ಆರೆಸ್ಸೆಸ್‌ ಪ್ರಾರ್ಥನೆಯಲ್ಲಿ ಬಿಎಸ್‌ವೈ ಭಾಗಿ!

By Kannadaprabha NewsFirst Published Apr 13, 2020, 9:21 AM IST
Highlights

ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್‌)ದ ‘ಪ್ರಾಂತ ಪ್ರಾರ್ಥನಾ ದಿವಸ್‌’ | ಆರೆಸ್ಸೆಸ್‌ ಪ್ರಾರ್ಥನೆಯಲ್ಲಿ ಬಿಎಸ್‌ವೈ ಭಾಗಿ

ಬೆಂಗಳೂರು(ಏ.13): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್‌)ದ ‘ಪ್ರಾಂತ ಪ್ರಾರ್ಥನಾ ದಿವಸ್‌’ ಅಂಗವಾಗಿ ತಮ್ಮ ನಿವಾಸದಲ್ಲಿಯೇ ಆರ್‌ಎಸ್‌ಎಸ್‌ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಾರ್ಥನಾ ದಿನದ ಅಂಗವಾಗಿ ಗೃಹ ಕಚೇರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಸುಸಂದರ್ಭ. pic.twitter.com/60dRtx4w0y

— B.S. Yediyurappa (@BSYBJP)

ಕರ್ನಾಟಕ ದಕ್ಷಿಣ ಭಾಗದಲ್ಲಿ ಭಾನುವಾರ ಆರ್‌ಎಸ್‌ಎಸ್‌ನ ಎಲ್ಲಾ ಸ್ವಯಂ ಸೇವಕರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಮಾಡಬೇಕು ಎಂಬ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕಾವೇರಿ ನಿವಾಸದಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಅಲ್ಲದೆ, ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆಯಾದ ‘ಸದಾ ವತ್ಸಲೇ ಮಾತೃಭೂಮಿ’ಯನ್ನು ಹಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಾರ್ಥನಾ ದಿನದ ವಿಶೇಷವಾಗಿ ನಮ್ಮ ನಿವಾಸದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ದೇಶದ ಐಕ್ಯತೆಯನ್ನು ಗುರಿಯಾಗಿಸಿಕೊಂಡು ಸಾಗುತ್ತಿರುವ ಸಂಘದೊಂದಿಗೆ ಸ್ವಪ್ರೇರಣೆ, ಸ್ವಯಂ ಸ್ಫೂರ್ತಿಯಿಂದ ರಾಷ್ಟ್ರ, ಸಮಾಜದ ಸೇವೆ ಮಾಡುವ ಸಂಕಲ್ಪ ಮಾಡೋಣ. pic.twitter.com/y8O6mJdauG

— B.S. Yediyurappa (@BSYBJP)

Latest Videos

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರೇಗೌಡ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಉಪಸ್ಥಿತರಿದ್ದರು.

click me!