
ಬೆಂಗಳೂರು (ಜು.19): ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ (Monsoon Rain) ಕೈಕೊಟ್ಟಿದ್ದು, ಕರ್ನಾಟಕವು ಭೀಕರ ಬರಗಾಲದ (Drought Situation) ಛಾಯೆಯಲ್ಲಿದೆ. ಸಚಿವ ಸಂಪುಟ ಸಭೆಯ (Cabinet Meeting) ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪ್ರಸ್ತುತ ಜಲಕ್ಷಾಮ ಮತ್ತು ಮಳೆ ಕೊರತೆಯ ಆತಂಕಕಾರಿ ವರದಿಯನ್ನು ಬಿಚ್ಚಿಟ್ಟಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಸುಮಾರು 60% ರಷ್ಟು ಮಳೆ ಕಡಿಮೆಯಾಗಿದೆ (Rainfall Deficit). ಒಟ್ಟು 178 ತಾಲೂಕುಗಳಲ್ಲಿ ಮಳೆಯ ತೀವ್ರ ಕೊರತೆ ಕಾಣಿಸಿಕೊಂಡಿದ್ದರೆ, 158 ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ (Reservoirs) ಕೇವಲ 40% ರಷ್ಟು ಮಾತ್ರ ನೀರು ಸಂಗ್ರಹವಿದೆ. ಕೃಷ್ಣಾ ನದಿ (Krishna River) ಪಾತ್ರದ ಜಲಾಶಯಗಳಲ್ಲಿ 48% ನೀರಿದ್ದರೆ, ರಾಜ್ಯದ ಒಟ್ಟಾರೆ ಸರಾಸರಿ ನೀರಿನ ಮಟ್ಟ 40% ಮಾತ್ರ ಇದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಜಲಾಶಯಗಳಲ್ಲಿರುವ ನೀರು ಕೇವಲ ಕುಡಿಯುವ ಉದ್ದೇಶಕ್ಕೆ (Drinking Water) ಮಾತ್ರ ಸಾಕಾಗುವಷ್ಟಿದೆ. "ಈಗಾಗಲೇ ಮಂಡ್ಯ (Mandya) ಭಾಗಕ್ಕೆ ಕುಡಿಯುವ ನೀರಿಗಾಗಿ ಮಾತ್ರ ನೀರು ಬಿಡಲಾಗಿದೆ. ರೈತರು ಬೆಳೆ ಹಾಕಬೇಡಿ (Don't plant crops) ಎಂದು ಮನವಿ ಮಾಡುತ್ತೇನೆ. ಸುಮ್ಮನೆ ಬೆಳೆ ಹಾಕಿ ನಂತರ ನೀರು ಬಿಡಿ ಎಂದು ಗಲಾಟೆ ಮಾಡಿದರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ" ಎಂದು ಸಿಎಂ ಎಚ್ಚರಿಸಿದ್ದಾರೆ. ಬೆಳಗಾವಿ (Belagavi) ಭಾಗದಲ್ಲೂ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.
ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ (DC) ಖಾತೆಯಲ್ಲಿ ಒಟ್ಟು 329 ಕೋಟಿ ರೂಪಾಯಿ ಹಣವಿದೆ. ಹಣದ ಕೊರತೆ ಬರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಂಎಲ್ಎ (MLA) ಅಧ್ಯಕ್ಷತೆಯಲ್ಲಿ ಸಭೆ ನಡೆಸಿ 1 ಕೋಟಿ ರೂ. ಮೊತ್ತವನ್ನು ತುರ್ತು ಕಾಮಗಾರಿಗಳಿಗೆ ಬಳಸಲು ನಿರ್ದೇಶನ ನೀಡಲಾಗಿದೆ. ‘ಅಧಿಕಾರಿಗಳು ಎಸಿ ರೂಮ್ ಬಿಟ್ಟು ಫೀಲ್ಡ್ಗೆ (Field Visit) ಹೋಗಬೇಕು. ಒಂದು ಬೋರ್ವೆಲ್ (Borewell) ಕೊರೆಸುವಾಗಲೂ ಅಧಿಕಾರಿಗಳು ಸ್ಥಳದಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ನೀರು ಮಿಸ್ ಯೂಸ್ ಆಗಬಾರದು’ ಎಂದು ಸಿಎಂ ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಮುಂದಿನ 15 ದಿನಗಳಲ್ಲಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ (Central Government) ವರದಿ ಸಲ್ಲಿಸಲಾಗುವುದು. ಮೇವು (Fodder) ಲಭ್ಯತೆ ಮತ್ತು ಗೋಶಾಲೆಗಳ (Goshalas) ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಆದೇಶಿಸಲಾಗಿದೆ. ವಿಶೇಷವಾಗಿ ವಿಜಯನಗರ (Vijayanagara) ಜಿಲ್ಲೆಯಲ್ಲಿ ಮಳೆಯೇ ಇಲ್ಲದ ಕಾರಣ ಅಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಹವಾಮಾನ ಮುನ್ಸೂಚನೆ (Weather Forecast) ಪಡೆಯಲು ಡ್ರೋನ್ ಸರ್ವೇ (Drone Survey) ನಡೆಸಲು ಕೃಷಿ ಇಲಾಖೆಗೆ 36 ಕೋಟಿ ರೂ. ಅನುಮೋದನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ