
ಚಿಕ್ಕಮಗಳೂರು : ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗುತ್ತಿದ್ದು, ಚದುರಂಗದಾಟದ ನಡುವೆ ಸಿಎಂ ಕುಮಾರಸ್ವಾಮಿ ಶುಕ್ರವಾರ ಫೆ. 8ರಂದು ಶೃಂಗೇರಿ ಶಾರದಾಂಬೆಯ ದರ್ಶನ ಪಡೆಯಲು ತೆರಳುವ ಸಾಧ್ಯತೆ ಇದೆ.
ಅಧಿಕಾರಕ್ಕೆ ಏರುವ ಮುನ್ನ ಹಾಗೂ ಅಧಿಕಾರಕ್ಕೆ ಏರಿದ ಬಳಿಕವೂ ಹಲವು ಬಾರಿ ಶೃಂಗೇರಿ ಶಾರದಾಂಬೆ ದರ್ಶನ ಪಡೆದಿದ್ದ ಸಿಎಂ ಇದೀಗ ಮತ್ತೆ ಶಾರದಾಂಬೆ ಮೊರೆ ಹೊಗಲು ಸಿದ್ಧರಾಗಿದ್ದಾರೆ.
ಈ ಹಿಂದೆ ಗೌಡರ ಕುಟುಂಬದಿಂದ ಅತಿರುದ್ರ ಮಹಾಯಾಗ ನಡೆಸಿದ್ದು, ಸಿಎಂ ಪಟ್ಟಕ್ಕೇರಿದ ಬಳಿಕವೇ ಐದು ಬಾರಿ ಶೃಂಗೇರಿಗೆ ತೆರಳಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಪ್ರತಿಶೂಲಿನಿ ಯಾಗ ಮಾಡಿದ್ದರು.
ಪ್ರತೀ ಬಾರಿ ದೇಗುಲಕ್ಕೆ ಆಗಮಿಸದಾಗಲೆಲ್ಲಾ ವಿಶೇಷ ಪೂಜೆ ಕೈಗೊಳ್ಳುವ ಸಿಎಂ ಶುಕ್ರವಾರ [ಫೆ.8ರ] ಸಂಜೆ ವೇಳೆಗೆ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆ ಇದೆ.
ಕಳೆದ ಬಾರಿಯೂ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಿದ್ದ ವೇಳೆ ಶೃಂಗೇರಿಗೆ ತೆರಳಿದ್ದು, ಸದ್ಯ ರಾಜ್ಯ ರಾಜಕೀಯದ ಚದುರಂಗದಾಟದಿಂದ ಕಂಗಾಲಾಗಿದ ಸಿಎಂ ದೇವರ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ