
ಬೆಂಗಳೂರು (ಆ.18): ರಾಜ್ಯದ ಬೊಕ್ಕಸಕ್ಕೆ ಭರ್ಜರಿ ಆದಾಯ ತಂದುಕೊಡುವ ‘ಮದ್ಯ ಮಾರಾಟ’ದ ಮೇಲಿನ ಸರ್ಕಾರದ ನಿರೀಕ್ಷೆಗಳು ಈ ಬಾರಿ ಸಂಪೂರ್ಣ ತಲೆಕೆಳಗಾಗಿವೆ. ಅಬಕಾರಿ ಇಲಾಖೆಯು ರಾಜ್ಯಾದ್ಯಂತ ಬಾಕಿ ಉಳಿದಿದ್ದ ಬಾರ್ ಲೈಸನ್ಸ್ಗಳನ್ನು ಇ-ಹರಾಜು (E-Auction) ಮೂಲಕ ಮಾರಾಟ ಮಾಡಿ ಒಂದು ಸಾವಿರ ಕೋಟಿ ರೂ. ಆದಾಯ ಬಾಚಿಕೊಳ್ಳಲು ಹಾಕಿದ್ದ ಬೃಹತ್ ಯೋಜನೆಗೆ ಉದ್ಯಮಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಣಾಮವಾಗಿ, ಬರೋಬ್ಬರಿ ₹1,000 ಕೋಟಿ ರಾಜಸ್ವ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಲಭಿಸಿದ್ದು ಕೇವಲ ಅಂದಾಜು ₹125 ಕೋಟಿ ಮಾತ್ರ!
ರಾಜ್ಯದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿವಿಧ ವರ್ಗದ ಲೈಸನ್ಸ್ಗಳನ್ನು ಸರ್ಕಾರ ಹರಾಜಿಗೆ ಇಟ್ಟಿತ್ತು:
ವಿವಿಧ ಕೋಟಾದಡಿ ವಿತರಣೆಯಾಗದೆ ಬಾಕಿ ಉಳಿದಿದ್ದ ಪರವಾನಗಿಗಳು.
ನಿಯಮ ಉಲ್ಲಂಘಿಸಿ ಸ್ಥಗಿತಗೊಂಡಿದ್ದ ಮತ್ತು ಮುಟ್ಟುಗೋಲು ಹಾಕಿಕೊಂಡ ಲೈಸನ್ಸ್ಗಳು.
ನಿಗದಿತ ಅವಧಿಯಲ್ಲಿ ನವೀಕರಣಗೊಳ್ಳದ (Unrenewed) ಮತ್ತು ರದ್ದುಗೊಂಡ ಪರವಾನಗಿಗಳು.
ಮಂಜೂರಾಗಿದ್ದರೂ ಪ್ರಾರಂಭವಾಗದೆ ಹಿಂಪಡೆಯಲಾಗಿದ್ದ (Withdrawn/Cancelled) ಲೈಸನ್ಸ್ಗಳು.
ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಸರ್ಕಾರ ನಿಗದಿಪಡಿಸಿದ್ದ ಹೆಚ್ಚಿನ ಠೇವಣಿ ಮೊತ್ತ, ನಿರ್ಬಂಧಿತ ಷರತ್ತುಗಳು, ಕಠಿಣ ನಿಯಮಾವಳಿಗಳು ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ಮದ್ಯ ಮಾರಾಟ ವ್ಯವಹಾರದಲ್ಲಿನ ಸ್ಪರ್ಧೆಯು ಉದ್ಯಮಿಗಳು ಹಿಂದೇಟು ಹಾಕಲು ಪ್ರಮುಖ ಕಾರಣವಾಗಿದೆ. ಪ್ರಮುಖ ವಾಣಿಜ್ಯ ನಗರಗಳ ಕೆಲವೇ ಲೈಸನ್ಸ್ಗಳಿಗೆ ಮಾತ್ರ ಬಿಡ್ ಬಂದಿದ್ದು, ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳ ಲೈಸನ್ಸ್ಗಳನ್ನು ಯಾರೂ ಮುಟ್ಟಿಲ್ಲ ಎನ್ನಲಾಗಿದೆ.
ಒಟ್ಟಾರೆಯಾಗಿ, ಖಜಾನೆ ತುಂಬಿಸಿಕೊಳ್ಳಲು ಅಬಕಾರಿ ಇಲಾಖೆ ಹೆಣೆದಿದ್ದ ಮಾಸ್ಟರ್ ಪ್ಲಾನ್ ಸಂಪೂರ್ಣ ಹಳ್ಳ ಹಿಡಿದಿದ್ದು, ಉಳಿದ 449 ಲೈಸನ್ಸ್ಗಳ ಭವಿಷ್ಯವೇನು ಎಂಬ ಬಗ್ಗೆ ಸರ್ಕಾರ ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ