ಭಾರತೀಯತೆ ಅಪ್ಪಿಕೊಂಡಿದ್ದ ಸಿಸರ್ ಬಾಬಾ ಇನ್ನಿಲ್ಲ!

Published : Dec 29, 2018, 07:44 PM IST
ಭಾರತೀಯತೆ ಅಪ್ಪಿಕೊಂಡಿದ್ದ ಸಿಸರ್ ಬಾಬಾ ಇನ್ನಿಲ್ಲ!

ಸಾರಾಂಶ

ಭಾರತದಲ್ಲೇ ಹುಟ್ಟುವ ಅದೆಷ್ಟೋ ಜನ ದೇಶಿ ಸಂಸ್ಕೃತಿ, ಆಚಾರ- ವಿಚಾರ ವಿರೋಧಿಸುತ್ತಾರೆ. ಆದರೆ, ಇಟಲಿಯಿಂದ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದ  ಸಿಸರ್ ಬಾಬಾ ನಿನ್ನೆ ಮೃತಪಟ್ಟಿದ್ದಾರೆ. 

ಕೊಪ್ಪಳ(ಡಿ.29): ಅನಾರೋಗ್ಯದ ಹಿನ್ನಲೆಯಲ್ಲಿ ಇಟಲಿ‌ ಮೂಲದ ಸಿಸರ್ ಬಾಬಾ ನಿನ್ನೆ ರಾತ್ರಿ ಕೊಪ್ಪಳದ ಗಂಗಾವತಿಯಲ್ಲಿ ಮೃತಪಟ್ಟಿದ್ದಾರೆ.

ಭಾರತದಲ್ಲೇ ಹುಟ್ಟುವ ಅದೆಷ್ಟೋ ಜನ ದೇಶಿ ಸಂಸ್ಕೃತಿ, ಆಚಾರ- ವಿಚಾರ ವಿರೋಧಿಸುತ್ತಾರೆ. ಆದರೆ, ಇಟಲಿಯಿಂದ ಭಾರತಕ್ಕೆ ಪ್ರವಾಸಕ್ಕೆಂದು ಬಂದು ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದ  ಸಿಸರ್ ಬಾಬಾ ನಿನ್ನೆ ಮೃತಪಟ್ಟಿದ್ದಾರೆ. 

ಮೂಲತಃ ಇಟಲಿಯ‌ ರೋಮ್ ನಗರದ ಈ ಬಾಬಾ, ಹಿಂದೂ ಧರ್ಮದಿಂದ ಪ್ರೇರಣೆಗೊಂಡು ಸನ್ಯಾಸ ದೀಕ್ಷೆ ಪಡೆದಿದ್ದರಂತೆ.‌  ಅಲ್ಲದೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಋಷಿಮುಖ ಪರ್ವತದಲ್ಲಿ ವಾಸವಾಗಿದ್ದ ಸಿಸರ್ ಹೆಸರಿನ ಬಾಬಾ ನಾಗಸಾಧುಗಳನ್ನು ನಾಚಿಸುವಂತೆ ಶಿವ ಪೂಜೆ ಮಾಡ್ತಾ ಇದ್ದರು. 

"

ಇನ್ನು ಕಳೆದ 30 ವರ್ಷದಿಂದ ಇಲ್ಲೇ ವಾಸವಾಗಿರುವ‌ ಬಾಬಾ, ತಾವು ಮೃತಪಟ್ಟರೆ ಭಾರತದಲ್ಲೇ ಅಂತ್ಯ ಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದರಂತೆ.‌  

ಈ ಹಿನ್ನೆಲೆಯಲ್ಲಿ ಗಂಗಾವತಿ ಪೊಲೀಸರು ಇಟಲಿ ರಾಯಭಾರಿ ಕಚೇರಿಗೆ ಕರೆ ಮಾಡಿ, ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ವಾರಾಂತ್ಯದ ರಜೆ ಇರುವುದರಿಂದ ಸೋಮವಾರ ಕಚೇರಿ ಆರಂಭವಾದ ಬಳಿಕ ಮಾತುಕತೆ ನಡೆಸಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!
'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!