
ಬೆಂಗಳೂರು[ಡಿ.18]: ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳ ಹಾರಾಟದ ಮೇಲೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ)ದ ರಾಡಾರ್ಗಳ ಮೂಲಕ ಕಣ್ಣಿಡಲು ಭಾರತೀಯ ವಾಯುಪಡೆ ಮುಂದಾಗಿದೆ. ಈ ಕುರಿತಂತೆ ಅದು ಕೆಐಎಬಿ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದಾಗಿ ಇನ್ನು ಮುಂದೆ ಯಲಹಂಕದಲ್ಲಿರುವ ಭಾರತೀಯ ವಾಯುಪಡೆ ರಾಡಾರ್ಗಳ ಜೊತೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಮೂಲಕವೂ ವಾಯುಪಡೆ ವಿಮಾನಗಳ ಸಂಚಾರದ ಮೇಲೆ ನಿಗಾ ಇಡಲಾಗುವುದು.
ಮಿಲಿಟರಿ ಮತ್ತು ನಾಗರಿಕ ವಿಮಾನ ಸೇವೆಯನ್ನು ಹೀಗೆ ಸಂಜಯೋಜನೆಗೊಳಿಸಿ ಬಳಸುತ್ತಿರುವುದು ಭಾರತದಲ್ಲಿ ಇದೇ ಮೊದಲು. ಯಲಹಂಕ ವಾಯುನೆಲೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಪರಸ್ಪರ ಸಮೀಪದಲ್ಲೇ ಇರುವ ಕಾರಣ, ವಿಮಾನಗಳ ಸಂಚಾರದ ಮೇಲೆ ಅತ್ಯಂತ ಕರಾರುವಾಕ್ ನಿಯಂತ್ರಣ ಹೊಂದಿರುವುದು ಅತ್ಯಗತ್ಯ. ಹೊಸ ಒಪ್ಪಂದದಿಂದಾಗಿ ಎರಡೂ ನಿಲ್ದಾಣಗಳ ಸುಗಮ ಕಾರ್ಯಾಚರಣೆ ಸಾಧ್ಯವಾಗಲಿದೆ.
ಯಲಹಂಕ ವಾಯುನೆಲೆಯಲ್ಲಿ ತರಬೇತಿ ವಿಮಾನಗಳು ಹಾರಾಡುತ್ತಿರುವಾಗ, ಏರ್ಪೋರ್ಟ್ಗೆ ನಾಗರಿಕ ವಿಮಾನಗಳು ಕಾರ್ಯಾರಚಣೆ ನಡೆಸುತ್ತವೆ. ಎರಡಕ್ಕೂ ಪ್ರತ್ಯೇಕ ರಾಡಾರ್ ಇದ್ದರೂ, ಎರಡೂ ರಾಡಾರ್ಗಳ ನಡುವೆ ಸಂಯೋಜನೆ ಇಲ್ಲದಿರುವುದರಿಂದ ಏಕ ಕಾಲಕ್ಕೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಎರಡೂ ರಾಡಾರ್ಗಳನ್ನು ಸಂಯೋಜಿಸುವುದರಿಂದ ಉಭಯ ನಿಲ್ದಾಣಗಳಿಂದ ಹಾರಾಡುವ ಮಾಹಿತಿ ಎರಡೂ ಕಡೆ ಸಿಗಲಿದ್ದು, ಸುಗಮ ಕಾರ್ಯಾಚರಣೆಗೆ ಸಾಧ್ಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ