಿಗೆ 2.5 ಎಕರೆ ಜಮೀನಿದ್ದು, ಇಬ್ಬರು ಮಕ್ಕಳಿದ್ದಾರೆ. ಇವರದು ಖುಷ್ಕಿ ಜಮೀನಾಗಿದ್ದು ಮಳೆಯನ್ನೇ ಆಶ್ರಯಿಸಿದೆ. ಗೃಹಲಕ್ಷ್ಮಿಯಿಂದ ಬರುತ್ತಿದ್ದ ಹಣವನ್ನು ಮೊದಲ ಒಂದೆರಡು ಕಂತು (29 ಕಂತು ಬಂದಿದೆ) ಬಳಸಿಕೊಂಡಿದ್ದುಂಟು. ಆ ಬಳಿಕ ಕೂಡಿಟ್ಟಿದ್ದು ₹54,000 ಜಮೆ ಆಗಿದೆ. ₹50,000 ವ್ಯಯಿಸಿ 220 ಅಡಿ ಬೋರ್‌ವೆಲ್‌ ಕೊರೆಸಿದ್ದಾರೆ. 90 ಅಡಿಗೆ 5 ಇಂಚು ನೀರು ಸಹ ಬಂದಿದ್ದು ಸಂಭ್ರಮಿಸಿದ್ದಾರೆ. ಗೃಹಲಕ್ಷ್ಮಿಯಿಂದ ಬಂದ ಹಣದಲ್ಲಿ ₹4,000 ಉಳಿದಿದ್ದು, ಮೋಟಾರ್‌ ಅಳವಡಿಸಲು ₹80,000 ವೆಚ್ಚ ತಗುಲಿದೆ. ಇದಕ್ಕಾಗಿ ವಿವಿಧೆಡೆ ಸಾಲ ಮಾಡಿದ್ದಾರೆ.

07:57 AM (IST) May 12

ಮಳೆ ನಡುವೆ ಮಧ್ಯರಾತ್ರಿ ಕೇಳಿದ ಭಾರೀ ಸದ್ದು… ಹೊರಗೆ ಬಂದು ನೋಡಿದ ಗ್ರಾಮಸ್ಥರಿಗೆ ಕಾದಿತ್ತು ಶಾಕ್!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಬೃಹತ್ ಮರವೊಂದು ಮನೆಯ ಮೇಲೆ ಬಿದ್ದಿದೆ. ಘಟನೆಯಲ್ಲಿ ವನಜಾಕ್ಷಿ ಎಂಬುವವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ, ಮನೆ ಕಳೆದುಕೊಂಡು ಕುಟುಂಬ ಬೀದಿಗೆ ಬಂದಿದೆ.
Read Full Story

07:56 AM (IST) May 12

ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಹಾಕಿಸಿದ ಹುಬ್ಬಳ್ಳಿಯ ಈರವ್ವ

ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಗೃಹಿಣಿಯೊಬ್ಬರು, ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ತಮ್ಮ ಜಮೀನಿನಲ್ಲಿ ಬೋರ್‌ವೆಲ್‌ ಕೊರೆಸಿದ್ದಾರೆ. ₹50,000 ವೆಚ್ಚದಲ್ಲಿ ಕೊರೆದ ಬೋರ್‌ವೆಲ್‌ನಲ್ಲಿ 5 ಇಂಚು ನೀರು ಬಂದಿದ್ದು, ನೀರಾವರಿ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Read Full Story

07:36 AM (IST) May 12

ಮಾವು-ಹಲಸು ಮೇಳದಲ್ಲಿ ದೇವೇಗೌಡ, ₹300 ಕೊಟ್ಟು ರೈತನಿಂದ ಹಲಸು ಖರೀದಿಸಿದ ಬಳಿಕ ಸರ್ಕಾರಕ್ಕೆ ಕೊಟ್ಟ ಎಚ್ಚರಿಕೆ ಏನು?!”

Deve Gowda at Mango Mela ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ ಕಬ್ಬನ್ ಪಾರ್ಕ್‌ನಲ್ಲಿ ನಡೆದ ಮಾವು-ಹಲಸು ಮೇಳಕ್ಕೆ ವ್ಹೀಲ್‌ ಚೇರ್‌ನಲ್ಲಿ ಭೇಟಿ ನೀಡಿ, ಹಣ್ಣು ವೀಕ್ಷಿಸಿದರು. ರೈತರೊಬ್ಬರಿಂದ ಹಣ ಕೊಟ್ಟೇ ಹಲಸಿನ ಹಣ್ಣು ಖರೀದಿಸಿದರು ಬಳಿಕ ದೇವೇಗೌಡರ ಆ ಮಾತು ವೈರಲ್ ಆಗಿದೆ.

Read Full Story

07:27 AM (IST) May 12

ಹುಬ್ಬಳ್ಳಿಯಿಂದ ವಿಜಯಪುರಕ್ಕೆ ಚಲಿಸುವ ರೈಲುಗಳು ಇನ್ಮುಂದೆ ಕಾಯಂ; ಟಿಕೆಟ್ ದರ ಶೇ.25-ಶೇ.30ರಷ್ಟು ಇಳಿಕೆ

ಹುಬ್ಬಳ್ಳಿಯಿಂದ ಯೋಗ ನಗರಿ ಋಷಿಕೇಶ್‌ ಮತ್ತು ವಿಜಯಪುರಕ್ಕೆ ಸಂಚರಿಸುವ ಮೂರು ವಿಶೇಷ ರೈಲುಗಳನ್ನು ಕಾಯಂಗೊಳಿಸಲಾಗಿದೆ. ಇದರಿಂದಾಗಿ ಟಿಕೆಟ್ ದರಗಳು ಶೇ. 25-30 ರಷ್ಟು ಕಡಿಮೆಯಾಗಲಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Read Full Story

07:10 AM (IST) May 12

ಮೋದಿ ಹಾದುಹೋಗುವ ರಸ್ತೆಯಲ್ಲೇ ಜಿಲೆಟಿನ್ ಕಡ್ಡಿಗಳು ಸಿಕ್ಕಿದ್ದು ಹೇಗೆ? ಇದು ಯಾರ ಸಂಚು? ತನಿಖೆಗಿಳಿದ ಎನ್‌ಐಎ! ಇದು ಯಾರ ಸಂಚು?

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುವ ವೇಳೆ ಅವರ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಆರಂಭಿಸಿದೆ. 

Read Full Story

07:03 AM (IST) May 12

Bengaluru - ಐಒಸಿ ಜಂಕ್ಷನ್‌ನ ಹಳೇ ಫ್ಲೈಓವರ್‌ ನೆಲಸಮ; ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

ಬೆಂಗಳೂರಿನ ಬಾಣಸವಾಡಿಯ ಐಒಸಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು, ಹಳೆಯ ಫ್ಲೈಓವರ್ ಅನ್ನು ನೆಲಸಮಗೊಳಿಸಿ ₹436 ಕೋಟಿ ವೆಚ್ಚದಲ್ಲಿ ಹೊಸ ಸರ್ಕ್ಯುಲರ್ ಫ್ಲೈಓವರ್ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯಿಂದಾಗಿ ಕೆಲ  ಪ್ರದೇಶಗಳಲ್ಲಿ ತೀವ್ರ ಸಂಚಾರ ವ್ಯತ್ಯಯ ಉಂಟಾಗುವ ನಿರೀಕ್ಷೆಯಿದೆ.

Read Full Story

More Trending News