
ಬೆಂಗಳೂರು, (ಮೇ.31): ಕೋವಿಡ್ 19 ವೈರಸ್ ಲಾಕ್ಡೌನ್ ಜೂನ್ 30ರ ವರೆಗೆ ವಿಸ್ತರಿಸಲಾಗಿದ್ದು, 5ನೇ ಹಂತದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
"
ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ತನ್ನ ಹೊಸ ಗೈಡ್ಲೈನ್ಸ್ ಸಹ ಇಂದು (ಭಾನುವಾರ) ರಿಲೀಸ್ ಮಾಡಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನೇ ಯಥಾವತ್ ರಾಜ್ಯ ಸರ್ಕಾರ ಪಾಲಿಸಿದೆ, ಹಾಗಾದ್ರೆ, ಈ ಮಾರ್ಗಸೂಚಿ ಅನ್ವಯ ಏನಿರುತ್ತೆ? ಏನಿರಲ್ಲ? ಎನ್ನುವುದು ಈ ಕೆಳಗಿನಂತಿದೆ.
"
ದೀಪಿಕಾ ಹೇಳಿದ ದಾಂಪತ್ಯ ಜೀವನದ ಗುಟ್ಟು, ಏನಾಯ್ತು ಲಡಾಖ್ ಬಿಕ್ಕಟ್ಟು? ಮೇ.31ರ ಟಾಪ್ 10 ಸುದ್ದಿ!
*ರಾಜ್ಯ ಸರ್ಕಾರದಿಂದಲೂ ಜೂನ್ 30ರ ವರೆಗೆ ಲಾಕ್ಡೌನ್
* ಕಂಟೈನ್ಮೆಂಟ್ ಝೋನ್ಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್
* ಜೂನ್ 8ರಿಂದ ದೇವಾಲಯ, ಚರ್ಚ್, ಮಸೀದಿ ತೆರೆಯಲು ಅನುಮತಿ
* ಚಿತ್ರಮಂದಿರ, ಮೆಟ್ರೋ ಸಂಚಾರ, ಮನೋರಂಜನೆ ಸ್ಥಳಗಳಿಗೆ ನಿರ್ಬಂಧ
* ಶಾಲಾ-ಕಾಲೇಜು ಓಪನ್ ಇರಲ್ಲ
* ರಾತ್ರಿ 9ರಿಂದ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಇರಲಿದೆ.
* ಮದ್ವೆಗೆ 50ಜನ, ಅಂತ್ಯ ಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶ
* ಹೋಟೆಲ್, ರೆಸ್ಟೋರೆಂಟ್ ಲಭ್ಯ
* ಶಾಪಿಂಗ್ ಮಾಲ್ ತೆರೆಯಲು ಒಪ್ಪಿಗೆ
* 65 ವರ್ಷ ಮೆಲ್ಪಟ್ಟವರು, ಗರ್ಭಿಣಿಯರು, 10 ವರ್ಷದೊಳಗಿನವರು ಹೊರಬರುವಂತಿಲ್ಲ.
* ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ
* ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ