
ಬೆಂಗಳೂರು(ಮೇ.10): ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣದ ಸಂತ್ರಸ್ತೆಯರ ನೆರವಿಗೆ ವಿಶೇಷ ತನಿಖಾ ದಳ (ಎಸ್ಐಟಿ) ಆರಂಭಿಸಿರುವ ಸಹಾಯವಾಣಿಗೆ (ಹೆಲ್ಪ್ಲೈನ್) ಈಗ 'ಮಾಹಿತಿದಾರರ' ಕಿರಿಕಿರಿ ಹೆಚ್ಚಾಗಿದೆ.
ಸಹಾಯವಾಣಿಯನ್ನು ಪ್ರಾರಂಭಿಸಿ ಐದು ದಿನಗಳು ಕಳೆದರೂ ಸಹ ಈವರೆಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರು ಯಾರೊಬ್ಬರೂ ಕರೆ ಮಾಡಿ ಎಸ್ ಐಟಿಯನ್ನು ಸಂಪರ್ಕಿಸಿಲ್ಲ. ಆದರೆ ತಮಗೆ ಅಶ್ಲೀಲ ವಿಡಿಯೋಗಳಲ್ಲಿರುವ ಸಂತ್ರಸ್ತೆಯರು ಪರಿಚಿತರು ಎಂದು ಹಲವು ಮಂದಿ ಕರೆ ಮಾಹಿತಿ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ.
Prajwal Revanna Case: ನಾನು ಒಕ್ಕಲಿಗ ನೆಪ ಹೇಳಿ ರಕ್ಷಣೆ ಕೇಳಲ್ಲ: ಎಚ್.ಡಿ.ಕುಮಾರಸ್ವಾಮಿ
ಈ ಮಾಹಿತಿದಾರರು ಅಧಿಕೃತವಾಗಿ ಹೇಳಿಕೆ ನೀಡಲು ಕೂಡಾ ನಿರಾಕರಿಸುತ್ತಿದ್ದಾರೆ. ಸಂತ್ರಸ್ತೆಯರು ಅಲ್ಲಿದ್ದಾರೆ ಇಲ್ಲಿದ್ದಾರೆ ಎಂದು ನೂರಾರು ಕರೆಗಳು ಬಂದಿವೆ. ಆದರೆ ಸಂತ್ರಸ್ತೆಯರನ್ನು ತನಿಖಾ ತಂಡದ ಮುಂದೆ ಕರೆತರಲು ನೆರವಾಗುವಂತೆ ಕೇಳಿದರೆ ಮಾತ್ರ ಮಾಹಿತಿದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಎಸ್ಐಟಿ ಮೂಲಗಳು ಬೇಸರ ವ್ಯಕ್ತಪಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ