‘ಪಿಎಂ ಕೇ​ರ್ಸ್’ ನಿಧಿಯಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್‌: 34 ಕೋಟಿ ರು. ಅನುದಾನ ಮಂಜೂರು!

Published : Jun 24, 2020, 09:46 AM ISTUpdated : Jun 24, 2020, 11:08 AM IST
‘ಪಿಎಂ ಕೇ​ರ್ಸ್’ ನಿಧಿಯಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್‌: 34 ಕೋಟಿ ರು. ಅನುದಾನ ಮಂಜೂರು!

ಸಾರಾಂಶ

‘ಪಿಎಂ ಕೇ​ರ್ಸ್’ ನಿಧಿಯಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್‌| 34 ಕೋಟಿ ರು. ಅನುದಾನ ಮಂಜೂರು

ನವದೆಹಲಿ(ಜೂ.24): ಕೊರೋನಾ ವಿರುದ್ಧ ಹೋರಾಡಲು ‘ಪಿಎಂ ಕೇ​ರ್‍ಸ್’ ನಿಧಿ ಸ್ಥಾಪಿಸಿದ್ದ ಕೇಂದ್ರ ಸರ್ಕಾರ, ಅದರಲ್ಲಿ ಸಂಗ್ರಹವಾದ ಹಣದಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್‌ ಹಾಗೂ 34 ಕೋಟಿ ರು. ಅನುದಾನ ಮಂಜೂರು ಮಾಡಿದೆ.

ಚೀನಾ ಹಣಿಯಲು ಮೋದಿ ಸೂಕ್ತ: ನಮೋ ಮೇಲೆ ಶೇ. 89ರಷ್ಟು ಜನರಿಗೆ ನಂಬಿಕೆ!

50 ಸಾವಿರ ಸ್ವದೇಶಿ ವೆಂಟಿಲೇಟರ್‌ ಖರೀದಿಸಲು ಸರ್ಕಾರ ಅನುಮತಿ ನೀಡಿದೆ. ಆ ಪೈಕಿ ಈಗಾಗಲೇ 3000 ವೆಂಟಿಲೇಟರ್‌ಗಳು ತಯಾರಾಗಿದ್ದು, ಅದರಲ್ಲಿ 1300 ವೆಂಟಿಲೇಟರ್‌ಗಳನ್ನು ವಿವಿಧ ರಾಜ್ಯಗಳಿಗೆ ಹಸ್ತಾಂತರಿಸಿದೆ. ಕೊರೋನಾದಿಂದ ಹೆಚ್ಚು ನಲುಗಿರುವ ಮಹಾರಾಷ್ಟ್ರ ಹಾಗೂ ದೆಹಲಿಗೆ ತಲಾ 275, ಗುಜರಾತ್‌ಗೆ 175, ಬಿಹಾರಕ್ಕೆ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್‌ಗಳನ್ನು ಕೊಡಲಾಗಿದೆ.

ವಲಸೆ ಕಾರ್ಮಿಕರ ಸಾಗಣೆಗಾಗಿ ಕರ್ನಾಟಕಕ್ಕೆ 34 ಕೋಟಿ ರು. ಕೊಟ್ಟಿದೆ. ಮಹಾರಾಷ್ಟ್ರಕ್ಕೆ 181 ಕೋಟಿ, ಉತ್ತರಪ್ರದೇಶಕ್ಕೆ 103, ತಮಿಳುನಾಡಿಗೆ 83, ಗುಜರಾತ್‌ಗೆ 66, ದೆಹಲಿಗೆ 55, ಪಶ್ಚಿಮ ಬಂಗಾಳಕ್ಕೆ 53, ಬಿಹಾರಕ್ಕೆ 51, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ತಲಾ 50 ಕೋಟಿ ರು. ಸಿಕ್ಕಿದೆ.

'ಬಿಜೆಪಿ ಸರ್ಕಾರ ಉತ್ತಮ ಜನಪರ ಆಡಳಿತ ನೀಡುವಲ್ಲಿ ವಿಫಲ'

ಪಿಎಂ ಕೇ​ರ್‍ಸ್ ನಿಧಿಯಡಿ 3100 ಕೋಟಿ ರು. ಅನ್ನು ಮೇ 14ರಂದು ಮಂಜೂರು ಮಾಡಿದ್ದ ಕೇಂದ್ರ ಸರ್ಕಾರ ಆ ಪೈಕಿ 2 ಸಾವಿರ ಕೋಟಿ ರು.ಗಳನ್ನು 50 ಸಾವಿರ ವೆಂಟಿಲೇಟರ್‌ ಖರೀದಿಗೆ ಬಳಲು ಉದ್ದೇಶಿಸಿತ್ತು. ವಲಸಿಗ ಕಾರ್ಮಿಕರ ಸೌಲಭ್ಯಕ್ಕೆ 1000 ಕೋಟಿ ರು. ನೀಡುವುದಾಗಿ ತಿಳಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್