
ಬೆಂಗಳೂರು (ಜು.5): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. SCSP/TSP ಸಭೆಯ ಬಳಿಕ ಸಚಿವ ಮಹದೇವಪ್ಪ ಅವರೊಂದಿಗೆ ನೇರವಾಗಿ ವಸತಿ ಶಾಲೆಗೆ ಭೇಟಿ ನೀಡಿದರು. ಶಾಲೆಯ ವ್ಯವಸ್ಥೆ ಕುರಿತು ಮಕ್ಕಳಿಂದ, ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.
ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ವಸತಿ ಶಾಲೆಯ ಭೋಜನ ಕೊಠಡಿ ಪರಿಶೀಲಿಸಿದರು. ಆ ವೇಳೆ ಮಧ್ಹಾಹ್ನ ಊಟದ ಸಮಯವಾಗಿದ್ದರಿಂದ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ(HC mahadevappa) ಅವರೊಂದಿಗೆ ವಸತಿ ಶಾಲೆಯಲ್ಲೇ ಮಧ್ಯಾಹ್ನದ ಬಿಸಿಯೂಟ ಸೇವಿಸಿದರು.
ಚಾಮರಾಜಪೇಟೆ ಮೊರಾರ್ಜಿ ವಸತಿ ಶಾಲೆಗೆ ದಿಢೀರ್ ಭೇಟಿ; ಕನ್ನಡ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ!
ಮುದ್ದೆ, ತರಕಾರಿ ಸಾಂಬಾರ್, ಹಪ್ಪಳ, ಮೆಣಸಿನಕಾಯಿ ಮಿರ್ಚಿ, ಮೈಸೂರು ಪಾಕ್ ಸವಿದರು. ಈ ವೇಳೆ 'ಮುದ್ದೆ ಇನ್ನೂ ಸರಿಯಾಗಿ ಬೇಯಿಸಬೇಕಮ್ಮ, ಯಾರು ಮುದ್ದೆ ಬೇಯಿಸಿದ್ದು, ಬಾರಮ್ಮ ಇಲ್ಲಿ ಅರ್ಧಂಬರ್ಧ ಬೆಂದಿದೆ ಇನ್ನೂ ಚೆನ್ನಾಗಿ ಬೇಯಿಸಬೇಕು ಎಂದರು. ದಿನಾ ಹಿಂಗಾ ಮಾಡ್ತಿರಾ? ಎಂದು ಪ್ರಶ್ನಿಸಿದ ಸಿಎಂ ಇನ್ಮೇಲೆ ಚೆನ್ನಾಗಿ ಅಡುಗೆ ಮಾಡ್ತಿನಿ ಎಂದ ಅಡುಗೆ ಸಹಾಯಕಿ. ಮದ್ಯಾಹ್ನ ಊಟ ಮುಗಿಸಿ ತೆರಳಿದ ಸಿಎಂ ಈ ವೇಳೆ ಚಪ್ಪಾಳೆ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯರ(CM Siddaramaiah)ನ್ನ ಮಕ್ಕಳು ಬೀಳ್ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ