ಶಾಸಕ ಹಾಲಪ್ಪ‌, ಐವಾನ್‌ಗೆ ಸೋಂಕು, ಐವಾನ್‌ ಜತೆ 2 ದಿನ ಇದ್ದ ಡಿಕೆ​ಶಿಗೂ ಕ್ವಾರಂಟೈನ್‌?

Kannadaprabha News   | Asianet News
Published : Aug 02, 2020, 11:05 AM ISTUpdated : Aug 02, 2020, 11:33 AM IST
ಶಾಸಕ ಹಾಲಪ್ಪ‌,  ಐವಾನ್‌ಗೆ ಸೋಂಕು, ಐವಾನ್‌ ಜತೆ 2 ದಿನ ಇದ್ದ ಡಿಕೆ​ಶಿಗೂ ಕ್ವಾರಂಟೈನ್‌?

ಸಾರಾಂಶ

ಸಚಿವ ಬಿ.ಸಿ.ಪಾಟೀಲ್‌ಗೆ ಕೊರೋ​ನಾ ಸೋಂಕು ದೃಢಪಟ್ಟಬೆನ್ನಲ್ಲೇ ಇದೀಗ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಅವರಿಗೂ ಕೋವಿಡ್‌-19 ತಗು​ಲಿ​ರು​ವುದು ಶನಿ​ವಾರ ಖಚಿ​ತ​ಪ​ಟ್ಟಿ​ದೆ.

ಬೆಂಗಳೂರು(ಆ.02): ಸಚಿವ ಬಿ.ಸಿ.ಪಾಟೀಲ್‌ಗೆ ಕೊರೋ​ನಾ ಸೋಂಕು ದೃಢಪಟ್ಟಬೆನ್ನಲ್ಲೇ ಇದೀಗ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಅವರಿಗೂ ಕೋವಿಡ್‌-19 ತಗು​ಲಿ​ರು​ವುದು ಶನಿ​ವಾರ ಖಚಿ​ತ​ಪ​ಟ್ಟಿ​ದೆ.

ಇದು ಜಿಲ್ಲೆಯ ಇತರೆ ಜನ​ಪ್ರ​ತಿ​ನಿ​ಧಿ​ಗ​ಳಲ್ಲೂ ಆತಂಕ ಸೃಷ್ಟಿ​ಸಿ​ದೆ. ಏತ​ನ್ಮಧ್ಯೆ, ವಿಧಾನ ಪರಿ​ಷತ್‌ ಮಾಜಿ ಸದಸ್ಯ ಐವಾನ್‌ ಡಿಸೋಜಾ ಅವ​ರಿಗೂ ಕೊರೋನಾ ದೃಢ​ಪ​ಟ್ಟಿದ್ದು, ಇವ​ರ ಜತೆಗೆ 2 ದಿನ ಇದ್ದ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ. ಶಿವ​ಕು​ಮಾರ್‌ ಅವರಿಗೆ ಕ್ವಾರಂಟೈ​ನ್‌​ಗೆ ಒಳ​ಗಾ​ಗ​ಬೇ​ಕಾದ ಆತಂಕ ಶುರು​ವಾ​ಗಿ​ದೆ.

ಹಿರಿಯ ಕಾಂಗ್ರೆಸ್ ಮುಖಂಡರ ಭೇಟಿ, ಮಂಗಳೂರಲ್ಲಿ ಡಿಕೆಶಿ: ಇಲ್ಲಿವೆ ಫೋಟೋಸ್

ಕೆಲ ದಿನ​ಗಳ ಹಿಂದೆ ಹಾವೇರಿ ಜಿಲ್ಲಾ ಉಸ್ತು​ವಾರಿ ಸಚಿವ ಬಿ.ಸಿ.​ಪಾ​ಟೀಲ ಅವರು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅವರ ಜತೆಗೆ ಹಾಲಪ್ಪ ಆಚಾರ್‌ ಸೇರಿ ಜಿಲ್ಲೆಯ ಹಲವು ಜನ​ಪ್ರ​ತಿ​ನಿ​ಧಿ​ಗಳು ಇದ್ದ​ರು. ಶುಕ್ರ​ವಾ​ರ​ವಷ್ಟೇ ಬಿ.ಸಿ.​ಪಾ​ಟೀ​ಲ​ರಿಗೆ ಸೋಂಕು ದೃಢ​ಪ​ಟ್ಟಿದ್ದು, ಇದರ ಬೆನ್ನಲ್ಲೇ ಈಗ ಹಾಲಪ್ಪ ಆಚಾರ್‌ಗೂ ಸೋಂಕು ದೃಢ​ಪ​ಟ್ಟಿರುವುದು ಆತಂಕಕ್ಕೆ ಕಾರ​ಣ​ವಾ​ಗಿದೆ.

ಕಾಂಗ್ರೆಸ್‌ ನಾಯಕನಿಗೆ ಕೊರೋನಾ: ಡಿಕೆ ಶಿವಕುಮಾರ್‌ಗೆ ಶುರುವಾಯ್ತು ಟೆನ್ಷನ್

ಡಿಕೆ​ಶಿಗೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆ ಮಾಜಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹಾಗೂ ಅವರ ಪತ್ನಿ ಡಾ.ಕವಿತಾ ಅವರಿಗೂ ಕೊರೋನಾ ಪಾಸಿಟಿವ್‌ ವರದಿ ಬಂದಿದೆ. ಇದ​ರಿಂದ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ದಕ್ಷಿಣ ಕನ್ನ​ಡದ ಕಾಂಗ್ರೆಸ್‌ ಮುಖಂಡರು ಕ್ವಾರಂಟೈ​ನ್‌ಗೆ ಒಳ​ಗಾ​ಗ​ಬೇ​ಕಾದ ಆತಂಕ ಶುರು​ವಾ​ಗಿದೆ. ಡಿ.ಕೆ.​ಶಿ​ವ​ಕು​ಮಾರ್‌ ಶುಕ್ರ​ವಾ​ರದಿಂದ 2 ದಿನ ದಕ್ಷಿಣ ಕನ್ನಡ ಪ್ರವಾ​ಸದಲ್ಲಿದ್ದ​ರು. ಈ ವೇಳೆ ಐವಾನ್‌ ಡಿಸೋಜ ಅವರ ಜತೆಗೇ ಇದ್ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ
ವಾಕ್‌ ಸ್ವಾತಂತ್ರ್ಯ ಕಡಿವಾಣಕ್ಕೆ ದ್ವೇಷ ಭಾಷಣ ಮಸೂದೆ: ಆರ್.ಅಶೋಕ್ ಕಿಡಿ