ಇಸ್ಲಾಂ ಎಲ್ಲ ಧರ್ಮದ ಜೊತೆಗೆ ಹೊಂದಿಕೊಂಡು ಹೋಗುವುದನ್ನು ಕಲಿಸುತ್ತೆ: ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ

Published : Nov 27, 2023, 03:05 PM ISTUpdated : Nov 27, 2023, 03:10 PM IST
ಇಸ್ಲಾಂ ಎಲ್ಲ ಧರ್ಮದ ಜೊತೆಗೆ ಹೊಂದಿಕೊಂಡು ಹೋಗುವುದನ್ನು ಕಲಿಸುತ್ತೆ: ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ

ಸಾರಾಂಶ

ನಮ್ಮ ರಾಜ್ಯದಲ್ಲಿ ಸಾಕಷ್ಟು ಮದರಸಗಳು ನಡೆಯುತ್ತಿವೆ. ಅವೆಲ್ಲವುಗಳು ನಮ್ಮ ಕಂಟ್ರೋಲ್‌ನಲ್ಲಿರುತ್ತವೆ. ನಾವು ಅವರಿಗೆ ಅನುಮತಿ ಕೊಟ್ಟಿರುತ್ತವೆ. ಆದರೆ ಬೆಂಗಳೂರಿನ ದರೂಲ್ ಉಲೂಮ್ ಮದರಸಾ ನಮ್ಮಲ್ಲಿ ನೊಂದಾಣಿ ಆಗಿರಲ್ಲ. ಮದರಸಗಳ ಕೇಂದ್ರ ಸ್ಥಾನಗಳ ಅಧ್ಯಕ್ಷರಾದ ಅಮಿರತ್ ಶರೀಯತ್ ಅವರ ವ್ಯಾಪ್ತಿಗೆ ಬರುತ್ತೆ ಎಂದು ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ ಸ್ಪಷ್ಟನೆ ನೀಡಿದರು.

ಚಿತ್ರದುರ್ಗ (ನ.27): ನಮ್ಮ ರಾಜ್ಯದಲ್ಲಿ ಸಾಕಷ್ಟು ಮದರಸಗಳು ನಡೆಯುತ್ತಿವೆ. ಅವೆಲ್ಲವುಗಳು ನಮ್ಮ ಕಂಟ್ರೋಲ್‌ನಲ್ಲಿರುತ್ತವೆ. ನಾವು ಅವರಿಗೆ ಅನುಮತಿ ಕೊಟ್ಟಿರುತ್ತವೆ. ಆದರೆ ಬೆಂಗಳೂರಿನ ದರೂಲ್ ಉಲೂಮ್ ಮದರಸಾ ನಮ್ಮಲ್ಲಿ ನೊಂದಾಣಿ ಆಗಿರಲ್ಲ. ಮದರಸಗಳ ಕೇಂದ್ರ ಸ್ಥಾನಗಳ ಅಧ್ಯಕ್ಷರಾದ ಅಮಿರತ್ ಶರೀಯತ್ ಅವರ ವ್ಯಾಪ್ತಿಗೆ ಬರುತ್ತೆ ಎಂದು ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ ಅನ್ವರ್ ಬಾಷಾ ಸ್ಪಷ್ಟನೆ ನೀಡಿದರು.

ದರೂಲ್ ಉಲೂಮ್ ಅನಾಥಾಶ್ರಮದಲ್ಲಿ ತಾಲಿಬಾನ್ ಶಿಕ್ಷಣ ನಡೆಸುತ್ತಿರುವ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷ ಗಂಭೀರ ಆರೋಪ ಹಿನ್ನೆಲೆ ಈ ಸಂಬಂಧ ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಅಂದುಕೊಂಡ ಹಾಗೆ ಯಾವುದೇ ಅಹಿತಕರ ಘಟನೆ ಅಲ್ಲಿ ನಡೆಯುತ್ತಿಲ್ಲ ಎಂಬುದು ನಮ್ಮ ನಂಬಿಕೆ. ಅವರ ಒಳ ಜಗಳದಿಂದ ಈ ರೀತಿ ಅಗಿದೆ ಅಷ್ಟೆ. ಇದರ ಹೊರತಾಗಿ ಯಾವ ತಾಲಿಬಾನ್ ಶಿಕ್ಷಣವನ್ನು ನೀಡಲಾಗ್ತಿಲ್ಲ ಇವೆಲ್ಲಾ ಸುಳ್ಳು ಎಂದರು.

ಅನಾಥಾಶ್ರಮ ಹೆಸರಲ್ಲಿ ತಾಲಿಬಾನ್ ಮಾದರಿ ಶಿಕ್ಷಣ ನೀಡ್ತಿರೋ ಆರೋಪ ; ಆ ಬಗ್ಗೆ ನನಗೆ ಗೊತ್ತಿಲ್ಲ ಎಂದ ಗೃಹಸಚಿವ! 

ಮದರಸಾದಲ್ಲಿ ಇಸ್ಲಾಂ ಎಲ್ಲ ಧರ್ಮಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದನ್ನು ಕಲಿಸುತ್ತೆ. ತಾಲಿಬಾನ್ ವಿಚಾರ, ಇನ್ನೊಬ್ಬರ ಬಗ್ಗೆ ವಿರೋಧಿ ಚಟುವಟಿಕೆ ಮಾಡುವುದು ನಮ್ಮ ಧರ್ಮದಲ್ಲಿ ಇಲ್ಲ. ಬಹಳಷ್ಟು ಮದರಸಗಳು ರಾಜ್ಯದಲ್ಲಿ ಈ ರೀತಿ ನಡೆಸುತ್ತಿದ್ದಾರೆ. ಅಮೀರ್ ಶರಿಯತ್ ನವರು ಅವರ ವ್ಯಾಪ್ತಿಯಲ್ಲಿ ಸಾಕಷ್ಟು ನಡೆಸುತ್ತಿವೆ. ನಮ್ಮ ಕಂಟ್ರೋಲ್‌ನಲ್ಲಿ ಇರಬೇಕು ಅಂತವುಗಳ ಮೇಲೆ ನಾವು ಜವಾಬ್ದಾರಿಯಾಗಿರ್ತೀವಿ. ಬೇರೆಯವರು ಯಾರು ಮದರಸಾಗಳನ್ನು ನಡೆಸ್ತಿದ್ದಾರೋ ಅವರು ಜವಾಬ್ದಾರರಾಗಿರ್ತಾರೆ. ನಮ್ಮ ಇಸ್ಲಾಂ ಶಿಕ್ಷಣದ ಜೊತೆ ದಿನನಿತ್ಯದ ಶಿಕ್ಷಣ ಕೂಡ ಎಲ್ಲಾ ಮದರಸಗಳಲ್ಲಿ ಅಳವಡಿಸಿಕೊಂಡಿದ್ದಾರೆ. ನಮ್ಮ ಜಿಲ್ಲೆಯಲ್ಲಿರುವ ಮದರಸಾದಲ್ಲಿ ಎಲ್ಲಾ ರೀತಿಯ ಶಿಕ್ಷಣ ಕೊಡಲಾಗ್ತಿದೆ.ಇತ್ತೀಚೆಗೆ ಮದರಸಾಗಳಲ್ಲಿ ಒಳ್ಳೆಯ ವಿದ್ಯಾಭ್ಯಾಸ ಕೂಡ ಸಿಗ್ತಿದೆ ಎಂದರು.

ಸುಳ್ಳುಸುದ್ದಿ, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಸಚಿವ ಪರಮೇಶ್ವರ್ ಸೂಚನೆ

 ನಮ್ಮ ಸಚಿವರಾದ ಜಮೀರ್ ಅಹ್ಮದ್ ಅವರ ಜೊತೆ ಚರ್ಚಿಸಿ ಅಲ್ಲಿಗೆ ಭೇಟಿ ನೀಡುತ್ತೇವೆ. ಅಲ್ಲಿ ಏನಾದ್ರು ತಪ್ಪುಗಳಿದ್ರೆ ಅವುಗಳನ್ನು ಸರಿಪಡಿಸುತ್ತೇವೆ. ಸಂಬಂಧಿಕರ ಮಧ್ಯೆ ವ್ಯತ್ಯಾಸ ಆಗಿರೋದ್ರಿಂದ ಈ ಘಟನೆ ಬೆಳಕಿಗೆ ಬಂದಿದೆ. ಮಕ್ಕಳ ಹಕ್ಕುಗಳ ಅಧ್ಯಕ್ಷರು ಬರೋದಕ್ಕೆ ಇವರೇ ಮಾಹಿತಿ ಕೊಟ್ಟು ಕರೆಸಿದ್ದಾರೆ ಎನ್ನುವ ಮಾಹಿತಿಯ ಇದೆ. ನಾವು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಎಲ್ಲವನ್ನು ವಿವರವಾಗಿ ಹೇಳುತ್ತೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ