
ಬೆಂಗಳೂರು (ನ.30): ಚಂದ್ರಶೇಖರ್ ಸ್ವಾಮೀಜಿ ಮುಸಲ್ಮಾನರ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು. ಇದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ. ಜಾತಿ, ಧರ್ಮದ ವಿಚಾರದಲ್ಲಿ ಸ್ವಾಮೀಜಿ ಪ್ರವೇಶ ಮಾಡಬಾರದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಚಂದ್ರಶೇಖರ್ ಸ್ವಾಮೀಜಿ ವಿರುದ್ಧ ಕೇಸ್ ದಾಖಲಾಗಿರುವ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆ ಕುರಿತಂತೆ ಈಗಾಗಲೇ ಕ್ಷಮಾಪಣೆ ಕೇಳಿದ್ದಾರೆ, ಸಂತೋಷ. ಆರ್ ಅಶೋಕ್ ಬೆಂಕಿ ಇಟ್ಟು ಬೀಡಿ ಸೇದಲು ಹೊರಟಿದ್ದಾರೆ. 'ಸ್ವಾಮೀಜಿಯನ್ನ ಮುಟ್ಟಿದ್ರೆ ಸುಮ್ನಿರಲ್ಲ' ಅಂದಿದ್ದಾರೆ. ಆದರೆ ಅಂದು ಬಾಲಬಂಗಾಧರನಾಥ ಸ್ವಾಮೀಜಿ ತಪ್ಪು ಮಾಡಿರಲಿಲ್ಲ. ಆದ್ರೆ ಇದೇ ಜನತಾ ದಳ ಸರ್ಕಾರ ಕೇಸ್ ಹಾಕಿಸಿದ್ರು. ಚಂದ್ರಪ್ಪನವರ ಕೈಯಲ್ಲಿ ಕೇಸ್ ಹಾಕಿಸಿದ್ರು.ಬೇಲ್ ತೆಗೆದುಕೊಳ್ಳುವ ಪರಿಸ್ಥಿತಿ ಬಂತು. ಹತ್ತಾರು ವರ್ಷ ಕೇಸ್ ನಡೀತು. ಆಗ ಅಶೋಕ್ ಎಲ್ಲಿ ಹೋಗಿದ್ದ? ಈಗ ಮಾತನಾಡ್ತಿರೋರು ಎಲ್ಲಿ ಹೋಗಿದ್ರು? ಕಾನೂನು ಎಲ್ಲರಿಗೂ ಒಂದೇ. ಇದು ದಾಖಲೆಯಲ್ಲಿದೆ ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.
ಚಂದ್ರಶೇಖರ ಸ್ವಾಮೀಜಿ ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ ಎಚ್ಚರಿಕೆ
ನಾನೇನು ಒಕ್ಕಲಿಗ ಸಮುದಾಯ ಬಳಸಿಕೊಳ್ಳಬೇಕಿಲ್ಲ. ನಾನು ಅದೇ ಸಮುದಾಯದಲ್ಲಿ ಹುಟ್ಟಿದ್ದೇನೆ. ಎಲ್ಲ ಜಾತಿ, ಧರ್ಮಕ್ಕೆ ಗೌರವ ಕೊಡಬೇಕು. ಸಂವಿಧಾನ ನಮ್ಮ ಮೂಲ ಗ್ರಂಥ. ಯಾರ ಹಕ್ಕು ಮತ್ತು ಸಮುದಾಯದ ಬಗ್ಗೆ ಮಾತನಾಡಬಾರದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ