
ಉಡುಪಿ (ಸೆ.3) : ಕಳೆದೆರಡು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬೋಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೋಟ್ ನ ಸ್ಟೋರೇಜ್ ನಲ್ಲಿರುವ ಮೀನು ಖಾಲಿ ಮಾಡುತ್ತಿರುವಾಗ ಮೀನಿನ ವಿಷಾನಿಲದಿಂದಾಗಿ ಉಸಿರಾಟದ ಸಮಸ್ಯೆಯಾಗಿ ಪ್ರಜ್ಞೆ ತಪ್ಪುವ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿವೆ.
ಇಂತಹ ಘಟನೆಯಿಂದಾಗಿ ಎರಡು ದಿನದ ಅಂತರದಲ್ಲಿ ನಾಲ್ಕು ಜನರು ಸಂಕಷ್ಟಕ್ಕೆಡಗಿದ್ದರು . ಅವರ ಜೀವವನ್ನು ಉಳಿಸುವಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆ(eshwar malpe) ಯವರು ಯಶಸ್ವಿಯಾದರು. ಸಕಾಲದಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.
ಇವತ್ತು ಕೂಡ ಇಂತಹದೇ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ. ಪ್ರಜ್ಞೆಹೀನನಾಗಿ ಬಿದ್ದಿದ್ದ ಯುವಕನನ್ನು ಮೇಲಕೆತ್ತಲು ಈಶ್ವರ್ ಮಲ್ಪೆ ಬೋಟ್ ನ ಸ್ಟೋರೇಜ್ ಗೆ ಇಳಿದಿದ್ದು ,ವಿಷಾನಿಲದಿಂದಾಗಿ ಈಶ್ವರ್ ಮಲ್ಪೆಯವರೇ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥಗೊಂಡು ಪ್ರಜ್ನೆತಪ್ಪಿ ಬಿದ್ದು ಕೆಲಕಾಲ ಬೋಟ್ ನಲ್ಲಿ ಸಾವರಿಸಿಕೊಂಡು ಕಾರ್ಯಾಚರಣೆಯನ್ನು ಮುಂದುವರಿಸಬೇಕಾಯ್ತು.
ಮಲ್ಪೆ ಬಂದರು: ನೀರಿನ ಮಧ್ಯೆ ವರ್ಷದಿಂದ ಸಿಲುಕಿಕೊಂಡಿದ್ದ ನಾಯಿಗಳ ರಕ್ಷಣೆ!
ಒಬ್ಬರ ಜೀವವನ್ನು ರಕ್ಷಿಸಲು ಹೋಗಿ , ತನ್ನ ಜೀವಕ್ಕೆ ತೊಂದರೆಯಾದರೂ ಕೂಡ ಹಿಂದೇಟು ಹಾಕದೆ ಆ ಯುವಕನನ್ನು ಮೇಲಕ್ಕೆತ್ತಿ ತನ್ನ ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಸಾಗಿಸುವಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಯಶಸ್ವಿಯಾದರು.
ಈಶ್ವರ್ ಮಲ್ಪೆಯವರು ಕೂಡ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಈಗ ಚೇತರಿಸಿಕೊಂಡಿದ್ದಾರೆ. ಮಲ್ಪೆ ಬಂದರಿನಲ್ಲಿ ಮತ್ತೆ ಇಂತಹ ಅನಾಹುತಗಳು ಸಂಭವಿಸುವುದಕ್ಕಿಂತ ಮುನ್ನ , ದಯವಿಟ್ಟು ಕಾರ್ಮಿಕರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ಜನರ ಜೀವಕ್ಕೆ ಅಪಾಯವಾಗದಂತೆ ಸಂಬಂಧಪಟ್ಟವರು ಗಮನಹರಿಸಿ ಎಂದು ಈಶ್ವರ ಮಲ್ಪೆ ಕೋರಿದ್ದಾರೆ.
ಸರ್ಕಾರದ ಸೌಲಭ್ಯ ಪಡೆಯಲು ಕಾರ್ಮಿಕರು ಇ-ಶ್ರಮ್ನಲ್ಲಿ ಹೆಸರು ನೋಂದಾಯಿಸಿ: ಉಡುಪಿ ಡಿಸಿ ವಿದ್ಯಾಕುಮಾರಿ
ಒಮ್ಮೆ ಜೀವವನ್ನು ಕಳೆದುಕೊಂಡರೆ ಆ ಜೀವವನ್ನು ಯಾರಿಂದಲೂ ಹಿಂದಿರುಗಿಸಲು ಸಾಧ್ಯವಿಲ್ಲ. ಹಾಗಾಗಿ ಸೂಕ್ತ ಭದ್ರತಾ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ